ಸರ್ಕಾರದ ಆದೇಶ ಪಾಲಿಸದ 5 ವರ್ಷದ ಹಳೆಯ ಕೇಸ್‌: ಗುಜರಾತ್‌ ಕೋರ್ಟ್‌ನಿಂದ ಹಾರ್ದಿಕ್ ಪಟೇಲ್ ಖುಲಾಸೆ

Published : Feb 11, 2023, 11:29 AM ISTUpdated : Feb 11, 2023, 11:33 AM IST
 ಸರ್ಕಾರದ ಆದೇಶ ಪಾಲಿಸದ 5 ವರ್ಷದ ಹಳೆಯ ಕೇಸ್‌: ಗುಜರಾತ್‌ ಕೋರ್ಟ್‌ನಿಂದ ಹಾರ್ದಿಕ್ ಪಟೇಲ್ ಖುಲಾಸೆ

ಸಾರಾಂಶ

ಪ್ರಾಸಿಕ್ಯೂಷನ್ ತನ್ನ ಪ್ರಕರಣವನ್ನು ಸ್ಥಾಪಿಸಲು ವಿಫಲವಾಗಿದೆ ಮತ್ತು ಈಗ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ದೂರುದಾರನಿಗೂ ದೂರಿನ ಎಲ್ಲಾ ವಿವರಗಳ ಬಗ್ಗೆ ತಿಳಿದಿರಲಿಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಜಾಮ್‌ನಗರ (ಫೆಬ್ರವರಿ 11, 2023): ಗುಜರಾತ್‌ ಬಿಜೆಪಿ ಶಾಸಕ ಹಾರ್ದಿಕ್‌ ಪಟೇಲ್‌ ಅವರಿಗೆ ಪ್ರಕರಣವೊಂದರಲ್ಲಿ ರಿಲೀಫ್‌ ಸಿಕ್ಕಿದೆ. ಐದು ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್ ಅವರಿಗೆ ಗುಜರಾತ್‌ನ ನ್ಯಾಯಾಲಯ ಶುಕ್ರವಾರ ದೋಷಮುಕ್ತಗೊಳಿಸಿದೆ. ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗ ಅಧಿಕಾರಿಗಳು ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿ ಸಭೆಯೊಂದರಲ್ಲಿ ರಾಜಕೀಯ ಭಾಷಣ ಮಾಡಿದ ಆರೋಪದಿಂದ ಖುಲಾಸೆ ನೀಡಿದೆ. 

ಗುಜರಾತ್‌ನ ಜಾಮ್‌ನಗರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮನೀಶ್ ನಂದನಿ ಅವರು ಹಾರ್ದಿಕ್‌ ಪಟೇಲ್ ಮತ್ತು ಅಂಕಿತ್ ಘಡಿಯಾ ಎಂಬುವರ ಮೇಲಿದ್ದ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದರು. ಅಲ್ಲದೆ, ಪ್ರಾಸಿಕ್ಯೂಷನ್ ತನ್ನ ಪ್ರಕರಣವನ್ನು ಸ್ಥಾಪಿಸಲು ವಿಫಲವಾಗಿದೆ ಮತ್ತು ಈಗ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ದೂರುದಾರನಿಗೂ ದೂರಿನ ಎಲ್ಲಾ ವಿವರಗಳ ಬಗ್ಗೆ ತಿಳಿದಿರಲಿಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇದನ್ನು ಓದಿ: India Gate: ಹಾರ್ದಿಕ್‌ ಕಾಂಗ್ರೆಸ್‌ ತೊರೆದಿದ್ದು ಯಾಕೆ?

ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ಬ್ಯಾನರ್ ಅಡಿಯಲ್ಲಿ ಪಾಟಿದಾರ್ ಕೋಟಾ ಆಂದೋಲನವನ್ನು ಮುನ್ನಡೆಸಿದ್ದ ಹಾರ್ದಿಕ್‌ ಪಟೇಲ್ ಅವರು ಜಾಮ್‌ನಗರ ಜಿಲ್ಲೆಯ ಧುತಾರ್‌ಪುರ ಗ್ರಾಮದಲ್ಲಿ ನವೆಂಬರ್ 4, 2017 ರಂದು ನಡೆದ ರ್‍ಯಾಲಿಯಲ್ಲಿ "ರಾಜಕೀಯ" ಭಾಷಣ ಮಾಡಿದರು. ಒಂದು ತಿಂಗಳ ನಂತರ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಿತು ಎಂದು ಜಾಮ್‌ನಗರ 'ಎ' ಡಿವಿಷನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ದಾಖಲಾಗಿತ್ತು.

ಈ ಕಾರ್ಯಕ್ರಮ ನಡೆಯುವ ಮೊದಲು, ಹಾರ್ದಿಕ್‌ ಪಟೇಲ್ ಅವರು ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗಳ ಕುರಿತು ಜನಸಂದಣಿಯನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂಬ ಕಾರಣಕ್ಕಾಗಿ ಈ ಬಗ್ಗೆ ಅನುಮತಿ ಪಡೆಯಲು ಮಮ್ಲತಾರ್ (ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್) ಕಚೇರಿಯನ್ನು ಅಂಕಿತ್ ಘಡಿಯಾ ಸಂಪರ್ಕಿಸಿದ್ದರು. ಆ ಹಿನ್ನೆಲೆಯಲ್ಲಿ ಮಾತ್ರ ಅನುಮತಿ ನೀಡಲಾಗಿದೆ ಎಂದು ಪ್ರಾಸಿಕ್ಯೂಷನ್ ವಾದ ಮಾಡಿದೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಸಂಪುಟ ರಚನೆ, ಕೇಂದ್ರ ವೀಕ್ಷಕರಾಗಿ ತೆರಳಿದ್ದ ಬಿಎಸ್‌ ಯಡಿಯೂರಪ್ಪ!

ಆದರೆ, ರ್‍ಯಾಲಿಗೆ ಅನುಮತಿ ನೀಡಿರುವ ಷರತ್ತುಗಳನ್ನು ಉಲ್ಲಂಘಿಸಿ ಹಾರ್ದಿಕ್ ಪಟೇಲ್ ‘ರಾಜಕೀಯ ಭಾಷಣ’ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರು ಮತ್ತು ಜಾಮ್‌ನಗರ ಮೂಲದ ಅಂಕಿತ್‌ ಘಡಿಯಾ ಅವರ ವಿರುದ್ಧ ಸೆಕ್ಷನ್ 36 (ಎ), 72 (2) ಮತ್ತು  ಗುಜರಾತ್ ಪೊಲೀಸ್ ಕಾಯಿದೆಯ 134 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಮಧ್ಯೆ, ಸುಮಾರು 70 ದಿನಗಳ ನಂತರ ಎಫ್‌ಐಆರ್ ಅನ್ನು ಏಕೆ ದಾಖಲಿಸಲಾಗಿದೆ ಮತ್ತು ಹಾರ್ದಿಕ್‌ ಪಟೇಲ್ ಅವರ ಭಾಷಣವನ್ನು ಒಳಗೊಂಡ ಸಿಡಿ ಯಾರ ಬಳಿ ಇದೆ ಎಂಬುದನ್ನು ವಿವರಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಮ್ಯಾಜಿಸ್ಟ್ರೇಟ್ ನಂದನಿ ಆದೇಶದಲ್ಲಿ ತಿಳಿಸಿದ್ದಾರೆ. ಇದಲ್ಲದೆ, ಅನುಮತಿ ಕೋರಿ ಮಮಲತಾರ್‌ಗೆ ಸಲ್ಲಿಸಿದ ಅರ್ಜಿಗೆ ಹಾರ್ದಿಕ್‌ ಪಟೇಲ್ ಅಥವಾ ಅಂಕಿತ್‌ ಘಡಿಯಾ ಸಹಿ ಮಾಡಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಹಾಗೂ, ಸಾಕ್ಷಿಗಳು ಮಾತ್ರವಲ್ಲದೆ ಪ್ರಕರಣದ ದೂರುದಾರ ಕಿರಿತ್ ಸಾಂಘವಿ ಕೂಡ ಭಾಷಣದ ವಿಷಯಗಳ ಬಗ್ಗೆ ತಿಳಿದಿರಲಿಲ್ಲ ಎಂದು ಮ್ಯಾಜಿಸ್ಟ್ರೇಟ್ ಗಮನಿಸಿದರು. ದೂರಿನ ನೋಂದಣಿ ಮತ್ತು ನಂತರದ ತನಿಖೆಯನ್ನು "ಯಾಂತ್ರಿಕ" ರೀತಿಯಲ್ಲಿ ನಡೆಸಲಾಯಿತು ಮತ್ತು ಯಾವುದೇ ಅನುಮಾನಾಸ್ಪದವಾಗಿ ಪ್ರಕರಣವನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳಿಲ್ಲ ಎಂದು ಮ್ಯಾಜಿಸ್ಟ್ರೇಟ್ ಗಮನಿಸಿದರು.

2017 ರ ವಿಧಾನಸಭಾ ಚುನಾವಣೆಯ ನಂತರ, ಹಾರ್ದಿಕ್‌ ಪಟೇಲ್ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು ಮತ್ತು ಪಕ್ಷದ ಕಾರ್ಯಾಧ್ಯಕ್ರೂ ಆಗಿದ್ದರು. ಆದರೆ, ಅವರು ಡಿಸೆಂಬರ್ 2022 ರ ರಾಜ್ಯ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ ತೊರೆದು ಅಹಮದಾಬಾದ್‌ನ ವಿರಾಮಗಾಮ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಹಾರ್ದಿಕ್ ಪಟೇಲ್ ಗುಜರಾತ್‌ನಲ್ಲಿ ಎರಡು ದೇಶದ್ರೋಹ ಪ್ರಕರಣಗಳು ಸೇರಿದಂತೆ ಸುಮಾರು 30 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌