ಕಷ್ಟಪಟ್ಟು ದುಡಿದ ಹಣದಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ - ಬಾಕ್ಸ್‌ನಲ್ಲಿ ಸಗಣಿ ತುಂಬಿ ಪಾರ್ಸಲ್ ಮಾಡಿದ್ರು

Published : Sep 08, 2026, 08:55 PM IST
cow dung

ಸಾರಾಂಶ

ಆನ್‌ಲೈನ್‌ನಲ್ಲಿ ಆಂಡ್ರಾಯ್ಡ್ ಸಾಧನವನ್ನು ಆರ್ಡರ್ ಮಾಡಿ ಹಣ ಪಾವತಿಸಿದ್ದ ಗ್ರೇಟರ್ ನೋಯ್ಡಾದ ಯುವಕನಿಗೆ ಪಾರ್ಸೆಲ್‌ನಲ್ಲಿ ಸಗಣಿ ಬರುವ ಮೂಲಕ ವಂಚನೆಯಾಗಿದೆ. ಈ ಬಗ್ಗೆ ಸಂತ್ರಸ್ತ ಯುವಕ ಸೈಬರ್ ಸೆಲ್‌ಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗ್ರೇಟರ್ ನೋಯ್ಡಾ: ಆನ್‌ಲೈನ್ ಶಾಪಿಂಗ್ ಮಾಡುವವರು ಎಚ್ಚರ! ಇಲ್ಲೊಬ್ಬ ಯುವಕ ತನಗೆ ಬೇಕಾದ ಎಲೆಕ್ಟ್ರಾನಿಕ್ ಸಾಧನವನ್ನು ಆರ್ಡರ್ ಮಾಡಿ ಹಣ ಪಾವತಿಸಿದ್ದಕ್ಕೆ ಪ್ರತಿಯಾಗಿ ಬಂದ ಪಾರ್ಸೆಲ್‌ನಲ್ಲಿ ಸಗಣಿ ಕಂಡುಬಂದಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆದ ವಂಚನೆ ಪ್ರಕರಣ ಈಗ ಸೈಬರ್ ಸೆಲ್ ಮೆಟ್ಟಿಲೇರಿದೆ.

ನಡೆದಿದ್ದೇನು?

ಗ್ರೇಟರ್ ನೋಯ್ಡಾದ ಸಮಸಪುರ ಗ್ರಾಮದ ನಿವಾಸಿ ಆಕಾಶ್ ನಾಗರ್ ಎಂಬುವವರು ಇತ್ತೀಚೆಗೆ ಒಂದು ವೆಬ್‌ಸೈಟ್ ಮೂಲಕ ಆಂಡ್ರಾಯ್ಡ್ ಸಾಧನ (Android Device) ಆರ್ಡರ್ ಮಾಡಿದ್ದರು. ಇದಕ್ಕಾಗಿ ಬೇಕಾದ ಸಂಪೂರ್ಣ ಹಣವನ್ನು ಅವರು ಬುಕಿಂಗ್ ಸಮಯದಲ್ಲಿಯೇ ಆನ್‌ಲೈನ್ ಮೂಲಕ ಪಾವತಿಸಿದ್ದರು.

ಸೋಮವಾರ ಸಂಜೆ 5 ಗಂಟೆಗೆ ಕೊರಿಯರ್ ಮೂಲಕ ಪಾರ್ಸೆಲ್ ಮನೆಗೆ ಬಂದಿದೆ. ಬಹಳ ಕುತೂಹಲದಿಂದ ಆಕಾಶ್ ಪ್ಯಾಕೆಟ್ ತೆರೆದಿದ್ದಾರೆ. ಒಳಗೆ ಇರಬೇಕಿದ್ದ ಆಂಡ್ರಾಯ್ಡ್ ಸಾಧನದ ಬದಲು ಆಕಳ ಸಗಣಿಯಿಂದ ತುಂಬಿದ ಪ್ಯಾಕೆಟ್ ಇತ್ತು. ಇದನ್ನು ಕಂಡು ಆಕಾಶ್ ಬೆಚ್ಚಿಬಿದ್ದಿದ್ದಾರೆ. ಕೆಲಸಕ್ಕೆಂದು ತರಿಸಿದ್ದ ಸಾಧನದ ಬದಲು ಸಗಣಿ ಬಂದಿರುವುದು ಅವರನ್ನು ಆತಂಕಕ್ಕೀಡು ಮಾಡಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಆಕಾಶ್, ದಂಕೌರ್ ಕೊತ್ವಾಲಿಯ ಸೈಬರ್ ಸೆಲ್‌ಗೆ ಹೋಗಿ ದೂರು ನೀಡಿದ್ದಾರೆ. ಆನ್‌ಲೈನ್ ಶಾಪಿಂಗ್ ಹೆಸರಿನಲ್ಲಿ ತನಗೆ ವಂಚನೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ದೂರಿನ ಆಧಾರದ ಮೇಲೆ ತನಿಖೆ ಕೈಗೊಳ್ಳಲಾಗಿದೆ. ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ನಂಬಿ ಅಪರಿಚಿತ ವೆಬ್‌ಸೈಟ್‌ಗಳಲ್ಲಿ ಹಣ ಪಾವತಿಸುವ ಮುನ್ನ ಗ್ರಾಹಕರು ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

My Cute Wife ಚಾಟ್ ನಿಂದ ಬಯಲಾಯ್ತು ರಹಸ್ಯ – ನಾಪತ್ತೆಯಾದ ವಿವಾಹಿತ ಸ್ನೇಹಿತೆಯರು ಮದುವೆಯಾದ್ರಾ !
ಕೇರಳದಿಂದ ಮಂಗಳೂರು ರೈಲ್ವೇ ಆಡಳಿತಾತ್ಮಕ ವರ್ಗಾವಣೆ ಶುರು, ಕರಾವಳಿ ಈಗ ಆಪರೇಶನಲ್ ಹಬ್