ಎಲ್ಲಾ ಬ್ಯಾಂಕ್‌ ಖಾಸ​ಗೀ​ಕ​ರ​ಣ ಮಾಡಲ್ಲ: ಸಚಿವೆ ನಿರ್ಮ​ಲಾ

Published : Mar 17, 2021, 11:23 AM ISTUpdated : Mar 17, 2021, 11:29 AM IST
ಎಲ್ಲಾ ಬ್ಯಾಂಕ್‌ ಖಾಸ​ಗೀ​ಕ​ರ​ಣ ಮಾಡಲ್ಲ: ಸಚಿವೆ ನಿರ್ಮ​ಲಾ

ಸಾರಾಂಶ

ಎಲ್ಲಾ ಬ್ಯಾಂಕ್‌ ಖಾಸ​ಗೀ​ಕ​ರ​ಣ ಮಾಡಲ್ಲ: ಸಚಿವೆ ನಿರ್ಮ​ಲಾ| ಖಾಸ​ಗೀ​ಕ​ರ​ಣ​ಗೊ​ಳ್ಳುವ ಬ್ಯಾಂಕ್‌ ನೌಕ​ರರ ಹಿತಾ​ಸಕ್ತಿ ರಕ್ಷಣೆ

ನವ​ದೆ​ಹ​ಲಿ(ಮಾ.17): 2 ರಾಷ್ಟ್ರೀಯ ಬ್ಯಾಂಕ್‌​ಗಳ ಖಾಸ​ಗೀ​ಕ​ರ​ಣ​ಗೊ​ಳಿ​ಸುವ ಕೇಂದ್ರದ ಪ್ರಸ್ತಾ​ವನೆ ವಿರುದ್ಧ ಬ್ಯಾಂಕ್‌ ನೌಕ​ರರ 9 ಸಂಘ​ಟ​ನೆ​ಗಳು 2 ದಿನಗಳ ಮುಷ್ಕರ ನಡೆಸಿದ ಬೆನ್ನಲ್ಲೇ, ಎಲ್ಲಾ ರಾಷ್ಟ್ರೀಯ ಬ್ಯಾಂಕ್‌​ಗ​ಳನ್ನು ಖಾಸ​ಗೀ​ಕ​ರ​ಣ​ಗೊ​ಳಿ​ಸು​ವು​ದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ​ರಾ​ಮನ್‌ ಅವರು ಭರ​ವಸೆ ನೀಡಿ​ದ್ದಾರೆ. ಅಲ್ಲದೆ ಖಾಸ​ಗೀ​ಕ​ರ​ಣ​ಗೊ​ಳಿ​ಸ​ಲಾ​ಗುವ ಬ್ಯಾಂಕ್‌​ಗಳ ನೌಕ​ರ​ರ ವೇತನ, ಪಿಂಚಣಿಯ ಹಿತಾ​ಸ​ಕ್ತಿ ಕಾಪಾ​ಡ​ಲಾ​ಗು​ತ್ತದೆ ಎಂದು ಭರ​ವ​ಸೆ ನೀಡಿ​ದ್ದಾರೆ.

ಈ ಬಗ್ಗೆ ಮಂಗ​ಳ​ವಾರ ಸುದ್ದಿ​ಗಾ​ರ​ರ​ನ್ನು​ದ್ದೇ​ಶಿಸಿ ಮಾತ​ನಾ​ಡಿದ ಸಚಿವೆ ನಿರ್ಮಲಾ ಅವರು, ‘ಬ್ಯಾಂಕ್‌​ಗಳು ದೇಶದ ಆಕಾಂಕ್ಷೆ​ಗ​ಳನ್ನು ಈಡೇ​ರಿ​ಸಬೇಕು. ಹೀಗಾಗಿ ಬ್ಯಾಂಕ್‌​ಗ​ಳಿಗೆ ನ್ಯಾಯ ದೊರಕಿ​ಸಲು ಖಾಸ​ಗೀ​ಕ​ರಣ ಅತ್ಯು​ತ್ತಮ ನಿರ್ಧಾ​ರ​ವಾ​ಗಿ​ದೆ. ಹೀಗಾಗಿ ಖಾಸ​ಗೀ​ಕ​ರ​ಣ​ಗೊ​ಳ್ಳುವ ರಾಷ್ಟ್ರೀಕೃತ ಬ್ಯಾಂಕ್‌ನ ಎಲ್ಲಾ ಸಿಬ್ಬಂದಿಯ ಹಿತಾ​ಸ​ಕ್ತಿ ರಕ್ಷಿ​ಸ​ಲಾ​ಗು​ತ್ತದೆ’ ಎಂದಿ​ದ್ದಾರೆ.

ಏತ​ನ್ಮಧ್ಯೆ ದೇಶದ ಲಾಭ​ವನ್ನು ಖಾಸ​ಗೀ​ಕ​ರ​ಣ​ಗೊ​ಳಿ​ಸು​ತ್ತಿ​ರುವ ಕೇಂದ್ರ ಸರ್ಕಾರ ನಷ್ಟ​ವನ್ನು ರಾಷ್ಟ್ರೀ​ಕ​ರ​ಣ​ಗೊ​ಳಿ​ಸು​ತ್ತಿದೆ ಎಂಬ ರಾಹುಲ್‌ ಗಾಂಧಿ ಟ್ವೀಟ್‌ ಬಗ್ಗೆ ಕೇಂದ್ರ ಸಚಿವೆ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!