ವೈಷ್ಣೋ ದೇವಿ ಭಕ್ತರಿಗೆ ಸಿಹಿ ಸುದ್ದಿ, ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭ: ಡೇಟ್ & ಡೀಟೆಲ್ಸ್ ಹೀಗಿದೆ

Suvarna News   | Asianet News
Published : Jan 01, 2021, 04:00 PM IST
ವೈಷ್ಣೋ ದೇವಿ ಭಕ್ತರಿಗೆ ಸಿಹಿ ಸುದ್ದಿ, ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭ: ಡೇಟ್ & ಡೀಟೆಲ್ಸ್ ಹೀಗಿದೆ

ಸಾರಾಂಶ

ವೈಷ್ಣೋ ದೇವಿ ಭಕ್ತರಿಗೆ ಸಿಹಿ ಸುದ್ದಿ, ದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭ | ಡೇಟ್ & ಡೀಟೆಲ್ಸ್ ಚೆಕ್ ಮಾಡಿ

COVID ಸಾಂಕ್ರಾಮಿಕ ರೋಗದಿಂದಾಗಿ ಸೇವೆಗಳನ್ನು ನಿಲ್ಲಿಸಿದ ತಿಂಗಳ ನಂತರ ನವದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್ ತನ್ನ ಸೇವೆಗಳನ್ನು ಜನವರಿ 1 ರಿಂದ ಪುನರಾರಂಭಿಸಲಿದೆ.

ನವದೆಹಲಿ(ಜ.01): ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವಿಟ್ಟರ್‌ನಲ್ಲಿ ಸಿಹಿ ಸುದ್ದಿ ಕೊಟ್ಟಿದ್ದಾರೆ.  "ಯಾತ್ರಾರ್ಥಿಗಳನ್ನು ವೈಷ್ಣೋ ದೇವಿ ದೇಗುಲಕ್ಕೆ ಕರೆದೊಯ್ಯುವ ದೆಹಲಿ-ಕತ್ರ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆ ಪುನರಾರಂಭಿಸಲಿದೆ.

2021ಕ್ಕೆ ಹನ್ನೊಂದು ವಿಶೇಷ ಅಹವಾಲು

 ಜನವರಿ 1 ರಿಂದ ಮತ್ತೊಮ್ಮೆ ತನ್ನ ಸೇವೆಗಳನ್ನು ಆರಂಭಿಸಲಿದ್ದು, ಭಾರತದ ಆಧುನಿಕ ರೈಲು ಮತ್ತೊಮ್ಮೆ ಭಕ್ತರನ್ನು ಸ್ವಾಗತಿಸಲು ಸಿದ್ಧವಾಗಿದೆ. ನವದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಕಳೆದ ವರ್ಷ ಅಕ್ಟೋಬರ್ 3 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಫ್ಲ್ಯಾಗ್ ಮಾಡಿದ್ದರು.

ಕಳೆದ ವರ್ಷ ಅಕ್ಟೋಬರ್ 5 ರಿಂದ ರೈಲು ಪ್ರಯಾಣಿಕರಿಗಾಗಿ ತನ್ನ ನಿಯಮಿತ ಸೇವೆಗಳನ್ನು ಪ್ರಾರಂಭಿಸಿತು. ಈ ವರ್ಷದ ಮಾರ್ಚ್‌ನಲ್ಲಿ ಕೊರೋನಾದಿಂದಾಗಿ ವಂದೇ ಭಾರತದ ಸೇವೆಗಳನ್ನು ನಿಲ್ಲಿಸಲಾಯಿತು. ಭಾರತೀಯ ರೈಲ್ವೆ 1,768 ರಲ್ಲಿ 1,089 ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳನ್ನು ನಿರ್ವಹಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು