
ನೊಯ್ಡಾ(ಜೂ.12): ಉತ್ತರ ಪ್ರದೇಶದ ನೊಯ್ಡಾದಲ್ಲಿ ಈವರೆಗಿನ ಅತೀ ದೊಡ್ಡ ದರೋಡೆ ಬಹಿರಂಗಗೊಂಡಿದೆ. ಹೀಗಿದ್ದಜರೂ ಯಾರೊಬ್ಬರೂ ಹಣ, ಚಿನ್ನ ಕಳ್ಳತನವಾಗಿದೆ ಎಂದು ದೂರು ನೀಡಿಲ್ಲ. ಹೌದು ಇಲ್ಲಿನ ಕಳ್ಳರ ಕಣ್ಣು ಈ ಬಾರಿ ಬಿದ್ದಿದ್ದು ಚಿನ್ನ ಹಾಗೂ ಕಪ್ಪುಹಣದ ಮೇಲೆ. ಆದರೆ ಹಲವಾರು ತಿಂಗಳು ಕಳೆದರೂ ಹಣದ ಮಾಲೀಕರು ಮಾತ್ರ ಯಾವುದೇ ದೂರು ದಾಖಲಿಸಿಲ್ಲ. ಕಳ್ಳರನ್ನು ಹಿಡಿದ ಪೊಲೀಸರು ಕೋಟ್ಯಾಂತರ ರೂಪಾಯಿ ಮೌಲ್ಯದ ಸಂಪತ್ತು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಕಚೇರಿಗೆ ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಅನ್ವಯ ನೊಯ್ಡಾದ ಪಾಶ್ ಕಾಲೋನಿಯ ಫ್ಲಾಟ್ನಲ್ಲಿ ಹತ್ತು ಕಳ್ಳರು ಸೇರಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಕಂತೆ ಕಂತೆ ಹಣ, ಚಿನ್ನದ ಇಸ್ಕೆಟ್ ಹಾಗು ಎರಡು ಆಸ್ತಿ ಪತ್ರಗಳನ್ನು ಲಪಟಾಯಿಸಿದ್ದಾರೆ. 2020ರಲ್ಲಿ ಈ ಕಳ್ಳತನ ನಡೆದಿದ್ದು, ಖದೀಮರು ತಲೆ ಮರೆಸಿಕೊಂಡುದ್ದರು.
ಸಿಮ್ ಕಾರ್ಡ್ ಅಪ್ಡೇಟ್ ನೆಪ, ಲಕ್ಷಾಂತರ ರು. ವಂಚನೆ: ಕಂಗಾಲಾದ ಮಹಿಳೆ..!
ಆದರೆ ಕೆಲ ತಿಂಗಳ ಬಳಿಕ ಕಳ್ಳರ ನಡುವೆ ಹಣ ಹಂಚುವಿಕೆ ವಿಚಾರವಾಗಿ ಜಗಳ ಆರಮಭವಾಗಿದ್ದು, ಈ ವಿಚಾರ ಬಹಿರಂಗಗೊಂಡಿದೆ. ಈ ವಿಚಾರ ನೊಯ್ಡಾ ಪೊಲೀಸರ ಗಮನಕ್ಕೂ ಬಂದಿದೆ. ಪೊಲೀಸರು ಆರು ಕಳ್ಳರನ್ನು ಹಿಡಿದಿದ್ದು, ಅವರಿಂದ ಸುಮಾರು ಹದಿನಾಲ್ಕು ಕೆಜಿ ಚಿನ್ನ ಹಾಗೂ 57 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಅನ್ವಯ ಇದೆಲ್ಲವೂ ಒಟ್ಟು ಸೇರಿದರೆ 8 ಕೋಟಿ 25 ಲಕ್ಷ ರೂಪಾಯಿ ಮೌಲ್ಯದ ಸಂಪತ್ತಾಗಿದೆ ಎಂದಿದ್ದಾರೆ. ಇನ್ನುಳಿದ ನಾಲ್ವರಿಗಾಘಿ ಪೊಲೀಸರು ಸದ್ಯ ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ