ದೇವಸ್ಥಾನದ ಭೂಮಿಗೆ ಇನ್ನು ದೇವರೇ ಮಾಲಿಕ

Kannadaprabha News   | Asianet News
Published : Sep 08, 2021, 10:01 AM ISTUpdated : Sep 08, 2021, 10:15 AM IST
ದೇವಸ್ಥಾನದ ಭೂಮಿಗೆ  ಇನ್ನು ದೇವರೇ ಮಾಲಿಕ

ಸಾರಾಂಶ

  ಅರ್ಚಕರನ್ನು ದೇವಸ್ಥಾನದ ಭೂಮಿಯ ಮಾಲಿಕನೆಂದು ಪರಿಗಣಿಸಲು ಸಾಧ್ಯವಿಲ್ಲ  ಮಹತ್ವದ ಆದೇಶ ನೀಡಿರುವ ಸುಪ್ರೀಂಕೋರ್ಟ್‌, ದೇವರೇ ಆಯಾ ದೇವಸ್ಥಾನದ ಭೂಮಿಗೆ ಮಾಲಿಕನಾಗಿರುತ್ತಾನೆ ಎಂದು ಸ್ಪಷ್ಟವಾಗಿ ಹೇಳಿದೆ

 ನವದೆಹಲಿ (ಸೆ.08):  ಅರ್ಚಕರನ್ನು ದೇವಸ್ಥಾನದ ಭೂಮಿಯ ಮಾಲಿಕನೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮಹತ್ವದ ಆದೇಶ ನೀಡಿರುವ ಸುಪ್ರೀಂಕೋರ್ಟ್‌, ದೇವರೇ ಆಯಾ ದೇವಸ್ಥಾನದ ಭೂಮಿಗೆ ಮಾಲಿಕನಾಗಿರುತ್ತಾನೆ ಎಂದು ಸ್ಪಷ್ಟವಾಗಿ ಹೇಳಿದೆ. ಅರ್ಚಕರು ದೇವಸ್ಥಾನದ ಭೂಮಿಯನ್ನು ನಿರ್ವಹಣೆ ಮಾಡುವುದಕ್ಕಾಗಿ ಮಾತ್ರ ತಮ್ಮ ಸುಪರ್ದಿಯಲ್ಲಿ ಇರಿಸಿಕೊಳ್ಳಬಹುದು ಎಂದೂ ಅದು ತಿಳಿಸಿದೆ.

ಮಧ್ಯಪ್ರದೇಶದ ಪ್ರಕರಣವೊಂದರಲ್ಲಿ ಸೋಮವಾರ ಈ ಆದೇಶ ನೀಡಿರುವ ಸುಪ್ರೀಂಕೋರ್ಟ್‌ನ ನ್ಯಾ. ಹೇಮಂತ್‌ ಗುಪ್ತಾ ಮತ್ತು ಎ.ಎಸ್‌.ಬೋಪಣ್ಣ ಅವರ ಪೀಠ, ‘ದೇವಸ್ಥಾನದ ಭೂಮಿಗೆ ಸಂಬಂಧಿಸಿದಂತೆ ಕಂದಾಯ ದಾಖಲೆಗಳ ಮಾಲಿಕತ್ವದ ಕಾಲಂನಲ್ಲಿ ದೇವರ ಹೆಸರನ್ನೇ ಬರೆಯಬೇಕು.

ಕೋವಿಡ್‌ ನಂತರ ಶಿಕ್ಷಕರ ವೃತ್ತಿ, ಬದುಕು ಹೇಗೆ ಬದಲಾಗಿದೆ? ಇವರು ಯಾವ ಯೋಧರಿಗೂ ಕಮ್ಮಿಯಿಲ್ಲ!

ಅರ್ಚಕರ ಹೆಸರನ್ನಾಗಲೀ, ಜಿಲ್ಲಾಧಿಕಾರಿಯ ಹೆಸರನ್ನಾಗಲೀ ಅಥವಾ ಯಾರು ಆ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾರೋ ಅವರ ಹೆಸರನ್ನಾಗಲೀ ಬರೆಯಬಾರದು. ಏಕೆಂದರೆ ಆ ಜಾಗದ ಕಾನೂನಾತ್ಮಕ ಮಾಲಿಕ ದೇವರೇ ಆಗಿರುತ್ತಾನೆ. ಭೂಮಿಯ ನಿರ್ವಹಣೆಯ ಜವಾಬ್ದಾರ ಕೂಡ ದೇವರೇ ಆಗಿದ್ದು, ಆತನ ಪರವಾಗಿ ಅದನ್ನು ಅರ್ಚಕರು, ಮ್ಯಾನೇಜರ್‌ಗಳು ಅಥವಾ ಇತರ ಸೇವಾಕರ್ತರು ನೋಡಿಕೊಳ್ಳುತ್ತಿರುತ್ತಾರೆ. ಹೀಗಾಗಿ ಮಾಲಿಕತ್ವದ ಕಾಲಂನಲ್ಲಿ ಅರ್ಚಕರು, ಮ್ಯಾನೇಜರ್‌ ಅಥವಾ ಸೇವಾಕರ್ತರ ಹೆಸರು ಬರೆಯುವ ಅಗತ್ಯವಿಲ್ಲ’ ಎಂದು ತಿಳಿಸಿದೆ.

ಅರ್ಚಕರು ‘ಭೂಮಿಸ್ವಾಮಿ’ ಅಲ್ಲ:

ದೇವಸ್ಥಾನದ ಭೂಮಿಗೆ ಅರ್ಚಕರು ಅಧಿಕಾರಿ ಅಲ್ಲ. ಮುಜರಾಯಿ ಇಲಾಖೆಯ ಪರವಾಗಿ ಅವರು ನಿರ್ವಹಣೆಗಾಗಿ ಮಾತ್ರ ಆ ಭೂಮಿಯನ್ನು ಹೊಂದಿರುತ್ತಾರೆ. ದೇವರ ಹೆಸರಿನಲ್ಲಿ ಭೂಮಿಯ ನಿರ್ವಹಣೆ ಮಾಡುವುದು ಮಾತ್ರ ಅರ್ಚಕರ ಕರ್ತವ್ಯ. ಅರ್ಚಕರು ದೇವಸ್ಥಾನದ ಪೂಜೆಯ ಕರ್ತವ್ಯವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ವಿಫಲರಾದರೆ ಅಥವಾ ಭೂಮಿಯ ನಿರ್ವಹಣೆಯಲ್ಲಿ ವಿಫಲರಾದರೆ ಅವರಿಂದ ಭೂಮಿಯನ್ನು ಹಿಂಪಡೆಯಬಹುದು. ಅರ್ಚಕರನ್ನು ದೇವಸ್ಥಾನದ ಭೂಮಿಗೆ ‘ಭೂಮಿಸ್ವಾಮಿ’ (ಮಧ್ಯಪ್ರದೇಶದಲ್ಲಿ ಬಳಕೆಯಲ್ಲಿರುವ ಪದ) ಎಂದು ಪರಿಗಣಿಸಲಾಗದು. ಕಂದಾಯ ದಾಖಲೆಗಳಲ್ಲಿ ಅರ್ಚಕರ ಹೆಸರು ಬರೆಯಬೇಕು ಎಂದು ಯಾವ ಕಾಯ್ದೆಯೂ ಹೇಳುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ದೇವಸ್ಥಾನದ ಭೂಮಿಗೆ ಸಂಬಂಧಿಸಿದ ಕಂದಾಯ ದಾಖಲೆಯ ಮಾಲಿಕತ್ವದ ಕಾಲಂನಲ್ಲಿರುವ ಅರ್ಚಕರ ಹೆಸರನ್ನು ತೆಗೆದುಹಾಕಬೇಕು ಎಂದು ಮಧ್ಯಪ್ರದೇಶ ಸರ್ಕಾರ ಎರಡು ಸುತ್ತೋಲೆ ಹೊರಡಿಸಿತ್ತು. ದೇವಸ್ಥಾನದ ಭೂಮಿಯನ್ನು ಅರ್ಚಕರು ಮಾರಾಟ ಮಾಡುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿತ್ತು. ಆದರೆ, ಸರ್ಕಾರದ ಎರಡೂ ಸುತ್ತೋಲೆಗಳನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ನಂತರ ಮಧ್ಯಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ಆದೇಶ ಹೊರಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ
ಕೊಬ್ಬರಿ ರೈತರಿಗೆ ಕೇಂದ್ರ ಬಂಪರ್ : ಬೆಂಬಲ ಬೆಲೆ ಹೆಚ್ಚಳ