* ಕೊರೋನಾ ಹಾವಳಿ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟು
* ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ಸಂಗ್ರಹಿಸುತ್ತಿವೆ ಎಂದು ಅಳಲು ತೋಡಿಕೊಂಡ ಪೋಷಕರು
* ಶಾಲಾ ಶುಲ್ಕ ಇಳಿಕೆ ಕೋರಿದ ಪೋಷಕರಿಗೆ ‘ಸಾಯಿರಿ’ ಎಂದ ಸಚಿವ
ಭೋಪಾಲ್(ಜು.01): ಕೊರೋನಾ ಹಾವಳಿ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟು ಮಧ್ಯೆಯೇ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ಸಂಗ್ರಹಿಸುತ್ತಿವೆ ಎಂದು ಅಳಲು ತೋಡಿಕೊಂಡ ಪೋಷಕರಿಗೆ ಮಧ್ಯಪ್ರದೇಶ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು ‘ಹೋಗಿ ಸಾಯಿರಿ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.
ಇತ್ತೀಚೆಗಷ್ಟೇ ಸುಮಾರು 90-100 ವಿದ್ಯಾರ್ಥಿಗಳ ಪೋಷಕರು ಸಚಿವರ ನಿವಾಸಕ್ಕೆ ಭೇಟಿ ನೀಡಿ, ‘ಹೆಚ್ಚುವರಿ ಶುಲ್ಕ ವಿಧಿಸಬಾರದೆಂಬ ಹೈಕೋರ್ಟ್ ಆದೇಶಗಳನ್ನು ಗಾಳಿಗೆ ತೂರಿ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿವೆ. ಈ ಸಂಬಂಧ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ. ನಾವೇನು ಮಾಡಬೇಕು?’ ಎಂದು ಪ್ರಶ್ನಿಸಿದರು. ಆಗ ಸಚಿವರು ‘ಹೋಗಿ ಸಾಯಿರಿ, ನಿಮಗೇಗೆ ಇಷ್ಟಬರುತ್ತೋ ಹಾಗೆ ಮಾಡಿ’ ಎಂದು ಉಡಾಫೆಯಾಗಿ ಹೇಳಿದ್ದಾರೆ.
ये हैं
मप्र में स्कूल शिक्षा के राज्यमंत्री और के बेलगाम प्यादे!
पालक संघ से कह रहे हैं - "जो करना हो, कर लो, जाओ जाकर मर जाओ!" में स्कूल फीस माफी की मांग पर दिया जवाब, बताता है कि सत्ता की गंध से सरकार का दिमाग चढ़ा हुआ है! pic.twitter.com/E9UIUgFG2q
ಇದರ ಬೆನ್ನಲ್ಲೇ ಪರ್ಮಾರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್ ಮತ್ತು ಪೋಷಕರ ಸಂಘಟನೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಆಗ್ರಹಿಸಿವೆ.