ಹಸಿವಿನ ಸೂಚ್ಯಂಕ: ಭಾರತದಲ್ಲಿ ಪಾಕ್‌ಗಿಂತಲೂ ಕೆಟ್ಟ ಸ್ಥಿತಿ..! ಕಂಗ್ರಾಟ್ಸ್ ಮೋದಿ ಜೀ ಎಂದ ಸಿಬಲ್

Published : Oct 15, 2021, 04:26 PM ISTUpdated : Oct 15, 2021, 04:49 PM IST
ಹಸಿವಿನ ಸೂಚ್ಯಂಕ: ಭಾರತದಲ್ಲಿ ಪಾಕ್‌ಗಿಂತಲೂ ಕೆಟ್ಟ ಸ್ಥಿತಿ..! ಕಂಗ್ರಾಟ್ಸ್ ಮೋದಿ ಜೀ ಎಂದ ಸಿಬಲ್

ಸಾರಾಂಶ

ಭಾರತದಲ್ಲಿ ಪಾಕ್‌ಗಿಂತಲೂ ಕೆಟ್ಟ ಸ್ಥಿತಿ..! ಹಸಿವಿನ ಸೂಚ್ಯಂಕದಲ್ಲಿ ಗಂಭೀರ ದೇಶಗಳ ಪಟ್ಟಿ ಸೇರಿದ ಭಾರತ ಮೋದಿಗೆ ಶುಭಾಶಯ ತಿಳಿಸಿ ಟಾಂಗ್ ಕೊಟ್ಟ ಸಿಬಲ್

ದೆಹಲಿ(ಅ.15): 2021ರ ಜಾಗತಿಕ ಹಸಿವಿನ(Hunger) ಸೂಚ್ಯಂಕದಲ್ಲಿ(GHI) ಭಾರತ 94ರಿಂದ 101ನೇ ಸ್ಥಾನಕ್ಕೆ ಬಂದಿದೆ. ಈ ಮೂಲಕ GHI ತೀವ್ರತೆಯ ಪ್ರಮಾಣ ವಿಭಾಗದಲ್ಲಿ ಭಾರತದ ಸೇರಿರುವುದು ಆತಂಕದ ವಿಚಾರ. ಲಿಸ್ಟ್ ಮಾಡಲಾಗಿರುವ 116 ದೇಶಗಳಲ್ಲಿ ಭಾರತ ನೆರೆ ರಾಷ್ಟ್ರಗಳಾದ ಪಾಕಿಸ್ತಾನ(Pakistan)(92), ನೇಪಾಳ(76)(Nepal), ಬಂಗ್ಲಾದೇಶ(Bangladesh)(76)ಕ್ಕಿಂತಲೂ ಕೆಟ್ಟ ಸ್ಥಿತಿಯಲ್ಲಿದೆ.

ಜಾಗತಿಕ ಹಸಿವಿನ ದೇಶಗಳನ್ನು ನಾಲ್ಕು ಸೂಚಕಗಳ ಮೂಲಕ ನಿರ್ಧರಿಸಲಾಗುತ್ತದೆ. ಪೌಷ್ಟಿಕಾಂಶವಿಲ್ಲದ ಜನಸಂಖ್ಯೆಯ ಶೇಕಡಾವಾರು, ಐದು ವರ್ಷದೊಳಗಿನ ಮಕ್ಕಳ ಶೇಕಡಾವಾರು, ಕುಂಠಿತ ಮತ್ತು ಮಕ್ಕಳ ಮರಣದ ಪ್ರಮಾಣವನ್ನು ಆಧರಿಸಿ ಲಿಸ್ಟ್ ಮಾಡಲಾಗುತ್ತದೆ. ವರದಿಯ ಡೇಟಾವನ್ನು ವಿಶ್ವಸಂಸ್ಥೆ(United Nations) ಮತ್ತು ಇತರ ಏಜೆನ್ಸಿಗಳಿಂದ ಪಡೆಯಲಾಗಿದೆ. ಸೂಚ್ಯಂಕವು 135 ದೇಶಗಳಿಂದ ಡೇಟಾವನ್ನು ಪಡೆದರೂ ಕೇವಲ 116 ರಾಷ್ಟ್ರಗಳನ್ನು ಮೌಲ್ಯಮಾಪನದಲ್ಲಿ ಸೇರಿಸಲಾಗಿದೆ.

ಪ್ರಮುಖ ಅಂಕಿ ಅಂಶಗಳು ಹೀಗಿವೆ:

ಭಾರತದ ಜಾಗತಿಕ ಹಸಿವಿನ ಸೂಚ್ಯಂಕ ಸ್ಕೋರ್ 27.5 ಆಗಿದೆ. ಇದು ಕಳೆದ ವರ್ಷದ 27.2 ಅಂಕಕ್ಕಿಂತ ಒಂದು ನಿಮಿಷದ ಸುಧಾರಣೆಯಾಗಿದೆ. ಈ ಸಂಖ್ಯೆಯು ಭಾರತವನ್ನು ಗಂಭೀರ ಸಮಸ್ಯೆಯ ವರ್ಗದಲ್ಲಿ ಸೇರುವಂತೆ ಮಾಡಿದೆ. ನೇಪಾಳ ಮತ್ತು ಭೂತಾನ್ ಅನ್ನು ಮಧ್ಯಮ ವರ್ಗದಲ್ಲಿ ಇರಿಸಲಾಗಿದೆ.

ನಿಮಿಷಕ್ಕೆ ಕೋವಿಡ್‌ಗೆ 7 ಜನ, ಆದರೆ ಹಸಿವಿಗೆ 11 ಜನರ ಬಲಿ: ವರದಿ!

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಕಳಪೆ ಶ್ರೇಯಾಂಕದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಇಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತವು 2020ರಲ್ಲಿ ತನ್ನ 94 ನೇ ಸ್ಥಾನದಿಂದ 101 ನೇ ಸ್ಥಾನಕ್ಕೆ ಕುಸಿದಿದ್ದು, ಪಾಕಿಸ್ತಾನ ಸೇರಿದಂತೆ ತನ್ನ ನೆರೆಹೊರೆಯ ರಾಷ್ಟ್ರಗಳಿಗಿಂತ ಹಿಂದುಳಿದಿದೆ.

ಜಾಗತಿಕ ಹಸಿವಿನ ಸೂಚ್ಯಂಕ ವರದಿಯು ಭಾರತದಲ್ಲಿ ಹಸಿವಿನ ಮಟ್ಟ ಆತಂಕಕಾರಿ ಎಂದು ಹೇಳಿದೆ. ಟ್ವಿಟರ್‌ನಲ್ಲಿ ಕಾಂಗ್ರೆಸ್ ನಾಯಕ ಸಿನಲ್ ಬಡತನ, ಹಸಿವು, ಮತ್ತು ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡುವ ಸರ್ಕಾರದ ಹಕ್ಕುಗಳನ್ನು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದಾರೆ.

6 ಲಕ್ಷ ಮಂದಿ ಹೊಟ್ಟೆ ತುಂಬಿಸಲು 120 ದಿನದಲ್ಲಿ 2 ಕೋಟಿ ರೂ. ಖರ್ಚು ಮಾಡಿದ ಕುಟುಂಬ!

ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್‌ಐ) ಪ್ರಕಾರ ಚೀನಾ, ಬ್ರೆಜಿಲ್ ಮತ್ತು ಕುವೈತ್ ಸೇರಿದಂತೆ 18 ದೇಶಗಳು ಐದು ಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಶ್ರೇಣಿಯಲ್ಲಿವೆ.

ಹಸಿವಿನ ವಿಚಾರದಲ್ಲಿ ಹಿಂದೆಬಿದ್ದರೂ ಭಾರತವು ಇತರ ಸೂಚಕಗಳಲ್ಲಿ ಹಿಂದಿಗಿಂತ ಅಭಿವೃದ್ಧಿಯಾಗಿದೆ. 5 ವರ್ಷದೊಳಗಿನ ಮರಣ ಪ್ರಮಾಣ, ಮಕ್ಕಳಲ್ಲಿ ಕುಂಠಿತದ ಪ್ರಮಾಣ ಮತ್ತು ಅಸಮರ್ಪಕ ಆಹಾರದ ಕಾರಣದಿಂದಾಗಿ ಅಪೌಷ್ಟಿಕತೆಯಲ್ಲಿ ಇಳಿಕೆ ಇದೆ ಎಂದು ವರದಿ ಸೂಚಿಸಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!