ಎನ್‌ಜಿಒ ನಡೆಸುತ್ತಿದ್ದ ಅನಾಥಾಶ್ರಮದಲ್ಲಿ ಹೆಣ್ಮಕ್ಕಳನ್ನು ತಲೆಕೆಳಗೆ ನೇತುಹಾಕಿ ಚಿತ್ರಹಿಂಸೆ!

Published : Jan 20, 2024, 07:00 AM IST
ಎನ್‌ಜಿಒ ನಡೆಸುತ್ತಿದ್ದ ಅನಾಥಾಶ್ರಮದಲ್ಲಿ ಹೆಣ್ಮಕ್ಕಳನ್ನು ತಲೆಕೆಳಗೆ ನೇತುಹಾಕಿ ಚಿತ್ರಹಿಂಸೆ!

ಸಾರಾಂಶ

ಅನಾಥಾಶ್ರಮವೊಂದಲ್ಲಿ ಶಿಕ್ಷೆಯ ನೆಪದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ತಲೆಕೆಳಗಾಗಿ ನೇತು ಹಾಕುವುದು ಹಾಗೂ ಮೆಣಸಿನ ಹೊಗೆ ಹಾಕುವುದು ಸೇರಿದಂತೆ ಅನಾಗರಿಕ ಕೃತ್ಯಗಳ ಮೂಲಕ ಅತ್ಯಂತ ಕ್ರೂರವಾಗಿ ಹಿಂಸಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಇಂದೋರ್‌: ಅನಾಥಾಶ್ರಮವೊಂದಲ್ಲಿ ಶಿಕ್ಷೆಯ ನೆಪದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ತಲೆಕೆಳಗಾಗಿ ನೇತು ಹಾಕುವುದು ಹಾಗೂ ಮೆಣಸಿನ ಹೊಗೆ ಹಾಕುವುದು ಸೇರಿದಂತೆ ಅನಾಗರಿಕ ಕೃತ್ಯಗಳ ಮೂಲಕ ಅತ್ಯಂತ ಕ್ರೂರವಾಗಿ ಹಿಂಸಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಐವರು ಮಹಿಳೆಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇಂದೋರ್‌ ನಗರದಲ್ಲಿರುವ ‘ವಾತ್ಸಲ್ಯಪುರಂ’ ಎಂಬ ಚಿಕ್ಕ ಹೆಣ್ಣುಮಕ್ಕಳ ಅನಾಥಾಶ್ರಮವನ್ನು ಜೈನ್‌ ವೆಲ್‌ಫೇರ್‌ ಎಂಬ ಎನ್‌ಜಿಒ ಸಂಸ್ಥೆ ನಡೆಸುತ್ತಿದೆ. ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ಹೆಣ್ಣುಮಕ್ಕಳನ್ನು ವಾರ್ಷಿಕ ಕೇವಲ 5 ರು. ಹಣ ಶುಲ್ಕ ಪಡೆದುಕೊಂಡು ಇಲ್ಲಿ ನೋಡಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಮಕ್ಕಳಿಗೆ ನಾನಾ ರೀತಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಈ ಆರೋಪವನ್ನು ಜೈನ್‌ ಸಂಸ್ಥೆ ತಳ್ಳಿಹಾಕಿದೆ.

ಹೆಣ್ಣು ಹೆತ್ತವಳಿಗೆ ನಡುರಸ್ತೆಯಲ್ಲೇ ಕಾಲಿನಿಂದ ಒದ್ದು ಚಿತ್ರಹಿಂಸೆ! ವಿಡಿಯೋ ವೈರಲ್

ಏನೇನು ಕ್ರೌರ್ಯ?

ಕೊಳಕು ಬಟ್ಟೆ ಧರಿಸಿದ್ದ ಕಾರಣಕ್ಕೆ ನಾಲ್ಕು ವರ್ಷದ ಬಾಲಕಿಗೆ ಥಳಿಸಿ, ಬಾತ್‌ರೂಮಲ್ಲಿ ಕೂಡಿ ಹಾಕಲಾಗಿತ್ತು. ಅಲ್ಲದೇ ಆಕೆಗೆ 2 ದಿನಗಳ ಕಾಲ ಊಟ ನೀಡಿಲ್ಲ. ಮೆಣಸಿನ ಹೊಗೆ ಹಾಕುವುದು, ತಲೆಕೆಳಗಾಗಿ ನೇತುಹಾಕುವ ಶಿಕ್ಷೆ ನೀಡಿದ್ದಾರೆ ಎಂದು ಬಾಲಕಿಯರು ಆರೋಪಿಸಿದ್ದಾರೆ.

ಗೋವಿಗೆ ಚಿತ್ರಹಿಂಸೆ ನೀಡಿ ಕೊಂದ ಆರೋಪಿಗಳ ಮನೆ ಧ್ವಂಸಗೊಳಿಸಿ ಮಧ್ಯಪ್ರದೇಶ ಸರ್ಕಾರ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?