ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಗದಗದ ಯೋಧ ಲಕ್ಷ್ಮಣ

By Suvarna NewsFirst Published Jul 20, 2021, 6:52 PM IST
Highlights

* ನಕ್ಸಲ್ ವಿರುದ್ಧದ ಕಾಳಗದಲ್ಲಿ ಕರುನಾಡ ಯೋಧ ಹುತಾತ್ಮ
* ನಕ್ಸಲ್ ಗುಂಡಿಗೆ ವೀರ ಮರಣ ಹೊಂದಿದ ಗದಗ ಮೂಲದ ಯೋಧ
* ಬಿಎಸ್ ಎಫ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮಣ ಗೌರಣ್ಣವರ್(35)
* ಕಳೆದ ಏಳು ವರ್ಷದಿಂದ ಬಿಎಸ್ ಎಫ್ ನಲ್ಲಿ ಸೇವೆ

ಗದಗ(ಜು. 20)  ನಕ್ಸಲ್ ವಿರುದ್ಧದ ಕಾಳಗದಲ್ಲಿ ಕರುನಾಡ ಯೋಧ ಹುತಾತ್ಮರಾಗಿದ್ದಾರೆ. ನಕ್ಸಲ್ ಗುಂಡಿಗೆ ಗದಗ ಮೂಲದ ಯೋಧ ಗುಂಡಿಗೆ ನೀಡಿದ್ದಾರೆ.

ಬಿಎಸ್ ಎಫ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮಣ ಗೌರಣ್ಣವರ್(35) ವೀರ ಮರಣವನ್ನಪ್ಪಿದ್ದಾರೆ. ಕಳೆದ ಏಳು ವರ್ಷದಿಂದ ಬಿಎಸ್ ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ಬೆಳಗ್ಗೆ ಛತ್ತೀಸ್ ಘಡದಲ್ಲಿ ನಕ್ಸಲ್ ರೊಂದಿಗಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪಂಜಾಬ್ ಗಡಿಯಲ್ಲಿ ಪ್ರಾಣ ಅರ್ಪಿಸಿದ ಬೀದರ್ ಯೋಧ

ಬುಧವರಾರ ವೀರ ಯೋಧನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಅಧಿಕೃತ ಮಾಹಿತಿ  ಇಲ್ಲಿಯವೆರೆಗೆ ಬಂದಿಲ್ಲ. 

click me!