ಛಾಯಿಬಾಸ ಖಜಾನೆ ಹಗರಣ: ಲಾಲುಗೆ ಸಿಕ್ತು ಜಾಮೀನು

Suvarna News   | Asianet News
Published : Oct 09, 2020, 12:40 PM ISTUpdated : Oct 09, 2020, 12:58 PM IST
ಛಾಯಿಬಾಸ ಖಜಾನೆ ಹಗರಣ: ಲಾಲುಗೆ ಸಿಕ್ತು ಜಾಮೀನು

ಸಾರಾಂಶ

ಮೇವು ಹಗರಣಕ್ಕೇ  ಸಂಬಂಧಿಸಿದ ಛಾಯಿಬಾಸ ಹಾಗೂ ದಿಯೋಘರ ಖಜಾನೆಯಿಂದ ಹಣ ತೆಗೆದ ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದು RJD ಮುಖ್ಯಸ್ಥನಿಗೆ ಬಿಗ್ ರಿಲೀಫ್. ಬಿಹಾರ ಚುನಾವಣೆ ಬೆನ್ನಲ್ಲೇ ಲಾಲುಗೆ ಬೇಲ್.

ರಾಂಚಿ (ಅ.9): ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಕಂಬಿ ಎಣಿಸುತ್ತಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‌ಗೆ ಜಾರ್ಖಂಡ್ ಹೈ ಕೋರ್ಟ್ ಜಾಮೀನು ನೀಡಿದೆ. ಆ ಮೂಲಕ ಬಿಹಾರ ಚುನಾವಣೆಯಲ್ಲಿ ಲಾಲು ಪ್ರಭಾವ ಹೆಚ್ಚುವ ಸಾಧ್ಯತೆ ಇದ್ದು, ಇದು ನಿತೀಶ್ ಕುಮಾರ್‌ಗೆ ಮತ್ತಷ್ಟು ಕಂಟಕವಾಗಲಿದೆ. 

 

 

ಈ ಹಿಂದೆ ಸುಪ್ರೀಂ ಕೋರ್ಟ್ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲುಗೆ ಜಾಮೀನು ನಿರಾಕರಿಸಿತ್ತು. 

ಬಿಹಾರ ಚುನಾವಣೆ: ಲಾಲುಗೆ ಕಡೇ ಅವಕಾಶ

 ಮೇವು ಹಗರಣ ಸಂಬಂಧ ಆರ್‌ಜೆಡಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. 900 ಕೋಟಿ ರು. ಮೇವು ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಲಾಲೂ ಪ್ರಸಾದ್‌ ಯಾದವ್‌ಗೆ ಶಿಕ್ಷೆಯಾಗಿದ್ದಲ್ಲದೇ, ದಿಯೋಘರ್‌ ಖಜಾನೆಯಿಂದ ಹಣ ತೆಗೆದ ಪ್ರಕರಣದಲ್ಲಿಯೂ ಲಾಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೀಗ ಜಾಮೀಮು ನಿಕ್ಕರೂ ಲಾಲು ಜೈಲಲ್ಲೇ ಇರಬೇಕಾಗಿದ್ದು, ಅವರ ವಿರುದ್ಧ ಇರುವ ಧಮಕಾ ಖಜಾನೆ ಹಗರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿ ಇನ್ನೂ ವಿಚಾರಣೆಯಾಗಬೇಕಿದೆ. 

ಜಾರ್ಖಂಡ್ ಹೈ ಕೋಟ್ರ್ ಲಾಲುಗೆ 50 ಸಾವಿರು ರೂ.ನ ಎರಡು ವೈಯಕ್ತಿಕ ಬಾಂಡ್ಸ್ ಹಾಗೂ ದಂಡದ ರೂಪದಲ್ಲಿ 2 ಲಕ್ಷ ರೂ. ಠೇವಣಿ ಇಡಬೇಕೆಂದು ಆದೇಶಿಸಿದೆ. 
 

 

ಜಾರ್ಖಂಡ್‌ನ ಖಜಾನೆಯಿಂದ ಕಾನೂನು ಬಾಹಿರವಾಗಿ 33.67 ಕೋಟಿ ರೂ. ವಿತ್‌ಡ್ರಾ ಮಾಡಿದ್ದ ಲಾಲು ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಈಗಾಗಲೇ ಅರ್ಧದಷ್ಟು ಶಿಕ್ಷೆಯನ್ನು ಅನುಭವಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂದೆ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ನೀಡಿತ್ತು.  

ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕರೂ, ಜೈಲು ವಾಸ ಕೊನೆಯಾಗದ ಲಾಲು ಈಗಾಗಲೇ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಜಾಮೀನು ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂ ಕೋರ್ಟ್ ಸಂಪೂರ್ಣ ಮಾಹಿತಿ ಕೇಳಿದ್ದು, ಇದರ ವಿಚಾರಣೆ ನ.6ರಂದು ಕೋರ್ಟ್ ಕೈಗೆತ್ತಿಕೊಳ್ಳಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!