ಈ ರಾಜ್ಯದ ಸಿಎಂ ಕೋಪಕ್ಕೆ ಕಾರಣವೇ ಇಲ್ಲ: I.N.D.I.A ಮೈತ್ರಿಕೂಟಕ್ಕೆ ರೆಡ್‌ ಕಾರ್ಡ್‌ ಆತಂಕ!

By Suvarna NewsFirst Published Sep 24, 2023, 2:50 PM IST
Highlights

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

ಕೇರಳ ಸಿಎಂ ಕೋಪಕ್ಕೆ ಕಾರಣವೇ ಇಲ್ಲ!
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕೋಪದ ಜ್ವಾಲಾಮುಖಿಯನ್ನು ಪ್ರಚೋದಿಸುವ ಕಾರಣಗಳು ನಿಗೂಢವಾಗಿಯೇ ಉಳಿದಿವೆ. ಅವರ ಅಸಮಾಧಾನವನ್ನು ಮತ್ತು ಕೋಪ ಯಾವಾಗ ಬರುತ್ತೆಂದು ಯಾರೂ ಊಹಿಸಲು ಸಾಧ್ಯವಿಲ್ಲ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ವಿಜಯನ್ ತಮ್ಮ ಭಾಷಣವನ್ನು ಮುಗಿಸುವ ಮೊದಲೇ ಮುಂದೆ ಮಾತನಾಡುವವರ ಹೆಸರನ್ನು ಘೋಷಿಸಲಾಯಿತು. ಈ ಹಿನ್ನೆಲೆ ಪಿಣರಾಯಿ ವಿಜಯನ್ ಸಂಘಟಕರ ಕಡೆಗೆ ಕೋಪೋದ್ರಿಕ್ತವಾಗಿ ನೋಡಿದ್ದಾರೆ. ಹಾಗೂ, ``ಇದು ಯಾವ ಸಂಸ್ಕೃತಿ? ನಾನು ಭಾಷಣ ಮುಗಿಸುವ ಮುನ್ನ ಅವರು ಹೇಗೆ ಘೋಷಣೆ ಮಾಡುತ್ತಾರೆ'' ಎಂದು ಹೊರನಡೆಯುವ ಮುನ್ನ ಕೇಳಿದರು. ಈ ಘಟನೆ ತಕ್ಷಣವೇ ವೈರಲ್ ಆಗಿದೆ.

ಬಳಿಕ, ಕೆಲವು ಗಂಟೆಗಳ ನಂತರ ಇದಕ್ಕೆ ಸ್ಪಷ್ಟನೆ ನೀಡಿದ ಪಿಣರಾಯಿ ವಿಜಯನ್, ``ನಾನು ಅನೌನ್ಸ್‌ ಮಾಡಿದ ವ್ಯಕ್ತಿಯ ತಪ್ಪನ್ನು ಮಾತ್ರ ಸರಿಪಡಿಸುತ್ತಿದ್ದೆ. ಇದು ನನ್ನ ಜವಾಬ್ದಾರಿ ಮತ್ತು ನಾನು ಅಂತಹ ಪ್ರೋಟೋಕಾಲ್ ಉಲ್ಲಂಘನೆಗಳನ್ನು ಕಂಡುಕೊಂಡಾಗಲೆಲ್ಲಾ ಅದನ್ನು ಮುಂದುವರಿಸುತ್ತೇನೆ ಎಂದೂ ಹೇಳಿದರು. ಅವರ ಮುಖದಲ್ಲಿ ಆಗ ಕಾಣಿಸಿಕೊಂಡ ನಗು ಸ್ವಲ್ಪ ಕೃತಕವಾಗಿ ಕಾಣಿಸಿತು ಎಂದು ಜನ ಮಾತನಾಡಿಕೊಂಡಿದ್ದಾರೆ. 

ಇದನ್ನು ಓದಿ: ಸೋಲಾರ್‌ ಬಿರುಗಾಳಿಗೆ ನಲುಗಿದ ಎರಡೂ ಪಕ್ಷಗಳು: ಈ ರಾಜ್ಯದ ಸಿಎಂ ತಂದೆಗಿಂತ ಹೆಚ್ಚು ಎಂದ ಹಾಸ್ಯ ನಟ!

ರೆಡ್‌ ಕಾರ್ಡ್
I.N.D.I.A ಒಕ್ಕೂಟ ಒಗ್ಗೂಡಿಸುವ ಪ್ರ
ಯತ್ನಗಳು ಇನ್ನೂ ನಡೆಯುತ್ತಿವೆ ಆದರೆ, ಈ ನಡುವೆ ಸಿಪಿಐ ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಸ್ಪರ್ಧಿಸಲು ನಿರ್ಧರಿಸಿದರೆ ಎಂಬ ಕಳವಳ ವ್ಯಕ್ತಪಡಿಸಿದೆ. ಇತ್ತೀಚೆಗೆ ನಡೆದ ಸಿಪಿಐ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಕೇರಳದ ನಾಯಕರೊಬ್ಬರು ಈ ವಿಷಯವನ್ನು ಪ್ರಸ್ತಾಪಿಸಿದ್ದು, ರಾಹುಲ್ ಅವರನ್ನು ಮತ್ತೆ ವಯನಾಡಿನಿಂದ ಕಣಕ್ಕಿಳಿಸುವ ಯಾವುದೇ ಸಾಧ್ಯತೆಯನ್ನು ರಾಷ್ಟ್ರೀಯ ನಾಯಕರು ಪೂರ್ವಭಾವಿಯಾಗಿ ತಿಳಿಸಬೇಕೆಂದು ಬಯಸಿದ್ದರು. ಹೆಚ್ಚಿನವರು ಅವರನ್ನು ಬೆಂಬಲಿಸದಿದ್ದರೂ, ಈ ವಿಷಯವು ಸಿಪಿಐ ನಿಲುವನ್ನು ಟೀಕಿಸುವ ಕೇರಳದ ಯುಡಿಎಫ್ ನಾಯಕರೊಂದಿಗೆ ಒಕ್ಕೂಟವನ್ನು ಅಲುಗಾಡಿಸುವ ಬೆದರಿಕೆ ಹಾಕುತ್ತಿದೆ. ಬಿರುಕುಗಳು ಆಳವಾದರೆ, ಕೇರಳದಲ್ಲಿ I.N.D.I.A ಗೆ ವಿಭಿನ್ನ ಆಟ ಬೇಕಾಗುತ್ತದೆ.

ಎಐಎಡಿಎಂಕೆ - ಬಿಜೆಪಿ ಮೈತ್ರಿ ಪತನಕ್ಕೆ ಇದೇ ಕಾರಣ
ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ದೂರು ನೀಡಲು ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡಿದ ಎಐಎಡಿಎಂಕೆ ನಾಯಕರು ಬರಿಗೈಯಲ್ಲಿ ಹಿಂತಿರುಗಬೇಕಾಯಿತು. ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಮತ್ತು ಜಯಲಲಿತಾ ಅವರ ಬಗ್ಗೆ ಮಾಡಿದ ಕಾಮೆಂಟ್‌ಗಳನ್ನು ಉಲ್ಲೇಖಿಸಿ ಅಣ್ಣಾಮಲೈ ಅವರನ್ನು ಬಿಜೆಪಿ ಹುದ್ದೆಯಿಂದ ತೆಗೆದುಹಾಕಬೇಕೆಂದು ಅವರು ಬಯಸಿದ್ದರು. ಅಣ್ಣಾಮಲೈ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮೈತ್ರಿಯಿಂದ ಹೊರಬರುವುದಾಗಿ ಎಐಎಡಿಎಂಕೆ ನಾಯಕರು ಬೆದರಿಕೆ ಹಾಕಿದ್ದರೂ, ಯಾವೊಬ್ಬ ಉನ್ನತ ನಾಯಕರೂ ಅವರ ವಾದವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ನಾಯಕರು ಈ ಸಭೆಯನ್ನು ಬಳಸಿಕೊಂಡು ಎಐಎಡಿಎಂಕೆ ಮೇಲೆ ಕೇಸರಿ ಮೈತ್ರಿಕೂಟವಾಗಿ 15 ಸ್ಥಾನಗಳಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರಿದರು.

ಇದನ್ನೂ ಓದಿ: ಸೂರ್ಯಂಗೆ ಟಾರ್ಚ್‌ ಹಿಡಿಯೋಕೋಗಿ ನೋ ಬಾಲ್‌ ಎಸೆದ ಕಾರ್ಯಕರ್ತರು: ಬಿಗ್‌ಬಾಸ್‌ ಆದೇಶಕ್ಕೆ ಸಚಿವರು ಕಂಗಾಲು!

ಹಿರಿಯ ನಾಯಕನ ಕಾರಿಗೆ ಮುತ್ತಿಗೆ ಹಾಕಿದ ಟಿಕೆಟ್‌ ಆಕಾಂಕ್ಷಿಗಳು!
ರಾಜಕೀಯ ನಾಯಕರಿಗೆ ಗುಂಪುಗಾರಿಕೆ ಹೊಸದೇನಲ್ಲ. ಆದರೆ ಜೈಪುರದ ಹಿರಿಯ ಕಾಂಗ್ರೆಸ್ ನಾಯಕರಿಗೆ ದುಃಸ್ವಪ್ನದ ಅನುಭವವಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಟಿಕೆಟ್ ಹಂಚಿಕೆ ಕುರಿತು ವರದಿ ಸಿದ್ಧಪಡಿಸುವಂತೆ ಹೈಕಮಾಂಡ್ ಸೂಚನೆ ಮೇರೆಗೆ ಜೈಪುರ ತಲುಪಿದ್ದರು. ಜೈಪುರಕ್ಕೆ ಆಗಮಿಸಿದಾಗ ನೇತಾಜಿಗೆ ತೀವ್ರ ಆಘಾತವಾಗಿದ್ದು, ಸುಮಾರು 400 ಟಿಕೆಟ್ ಆಕಾಂಕ್ಷಿಗಳು ಅವರ ಕಾರನ್ನು ಅಡ್ಡಗಟ್ಟಿದರು. ನೆರೆದಿದ್ದ ಜನಸಮೂಹವನ್ನು ಕಂಡ ನೇತಾಜಿಯವರು ಕಾರಿನಿಂದ ಇಳಿಯದಿರಲು ನಿರ್ಧರಿಸಿದರು. ಮಹತ್ವಾಕಾಂಕ್ಷೆಯ ನಾಯಕರು ಸುತ್ತುವರೆದಿದ್ದರೂ ಅವರು ಕಾರಿನೊಳಗೆ ಕುಳಿತರು.

ನೇತಾಜಿ ಎಷ್ಟು ಭಯಗೊಂಡರು ಎಂದರೆ ಅವರನ್ನು ಸುರಕ್ಷಿತವಾಗಿ ಕರೆತರಲು ರಾಜ್ಯದ ನಾಯಕರಿಗೆ ಕರೆ ಮಾಡಬೇಕಾಯಿತು. ಕೂಡಲೇ ನೇತಾಜಿಯನ್ನು ಕಾರಿನಿಂದ ಹೊರಕ್ಕೆ ಕರೆತರಲಾಯಿತು.ಇದರಿಂದ ಅವರು ``ಇನ್ನು ಮುಂದೆ ಟಿಕೆಟ್ ಹಂಚಿಕೆಯ ಬಗ್ಗೆ ಚರ್ಚಿಸಲು ಜೈಪುರಕ್ಕೆ ಪ್ರವಾಸವಿಲ್ಲ'' ಎಂದು ಹೇಳಿದರಂತೆ.

ಇದನ್ನೂ ಓದಿ: ಬಡತನ ನಿವಾರಣೆಗೆ ಸಿಪಿಎಂ ಹೊಸ ಪ್ಲ್ಯಾನ್‌; ವಿಷ ಕಾರಿದ ಈ ರಾಜ್ಯದ ರಾಜಕಾರಣಿ! ರಿಯಲ್ 'ಜೈಲರ್' ಸ್ಟೋರಿ ಹೀಗಿದೆ..

click me!