ರಾಮಮಂದಿರ ವಿವಾದ ಗಂಭೀರತೆ ಅರಿತು ಒಮ್ಮತದ ತೀರ್ಪು; ಈ ಕಾರಣ ತೀರ್ಪಿನಲ್ಲಿ ಜಡ್ಜ್‌ ಹೆಸರು ಹಾಕಲಿಲ್ಲ: ಚಂದ್ರಚೂಡ್

Published : Jan 02, 2024, 08:18 AM ISTUpdated : Jan 02, 2024, 08:20 AM IST
ರಾಮಮಂದಿರ ವಿವಾದ ಗಂಭೀರತೆ ಅರಿತು ಒಮ್ಮತದ ತೀರ್ಪು; ಈ ಕಾರಣ ತೀರ್ಪಿನಲ್ಲಿ ಜಡ್ಜ್‌ ಹೆಸರು ಹಾಕಲಿಲ್ಲ: ಚಂದ್ರಚೂಡ್

ಸಾರಾಂಶ

ಸಂವಿಧಾನ, ಕಾನೂನು ಪರಿಗಣಿಸಿ ಜಡ್ಜ್‌ಗಳಿಂದ ತೀರ್ಪು ನೀಡಲಾಗುತ್ತದೆ ಎಂದ ಚಂದ್ರಚೂಡ್‌, ಸಂವಿಧಾನದ 370ನೇ ವಿಧಿ, ಸಲಿಂಗ ವಿವಾಹ ತೀರ್ಪಿನ ಟೀಕೆಗೆ ಪ್ರತಿಕ್ರಯಿಸಲು ನಿರಾಕರಿಸಿದರು.

ನವದೆಹಲಿ (ಜನವರಿ 2, 2024): ದಶಕಗಳಿಂದ ಇದ್ದ ರಾಮಮಂದಿರ ವಿವಾದದ ಗಂಭೀರತೆ ಅರಿತು ಒಮ್ಮತದ ತೀರ್ಪು ಪ್ರಕಟಿಸುವ ತೀರ್ಮಾನಕ್ಕೆ ಬರಲಾಯಿತು. ಹಾಗೂ ಈ ತೀರ್ಪನ್ನು ಇಂಥವರೇ ನೀಡಿದರು ಎಂಬ ಕರ್ತೃತ್ವವನ್ನು ನೀಡದಿರಲು ನಿರ್ಧರಿಸಲಾಗಿತ್ತು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾ| ಡಿ.ವೈ. ಚಂದ್ರಚೂಡ್‌ ಹೇಳಿದ್ದಾರೆ. 

ಪಿಟಿಐ ಸುದ್ದಿಸಂಸ್ಥೆಗೆ ಸೋಮವಾರ ಸಂದರ್ಶನ ನೀಡಿದ ಅವರು, ‘ತೀರ್ಪಿನಲ್ಲಿ ಪೀಠದಲ್ಲಿನ ಯಾವ ನ್ಯಾಯಮೂರ್ತಿಗಳ ಅನಿಸಿಕೆ ಏನಾಗಿತ್ತು ಎಂಬುದನ್ನು ಪ್ರತ್ಯೇಕವಾಗಿ ಬರೆಯಲಿಲ್ಲ. ಪ್ರಕರಣದ ಇತಿಹಾಸ ಹಾಗೂ ವಿಭಿನ್ನ ಅನಿಸಿಕೆಗಳನ್ನು ಗಮನದಲ್ಲಿ ಇರಿಸಿಕೊಂಡು, ತೀರ್ಪಿಗೂ ಮುನ್ನ ಸಭೆ ನಡೆಸಿ ಒಂದೇ ಸ್ವರದ ತೀರ್ಪು ನೀಡಲು ತೀರ್ಮಾನಿಸಲಾಯಿತು. ಕೇಸಿನ ಗಂಭೀರತೆ ಅರಿತು ಜಡ್ಜ್‌ಗಳ ಅನಿಸಿಕೆಗಳನ್ನು ಅವರವರ ಹೆಸರಲ್ಲಿ ಪ್ರತ್ಯೇಕವಾಗಿ ಪ್ರಕಟಿಸದೇ ಕೇವಲ ‘ಕೋರ್ಟ್‌ ತೀರ್ಪು’ ಎಂದು ಬರೆಯಲಾಯಿತು’ ಎಂದರು. 

ಇದನ್ನು ಓದಿ: ಮಥುರಾ ಕೃಷ್ಣ ಜನ್ಮಭೂಮಿ ಸರ್ವೇ: ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ; ಹಿಂದೂಗಳಿಗೆ ಮತ್ತೆ ಜಯ!

370 ಬಗ್ಗೆ ಮಾತಾಡಲ್ಲ: ಇದೇ ವೇಳೆ ಸಂವಿಧಾನ, ಕಾನೂನು ಪರಿಗಣಿಸಿ ಜಡ್ಜ್‌ಗಳಿಂದ ತೀರ್ಪು ನೀಡಲಾಗುತ್ತದೆ ಎಂದ ಚಂದ್ರಚೂಡ್‌, ಸಂವಿಧಾನದ 370ನೇ ವಿಧಿ, ಸಲಿಂಗ ವಿವಾಹ ತೀರ್ಪಿನ ಟೀಕೆಗೆ ಪ್ರತಿಕ್ರಯಿಸಲು ನಿರಾಕರಿಸಿದರು. ತೀರ್ಪು ಪ್ರಕಟದ ಬಳಿಕ ಅದು ಸಾರ್ವಜನಿಕ ಆಸ್ತಿ, ಪ್ರತಿಕ್ರಿಯೆ ನೀಡಲು ಎಲ್ಲರೂ ಮುಕ್ತ ಎಂದರಲ್ಲದೆ, ನ್ಯಾಯಮೂರ್ತಿಗಳ ನೇಮಕ ಕುರಿತ ಕೊಲಿಜಿಯಂ ವ್ಯವಸ್ಥೆ ಸದೃಢವಾಗಿದೆ ಎಂದು ಸ್ಪಷ್ಟಪಡಿಸಿದರು. 

ಜನವರಿ 22ರ ಮಧ್ಯಾಹ್ನ 12.20ಕ್ಕೆ ರಾಮಲಲ್ಲಾ ಪ್ರತಿಷ್ಠಾಪನೆ
ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆಯು ಜನವರಿ 22ರ ಮಧ್ಯಾಹ್ನ 12.20ಕ್ಕೆ ನೆರವೇರಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಸೋಮವಾರ ನಡೆದ ‘ಅಕ್ಷತೆ ವಿತರಣೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜನವರಿ 22ರಂದು ಶ್ರೀರಾಮ ಮಂದಿರ ಉದ್ಘಾಟನೆಯ ದಿನ ಮಧ್ಯಾಹ್ನ 12.20ಕ್ಕೆ ರಾಮ ಲಲ್ಲಾ ವಿಗ್ರಹವನ್ನು ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ‘ಪ್ರಾಣ ಪ್ರತಿಷ್ಠಾಪನೆ’ ಕಾರ್ಯಕ್ರಮ ನೆರವೇರಿಸಲಾಗುವುದು. ಇದಾದ ಬಳಿಕ ಜನರು ಆರತಿ ಮಾಡಬೇಕು. ನಂತರ ಪ್ರಸಾದ ವಿತರಿಸಬೇಕು. ಸೂರ್ಯಾಸ್ತದ ಬಳಿಕ ದೀಪ ಬೆಳಗಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿಗೆ ಇದೇ ಮನವಿ ಮಾಡಿದ್ದಾರೆ’ ಎಂದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್‌: ಮೋದಿ ಸರ್ಕಾರಕ್ಕೆ ಜಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!