ಅತ್ಯಾಚಾರದಲ್ಲಿ ಕಂಗನಾ ಅನುಭವಿ: ಅಕಾಲಿದಳ ನಾಯಕನ ವಿವಾದಾತ್ಮಕ ಹೇಳಿಕೆಗೆ ಕಂಗನಾ ಕೆಂಡ!

Published : Aug 30, 2024, 08:28 AM ISTUpdated : Aug 30, 2024, 08:38 AM IST
ಅತ್ಯಾಚಾರದಲ್ಲಿ ಕಂಗನಾ ಅನುಭವಿ: ಅಕಾಲಿದಳ ನಾಯಕನ ವಿವಾದಾತ್ಮಕ ಹೇಳಿಕೆಗೆ ಕಂಗನಾ ಕೆಂಡ!

ಸಾರಾಂಶ

ರೈತ ಪ್ರತಿಭಟನೆಗಳ ವೇಳೆ ಅತ್ಯಾಚಾರಗಳು ನಡೆದಿದ್ದವು’ ಎಂಬ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್‌ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಅಕಾಲಿ ದಳ (ಅಮೃತಸರ) ಮುಖಂಡ ಮಾಜಿ ಸಂಸದ ಸಿಮ್ರನ್‌ಜಿತ್‌ ಸಿಂಗ್‌ ಮಾನ್‌ ವಿವಾದಿತ ಹೇಳಿಕೆ ನೀಡಿದ್ದಾರೆ. ‘ಕಂಗನಾ ಅತ್ಯಾಚಾರ ವಿಷಯದಲ್ಲಿ ಅನುಭವಿ’ ಎಂಬುದೇ ಆ ವಿವಾದಿತ ಹೇಳಿಕೆ

ಚಂಡೀಗಢ: ‘ರೈತ ಪ್ರತಿಭಟನೆಗಳ ವೇಳೆ ಅತ್ಯಾಚಾರಗಳು ನಡೆದಿದ್ದವು’ ಎಂಬ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್‌ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಅಕಾಲಿ ದಳ (ಅಮೃತಸರ) ಮುಖಂಡ ಮಾಜಿ ಸಂಸದ ಸಿಮ್ರನ್‌ಜಿತ್‌ ಸಿಂಗ್‌ ಮಾನ್‌ ವಿವಾದಿತ ಹೇಳಿಕೆ ನೀಡಿದ್ದಾರೆ. ‘ಕಂಗನಾ ಅತ್ಯಾಚಾರ ವಿಷಯದಲ್ಲಿ ಅನುಭವಿ’ ಎಂಬುದೇ ಆ ವಿವಾದಿತ ಹೇಳಿಕೆ

‘3 ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುವ ವೇಳೆ ಹೆಣಗಳು ಬಿದ್ದಿದ್ದವು ಹಾಗೂ ಅತ್ಯಾಚಾರ ನಡೆದಿದ್ದವು’ ಎಂದು ಇತ್ತೀಚೆಗೆ ಟೀವಿ ಸಂದರ್ಶನದಲ್ಲಿ ಕಂಗನಾ ಹೇಳಿದ್ದರು. ಈ ಹೇಳಿಕೆ ಬಗ್ಗೆ ಕಂಗನಾಗೆ ಬಿಜೆಪಿ ಖುದ್ದು ಛೀಮಾರಿ ಹಾಕಿತ್ತು. ಈ ಬಗ್ಗೆ ಗುರುವಾರ ಪತ್ರಕರ್ತರು ಮಾನ್‌ ಅವರನ್ನು ಪ್ರಶ್ನಸಿದಾಗ ‘ಅತ್ಯಾಚಾರ ಹೇಗೆ ಸಂಭವಿಸುತ್ತದೆ ಎಂದು ಅವರನ್ನೇ (ಕಂಗನಾ ಅವರನ್ನೇ) ಕೇಳಿ. ಇದರಿಂದ ಜನರಿಗೂ ತಿಳಿವಳಿಕೆ ಬರುತ್ತದೆ. ಏಕೆಂದರೆ ಅತ್ಯಾಚಾರ ವಿಷಯದಲ್ಲಿ ಅವರು (ಕಂಗನಾ) ತುಂಬಾ ಅನುಭವಿ’ ಎಂದರು.

ಬಾಲಿವುಡ್ ಟು ರಾಜಕೀಯ: ಕಂಗನಾ ರಣಾವತ್ ನೀಡಿದ 10 ವಿವಾದಾತ್ಮಕ ಹೇಳಿಕೆಗಳು

ಕಂಗನಾ ತಿರುಗೇಟು

ಅಕಾಲಿ ನಾಯಕನ ಹೇಳಿಕೆಗೆ ಟ್ವಿಟರ್ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಂಗಾನ, ಈ ದೇಶದಲ್ಲಿ ಅತ್ಯಾಚಾರವನ್ನು ಕ್ಷುಲ್ಲಕಗೊಳಿಸುವುದನ್ನ ಎಂದಿಗೂ ನಿಲ್ಲಿಸುವುದಿಲ್ಲ ಎಂದು ತೋರುತ್ತದೆ. . ಈ ಹಿರಿಯ ರಾಜಕಾರಣಿಯಾಗಿ ಅತ್ಯಾಚಾರವನ್ನು ಬೈಸಿಕಲ್ ಸವಾರಿಗೆ ಹೋಲಿಕೆ ಮಾಡಿದ್ದಾನೆಂದರೆ ಇಂತವರ ಮನಸ್ಥಿತಿ ಹೇಗಿರಬಹುದು, ಮಹಿಳೆಯರನ್ನ ಯಾವ ನೋಡುತ್ತಿರಬಹುದು. ಅತ್ಯಾಚಾರ ಮೋಜಿಗಾಗಿ ಮಹಿಳೆಯರ ಮೇಲಿನ ದೌರ್ಜನ್ಯವಾಗಿ ಬೇರೂರಿವೆ ಎಂದರೆ ಇಂತಹ ಮನಸ್ಥಿತಿ ಕಾರಣ ಎಂದು ತಿರುಗೇಟು ನೀಡಿದ್ದಾರೆ.

ನಡ್ಡಾ ಜತೆ ಕಂಗನಾ ಭೇಟಿ:

ಈ ನಡುವೆ ವಿವಾದಿತ ಹೇಳಿಕೆ ನೀಡಿ ಛೀಮಾರಿಗೆ ಒಳಗಾಗಿದ್ದ ಕಂಗನಾ ಗುರುವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದರು. ಈ ವೇಳೆ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ