ಕಳೆದ ವರ್ಷದಂತೆ ಸುಗ್ರೀವಾಜ್ಞೆ ಮೂಲಕ ಬಜೆಟ್‌ಗೆ ಅನುಮೋದನೆ ಪಡೆದ ಆಂಧ್ರ!

Published : Mar 29, 2021, 11:34 AM IST
ಕಳೆದ ವರ್ಷದಂತೆ ಸುಗ್ರೀವಾಜ್ಞೆ ಮೂಲಕ ಬಜೆಟ್‌ಗೆ ಅನುಮೋದನೆ ಪಡೆದ ಆಂಧ್ರ!

ಸಾರಾಂಶ

ಕಳೆದ ವರ್ಷದಂತೆ ಸುಗ್ರೀವಾಜ್ಞೆ ಮೂಲಕ ಬಜೆಟ್‌ಗೆ ಅನುಮೋದನೆ ಪಡೆದ ಆಂಧ್ರ| ಚುನಾವಣೆಗಳ ಹಿನ್ನೆಲೆಯಲ್ಲಿ ಅಧಿವೇಶನ ಕರೆಯಲು ನಕಾರ| ಸಚಿವರಿಗೆ ಆನ್‌ಲೈನ್‌ನಲ್ಲಿ ಬಜೆಟ್‌ ಪ್ರತಿಗಳ ಪೂರೈಕೆ

ಅಮರಾವತಿ(ಮಾ.29): ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರು ಸುಗ್ರೀವಾಜ್ಞೆ ಮೂಲಕವೇ 2021-22ನೇ ಸಾಲಿನ ಬಜೆಟ್‌ಗೆ ಮಂಡಿಸಿದ್ದಾರೆ. ಕೊರೋನಾ ಕಾರಣಕ್ಕೆ ಕಳೆದ ವರ್ಷವೂ ಅಂದರೆ 2020-21ನೇ ಸಾಲಿನಲ್ಲೂ ಇದೇ ರೀತಿ ಸುಗ್ರೀವಾಜ್ಞೆಯಿಂದಲೇ ಬಜೆಟ್‌ ಅನುಮೋದನೆ ಪಡೆಯಲಾಗಿತ್ತು.

ಏಪ್ರಿಲ್‌ನಿಂದ ಆರಂಭವಾಗಲಿರುವ ನೂತನ ವಿತ್ತೀಯ ವರ್ಷದ ಕೆಲ ತಿಂಗಳುಗಳ ಕಾಲ ವಿನಿಯೋಗಕ್ಕಾಗಿ ರಾಜ್ಯದ ಬೊಕ್ಕಸದಿಂದ ಹಣ ಪಡೆಯಲು ಅನುಮತಿಸುವ ಸುಗ್ರೀವಾಜ್ಞೆಗೆ ರಾಜ್ಯಪಾಲ ವಿಶ್ವಭೂಷಣ್‌ ಹರಿಚಂದ್ರನ್‌ ಅವರು ಅನುಮೋದಿಸಿದ್ದಾರೆ.

ತಿರುಪತಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮಾ.31ರ ಒಳಗೆ ವಿಧಾನಸಭೆ ಅಧಿವೇಶನ ನಡೆಸದೇ ಇರಲು ನಿರ್ಧರಿಸಿದೆ. ಹೀಗಾಗಿ ಮುಖ್ಯಮಂತ್ರಿ ಕಚೇರಿಯು ಆನ್‌ಲೈನ್‌ ಮೂಲಕ ಬಜೆಟ್‌ ಪ್ರತಿಗಳನ್ನು ಸಚಿವರಿಗೆ ರವಾನಿಸಿದ್ದು, ಈ ಸುಗ್ರೀವಾಜ್ಞೆಯನ್ನು ಸಚಿವ ಸಂಪುಟವೂ ಅನುಮೋದಿಸಿದೆ. ಈ ಮಾಹಿತಿಯನ್ನು ರಾಜ್ಯಪಾಲರಿಗೆ ರವಾನಿಸಲಾಗಿದ್ದು, ಸುಗ್ರೀವಾಜ್ಞೆಗೆ ರಾಜ್ಯಪಾಲರು ಭಾನುವಾರ ಸಮ್ಮತಿ ಸೂಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ
18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು