'ಬಿರಿಯಾನಿ, ಫೂಟ್ ಮಸಾಜರ್, ಪಿಝಾ..! ಇದೇನು ಪ್ರತಿಭಟನೆಯಾ, ಪಿಕ್‌ನಿಕ್ಕಾ'..?

Published : Dec 13, 2020, 02:34 PM ISTUpdated : Dec 13, 2020, 02:53 PM IST
'ಬಿರಿಯಾನಿ, ಫೂಟ್ ಮಸಾಜರ್, ಪಿಝಾ..! ಇದೇನು ಪ್ರತಿಭಟನೆಯಾ, ಪಿಕ್‌ನಿಕ್ಕಾ'..?

ಸಾರಾಂಶ

ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿರುವುದು ಎಲ್ಲರಿಗೂ ಗೊತ್ತು. ಆದ್ರೆ ಅಲ್ಲಿನ ಲ್ಯಾವಿಶ್ ಲೈಫ್ ಹೇಗಿದೆ ಗೊತ್ತಾ..? ಪ್ರತಿಭಟನೆ ಇದೀಗ ಆಡಂಬರ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ

ಹರಿಯಾಣ, ಪಂಜಾಬ್ ಸೇರಿ ಇತರ ರಾಜ್ಯಗಳ ಸಾವಿರಾರು ರೈತರು ದೆಹಲಿ ಗಡಿಯಲ್ಲಿ ಪ್ರತಿಭನೆ ನಡೆಸುತ್ತಿದ್ದಾರೆ. ಅನಿರ್ದಿಷ್ಆವಧಿಯ ಪ್ರತಿಭಟನೆ ನಡೆಸುತ್ತಿರುವ ರೈತರು ನ್ಯೂ ಫಾರ್ಮ್ ಬಿಲ್‌ಗಳನ್ನು ವಿರೋಧಿಸುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರ ಲೈಫ್ ಹೇಗಿದೆ ಗೊತ್ತಾ...? ಇದೇ ವಿಚಾರವಾಗಿ ಪ್ರತಿಭಟನೆ ವಿಷಯ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ.

ಕನಿಷ್ಢ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸುತ್ತಿರುವ ರೈತರ ಪ್ರತಿಭಟನಾ ಸ್ಥಳದ ಜೀವನ ಭಿನ್ನವಾಗಿದೆ. ಪ್ರತಿಭಟನಾಕಾರರು ಊರು, ಮನೆ ಬಿಟ್ಟು ದೆಹಲಿಗೆ ಬಂದಿರುವಾಗ ಅವರ ಊಟ, ನಿದ್ದೆಯ ಕಥೆ ಏನು..?

ಕೃಷಿ ಕಾಯ್ದೆ ರದ್ದು ಮಾಡಿದರೆ ಪ್ರತಿಭಟನೆ: ಹರ್ಯಾಣ ರೈತರು!

ದೆಹಲಿಯ ಡಿಸೆಂಬರ್ ಚಳಿ ಮಧ್ಯೆ ಕಷ್ಟಪಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ ರೈತರು. ಪ್ರತಿಭಟನಾಕಾರರಿಗೆ ರೊಟ್ಟಿ ಮಾಡುವ ಯಂತ್ರವನ್ನು ಒದಗಿಸಲಾಗಿದೆ. ಒಂದು ಗಂಟೆಯಲ್ಲಿ ಈ ಮೆಷಿನ್ 1500ರಿಂದ 2000 ರೊಟ್ಟಿಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ.

ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರೇ ಭಾಗಿಯಾಗಿರುವುದರಿಂದ ಅವರಿಗೆ ಆರೋಗ್ಯ ಸಮಸ್ಯೆಯಾಗದಂತೆ ಅಂತಾರಾಷ್ಟ್ರೀಯ ಎನ್‌ಜಿಒ ಖಲ್ಸಾ ಫೂಟ್ ಮಸಾಜರ್ ಕೂಡಾ ಅಳವಡಿಸಿದೆ. ಸುಮಾರು 25 ಮೆಷಿನ್‌ಗಳನ್ನು ಅಳವಡಿಸಲಾಗಿದ್ದು, 10 ನಿಮಿಷ ರೈತರಿಗೆ ಫೂಟ್ ಮಸಾಜ್‌ ಸೇವೆಯೂ ಇದೆ.

ಟೆಸ್ಟ್‌ಗೆ ಒಳಗಾಗಲು ನಕಾರ, ಕೊರೋನಾದಿಂದ ರೈತರ ಹೋರಾಟ ದುರ್ಬಲ ಭೀತಿ!

ಟೀ, ಸ್ನ್ಯಾಕ್ಸ್ ಮಾತ್ರವಲ್ಲದೆ, ಬಾರ್ಮಿ ಮತ್ತು ಬೋಪಾಲನ್ ಗ್ರಾಮದ ಭಾರತೀಯ ಕಿಸಾನ್ ಯೂನಿಯನ್ ಪಿಝಾ ಹಂಚಿತ್ತು. ಬಹಳಷ್ಟು ಜನರು ರೈತರಿಗೆ ನೆರವಾಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಇದೆಂಥಾ ಪ್ರತಿಭಟನೆಗೆ ಬಂದು ಲ್ಯಾವಿಷ್ ಲೈಫ್ ಎಂಜಾಯ್ ಮಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ. ನಿಜವಾದ ರೈತರು ಗದ್ದೆಯಲ್ಲಿ ಕೆಲಸ ಮಾಡುತ್ತಾರೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು