Fact Check: ಗಾಯಗೊಳ್ಳದಿದ್ದರೂ ಬ್ಯಾಂಡೇಜ್‌ ಸುತ್ತಿಕೊಂಡ್ರಾ CAA ಪ್ರತಿಭಟನಾಕಾರರು?

Suvarna News   | Asianet News
Published : Jan 06, 2020, 10:55 AM ISTUpdated : Jan 06, 2020, 10:56 AM IST
Fact Check: ಗಾಯಗೊಳ್ಳದಿದ್ದರೂ ಬ್ಯಾಂಡೇಜ್‌ ಸುತ್ತಿಕೊಂಡ್ರಾ CAA ಪ್ರತಿಭಟನಾಕಾರರು?

ಸಾರಾಂಶ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಗಾಯಗೊಳ್ಳದಿದ್ದರೂ ಬ್ಯಾಂಡೇಜ್‌ ಕಟ್ಟಿಕೊಳ್ಳಲಾಗಿತ್ತು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಗಾಯಗೊಳ್ಳದಿದ್ದರೂ ಬ್ಯಾಂಡೇಜ್‌ ಕಟ್ಟಿಕೊಳ್ಳಲಾಗಿತ್ತು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದರೊಂದಿಗೆ ಲಗತ್ತಿಸಲಾಗಿರುವ ಫೋಟೋದಲ್ಲಿ ಹಿಜಾಬ್‌ ಮೇಲೆ ಬ್ಯಾಡೇಜ್‌ ಸುತ್ತಿರುವ ಮತ್ತು ಶರ್ಟಿನ ತೋಳುಗಳ ಮೇಲೆ ಬ್ಯಾಂಡೇಜ್‌ ಸುತ್ತಿರುವ ದೃಶ್ಯವಿದೆ. ಇದನ್ನು ಪೋಸ್ಟ್‌ ಮಾಡಿ, ಪೊಲೀಸರು ಆಕ್ರಮಣ ಮಾಡಿದ್ದಾರೆಂದು ಸುಳ್ಳು ಕತೆ ಕಟ್ಟುವ ನೆಪದಲ್ಲಿ ಆದ ಅಪಸವ್ಯ ಎಂದು ಗೇಲಿ ಮಾಡಿ ಒಕ್ಕಣೆ ಬರೆಯಲಾಗುತ್ತಿದೆ.

ಬಾಂಗ್ಲಾ ವಿಡಿಯೋ ಹಾಕಿ ಭಾರತದ್ದು ಎಂದ ಇಮ್ರಾನ್: ಟ್ವೀಟ್ ಟ್ಯಾಗ್ ಬ್ಲಾಕ್!

ಈ ಚಿತ್ರಗಳು ಸೋಷಿಯಲ್‌ ಮೀಡಿಯಾಗಳಲಲಿ ಬಾರೀ ವೈರಲ್‌ ಆಗುತ್ತಿವೆ. ಡಿಸೆಂಬರ್‌ 15ರಂದು ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಪೊಲೀಸರೂ ವಿವಿಯೊಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದರು. ಅನಂತರ ಈ ಪೋಟೋಗಳು ವೈರಲ್‌ ಆಗುತ್ತಿವೆ.

 

ಆದರೆ ನಿಜಕ್ಕೂ ಪೊಲೀಸರ ದಾಳಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲು ವಿದ್ಯಾರ್ಥಿಗಳು ಗಾಯಗೊಳ್ಳದಿದ್ದರೂ ಬ್ಯಾಂಡೇಜ್‌ ಸುತ್ತಿಕೊಂಡಿದ್ದರೇ ಎಂದು ಬೂಮ್‌ಲೈವ್‌ ಸುದ್ದಿ ಸಂಸ್ಥೆ ಪರಿಶೀಲಿಸಿದಾಗ ವೈರಲ್‌ ಆಗಿರುವ ಸುದ್ದಿ ಸುಳ್ಳು ಎಂದು ತಿಳಿದುಬಂದಿದೆ. ಜಾಮಿಯಾ ಮಿಲಿಯಾ ವಿವಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ಮಹಮ್ಮದ್‌ ಮಿನ್ಹಾಜುದ್ದೀನ್‌ ಎಂಬ ವಿದ್ಯಾರ್ಥಿ ಒಂದು ಕಣ್ಣನ್ನು ಕಳೆದುಕೊಂಡಿದ್ದ.

ಈ ಘಟನೆ ನಡೆದ ಬಳಿಕ ಡಿ.29ರಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಣ್ಣಿಗೆ ಬ್ಯಾಂಡೇಜ್‌ ಸುತ್ತಿಕೊಂಡು ಪೊಲೀಸರ ಕ್ರೌರ‍್ಯವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದರು. ಈ ಕುರಿತ ಹಲವಾರು ಫೋಟೋಗಳು ಇಂಟರ್‌ನೆಟ್‌ನಲ್ಲಿ ಲಭ್ಯವಿವೆ. ಅಲ್ಲಿಗೆ ಸಿಎಎ ಪ್ರತಿಭಟನೆ ವೇಳೆ ಗಾಯಗೊಳ್ಳದಿದ್ದರೂ ಬ್ಯಾಂಡೇಜ್‌ ಸುತ್ತಿಕೊಂಡಿದ್ದರು ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್