ಆನ್ಲೈನ್ನಲ್ಲೇ ನಾಮಪತ್ರಕ್ಕೆ ಅವಕಾಶ| ಮತದಾನ ಅವಧಿ 1 ತಾಸು ವಿಸ್ತರಣೆ| ಮನೆಮನೆ ಪ್ರಚಾರಕ್ಕೆ 5 ಜನರ ಮಿತಿ| ರೋಡ್ ಶೋಗೆ 5ಕ್ಕಿಂತ ಹೆಚ್ಚು ವಾಹನ ಬಳಕೆ ಇಲ್ಲ
ನವದೆಹಲಿ(ಫೆ.27): ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ಐದು ರಾಜ್ಯಗಳ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾದ ಎಲ್ಲಾ ಸಿಬ್ಬಂದಿಗೆ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ದೇಶಾದ್ಯಂತ ಮತ್ತೊಮ್ಮೆ ಕೊರೋನಾ ಸೋಂಕು ಉಬ್ಬರದ ನಡುವೆಯೇ ನಡೆಯುತ್ತಿರುವ ಐದು ರಾಜ್ಯಗಳ ಚುನಾವಣೆ ವೇಳೆ ಸೋಂಕು ವ್ಯಾಪಕವಾಗಿ ಹಬ್ಬದಂತೆ ಹೆಚ್ಚಿನ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಆನ್ಲೈನ್ನಲ್ಲೇ ನಾಮಪತ್ರ ಹಾಕಲು ಅವಕಾಶ ನೀಡಲಾಗುತ್ತದೆ. ಜನಸಂದಣಿ ತಪ್ಪಿಸಲು ಮತದಾನದ ಅವಧಿ 1 ತಾಸು ವಿಸ್ತರಿಸಲಾಗುತ್ತದೆ ಎಂದು ಆಯೋಗ ಮುಖ್ಯಸ್ಥ ಸುನೀಲ್ ಆರೋರಾ ಹೇಳಿದರು.
ಮನೆ-ಮನೆ ಪ್ರಚಾರಕ್ಕೆ ಅಭ್ಯರ್ಥಿ ಸೇರಿದಂತೆ ಐದಕ್ಕಿಂತ ಹೆಚ್ಚು ಮಂದಿ ತೆರಳುವಂತಿಲ್ಲ. ಅಲ್ಲದೆ ರೋಡ್ ಶೋಗೆ ಐದಕ್ಕಿಂತ ಹೆಚ್ಚು ವಾಹನಗಳ ಬಳಕೆಗೆ ಅವಕಾಶವಿಲ್ಲ ಎಂದು ಅವರು ಹೇಳಿದರು.