ಬೆಳಗ್ಗೆ ವಿಶಾಖಪಟ್ಟಣ, ಸಂಜೆ ತಮಿಳುನಾಡು.. ಸ್ಫೋಟಗೊಂಡ ಬಾಯ್ಲರ್

Published : May 07, 2020, 10:28 PM ISTUpdated : May 07, 2020, 10:33 PM IST
ಬೆಳಗ್ಗೆ ವಿಶಾಖಪಟ್ಟಣ, ಸಂಜೆ ತಮಿಳುನಾಡು.. ಸ್ಫೋಟಗೊಂಡ ಬಾಯ್ಲರ್

ಸಾರಾಂಶ

ತಮಿಳುನಾಡಿನಲ್ಲಿ ಬಾಯ್ಲರ್ ಸ್ಫೋಟ/ 8 ಜನ ಕಾರ್ಮಿಕರಿಗೆ ಗಂಭೀರ ಗಾಯ/ ಗಾಯಾಳುಗಳು ಆಸ್ಪತ್ರಗೆ ದಾಖಲು/ ಅಗ್ನಿಶಾಮಕದಳದಿಂದ ಪರಿಸ್ಥಿತಿ ಹತೋಟಿಗೆ

ಚೆನ್ನೈ(ಮೇ 07)  ಗುರುವಾರ ಬೆಳ್ಳಂಬೆಳಗ್ಗೆ ವಿಶಾಖಪಟ್ಟಣದ ಗ್ಯಾಸ್ ಸೋರಿಕೆ ದುರಂತದ ವರದಿ ಮಾಡಿ ಆಗಿದೆ. ಈಗ ತಮಿಳುನಾಡಿಲ್ಲಿಯೂ ಮತ್ತೊಂದು ದುರಂತ ನಡೆದಿದ್ದು ಹೇಳಲೇಬೇಕಾಗಿದೆ.

ಬಾಯ್ಲರ್ ಸ್ಫೋಟದ ಪರಿಣಾಮ 8 ಜನ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.  ತಮಿಳುನಾಡಿನ ಕಡಲೂರು ಜಿಲ್ಲೆಯ ನೆಯೆವೆಲಿ ಲಿಗ್ನೈಟ್ ಕಾರ್ಪೊರೇಷನ್ ವಿದ್ಯುತ್ ಸ್ಥಾವರದಲ್ಲಿ ಗುರುವಾರ ಬಾಯ್ಲರ್ ಸ್ಫೋಟವಾಗಿದೆ.

ಉಸಿರಾಡುವ ಗಾಳಿಯೇ ವಿಷವಾಯಿತು

ಸಾಮಾನ್ಯ ತಾಪಮಾನ ಇದ್ದರೂ ಸ್ಫೋಟ ಸಂಭವಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಪರಿಸ್ಥಿತಿ ಹತೋಟಿಗೆ ತಂದಿದೆ.  ಎರಡನೇ ವಿದ್ಯುತ್ ಸ್ಥಾವರದ ಆರನೇ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ಸೆಟ್ ಹತ್ತಿರದಲ್ಲಿ ಸಂಗ್ರಹವಾಗಿದ್ದ ತೈಲಕ್ಕೆ ಬೆಂಕಿ ಹಚ್ಚಿದೆ. ಇದು 210 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. 

ಗಾಯಾಳುಗಳನ್ನು ನೆಯೆವೇಲಿಯ ಎನ್‌ಎಲ್‌ಸಿ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯ ತನಿಖೆಗಾಗಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.   ಬೆಳಗ್ಗೆ ವಿಶಾಖಪಟ್ಟಣ ದುರಂತ ಸಂಜೆ ತಮಿಳುನಾಡು ದುರಂತ ಗುರುವಾರವನ್ನು ಕರಾಳವಾಗಿಸಿತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!