ರೈಲು ಬರುತ್ತಿದ್ದ ಹಳಿಯಲ್ಲೇ ಥಾರ್ ಕಾರು ನುಗ್ಗಿಸಿದ ಕುಡುಕ, ಬಳಿಕ ನಡೆದಿದ್ದೇ ಅಚ್ಚರಿ!

Published : Nov 12, 2024, 08:16 PM IST
ರೈಲು ಬರುತ್ತಿದ್ದ ಹಳಿಯಲ್ಲೇ ಥಾರ್ ಕಾರು ನುಗ್ಗಿಸಿದ ಕುಡುಕ, ಬಳಿಕ ನಡೆದಿದ್ದೇ ಅಚ್ಚರಿ!

ಸಾರಾಂಶ

ನಶೆ ಏರಿಕಾದ ರಸ್ತೆ ಯಾವುದು? ರೈಲು ಹಳಿ ಯಾವುದು ಅನ್ನೋದೇ ತಿಳಿಯದಾಗಿದೆ. ರಸ್ತೆ ಎಂದುಕೊಂಡು ರೈಲು ಹಳಿಯಲ್ಲೇ ಥಾರ್ ಚಲಾಯಿಸಿದ್ದಾರೆ. ಎದುರಿನಿಂದ ವೇಗವಾಗಿ ರೈಲು ಆಗಮಿಸಿದೆ. ಮುಂದೇನಾಯ್ತು?   

ಜೈಪುರ(ನ.12) ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ತೂರಾಡುತ್ತಾ ಸಾಗಿದ, ಎಗರಿ ಬಿದ್ದ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಇನ್ನು ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಹಲವ ಜೀವ ಬಲಿಪಡೆದ ಘಟನೆಗಳು ನಡೆದಿದೆ. ಇದೀಗ ವ್ಯಕ್ತಿಯೊಬ್ಬ ಕುಡಿದ ನಶೆಯಲ್ಲಿ ರೈಲು ಹಳಿಯಲ್ಲಿ ಮಹೀಂದ್ರ ಥಾರ್ ಕಾರನ್ನು ಚಲಾಯಿಸಿದ್ದಾನೆ. ಹಲವರು ಕೂಗಿಕೊಂಡರೂ ವ್ಯಕ್ತಿ ಮಾತ್ರ ವೇಗವಾಗಿ ಕಾರು ರೈಲು ಹಳಿಯಲ್ಲಿ ಚಲಾಯಿಸಿದ್ದಾನೆ. ಇದೇ ವೇಳೆ ವಿರುದ್ಧ ದಿಕ್ಕಿನಿಂದ ರೈಲು ಆಗಮಿಸಿದೆ. ಅದೃಷ್ಠವಶಾತ್ ಲೋಕೋಪೈಲೆಟ್ ಕಾರು ಗಮನಿಸಿದ ಕಾರಣ ತುರ್ತು ಬ್ರೇಕ್ ಹಾಕಿದ್ದಾನೆ. ಇಷ್ಟಕ್ಕೆ ಈ ಘಟನೆ ಮುಗಿದಿಲ್ಲ. ಇಲ್ಲಿಂದ ಬಳಿಕ ನಡೆದ ಘಟನೆ ಮತ್ತಷ್ಟು ರೋಚಕ.

ಜೈಪುರದಲ್ಲಿ ವ್ಯಕ್ತಿಯೊಬ್ಬ ಕುಡಿದು ಥಾರ್ ಕಾರನ್ನು ರೈಲು ಹಳಿಯಲ್ಲಿ ಚಯಾಲಿಸಿದ್ದಾನೆ. ಅತ್ತ ಲೋಕೋ ಪೈಲೆಟ್ ಹಾಗೂ ಪೊಲೀಸರ ಸೂಚನೆಯಿಂದ ರೈಲಿಗೆ ತುರ್ತು ಬ್ರೇಕ್ ಹಾಕಿ ನಿಲ್ಲಿಸಲಾಗಿದೆ. ಇತ್ತ ಪೊಲೀಸರು, ಸ್ಥಳೀಯರು ಆಗಮಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಚಾಲಕ ಕಾರಿನಿಂದ ಇಳಿಯಲಿಲ್ಲ. ಆದರೆ ರೈಲು ಹಳಿಯಲ್ಲಿ ಸಿಲುಕಿದ್ದ ಕಾರನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಪೊಲೀಸರು ಸಮೀಪಿಸುತ್ತಿದ್ದಂತೆ ಈತ ಅತೀ ವೇಗವಾಗಿ ಕಾರನ್ನು ಹಿಂದಕ್ಕೆ ತೆಗೆದಿದ್ದಾನೆ. ಪಕ್ಕದಲ್ಲಿದ್ದವರು ಜೀವ ಭಯದಿಂದ ದೂರ ಸಾಗಿದ್ದಾರೆ. ಆದರೆ ಅಜಾಗರೂಕತೆಯಿಂದ ಕಾರು ರಿವರ್ಸ್ ಪಡೆದ ವೇಳೆ ಮೂವರು ಗಾಯಗೊಂಡಿದ್ದಾರೆ. 

ಹಳಿ ದಾಟುತ್ತಿದ್ದ ದನದ ಪ್ರಾಣ ಉಳಿಸಲು ರೈಲು ನಿಲ್ಲಿಸಿದ ಲೋಕೋ ಪೈಲೆಟ್, ದೃಶ್ಯ ಸರೆ!

ಒಂದೇ ವೇಗದಲ್ಲಿ ಕಾರನ್ನು ಹಿಂದಕ್ಕೆ ತೆಗೆದು ಸಣ್ಣ ಪ್ರಪಾತಕ್ಕ ಇಳಿದಿದೆ. ಎಲ್ಲರೂ ಆತಂಕಗೊಂಡಿದ್ದಾರೆ. ಕಾರು ಪಲ್ಟಿಯಾಗುವ ಆತಂಕ ಎದುರಾಗಿತ್ತು. ಆದರೆ ಚಾಲಕ ಮಾತ್ರ ಚರಂಡಿ, ಇಳಿಜಾರು, ಪೊದೆಗಳ ಮೂಲಕ ಸಾಗಿ ರಸ್ತೆ ಸೇರಿಕೊಂಡಿದ್ದಾನೆ. ಬಳಿಕ ಒಂದೇ ವೇಗದಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

 

ಕಾರು ಚಾಲಕ ಸ್ಥಳದಿಂದ ಪರಾರಿಯಾಗುತ್ತಿದ್ದಂತೆ ಪೊಲೀಸರು ಚೇಸ್ ಮಾಡಿದ್ದಾರೆ. ಅತೀ ವೇಗವಾಗಿ ಸಾಗಿದ ಕಾರು ಚಾಲಕನ ಚೇಸ್ ಮಾಡಿದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಾಲನಕ ವಿರುದ್ದ ಹಲವು ಪ್ರಕರಣಗಳು ದಾಖಲಾಗಿದೆ. ರೈಲು ಹಳಿಯಲ್ಲಿ ವಾಹನ ಡ್ರೈವ್, ಕುಡಿದು ವಾಹನ ಚಲಾವಣೆ, ಮೂವರಿಗೆ ಡಿಕ್ಕಿ, ಅಜಾಗರೂಕತೆ ಚಾಲನೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿರುವ ಘಟನೆ ಹೆಚ್ಚಾಗಿದೆ. ಪುಣೆಯ ಘಟನೆ ಬಳಿಕ ಮುಂಬೈ, ಬೆಂಗಳೂರು ಸೇರಿದಂತೆ ಹಲೆವೆಡೆ ಭಾರಿ ಅನಾಹುತಗಳೇ ನಡೆದಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಉದ್ಯಮಿ ಪುತ್ರ ಕುಡಿದು ವಾಹನ ಚಲಾಯಿಸಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಸ್ಥಳೀಯರ ನೆರವಿನಿಂದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?