
ಮುಂಬೈ(ಏ.21): ಆಕೆ 51 ವರ್ಷದ ವೈದ್ಯೆ ಮನೀಶಾ ಜಾಧವ್ ಮುಂಬೈನ ಸೆವ್ರಿ ಟಿಬಿ ಆಸ್ಪತ್ರೆಯಲ್ಲಿ ಮುಖ್ಯ ವೈಧ್ಯಾಧಿಕಾರಿ. ಕೊರೋನಾ ಸೋಂಕು ತಗುಲಿದ ಕಾರಣ ಹರಸಾಹಸ ಪಟ್ಟು ಆಸ್ಪತ್ರೆ ಸೇರಿಕೊಂಡಿದ್ದಾರೆ. ಬೆಡ್ಗಳಿಲ್ಲದ, ಆಕ್ಸಿಜನ್ ಕೊರತೆಯ ನಡುವೆ ಮನೀಶಾ ಜಾಧವ್ಗೆ ಆಸ್ಪತ್ರೆ ದಾಖಲಾಗಿದ್ದಾರೆ. ಆದರೆ ಕರೋನಾ ಮಹಾಮಾರಿ ವೈದ್ಯಯನ್ನು ಬಲಿತೆಗೆದುಕೊಂಡಿದೆ. ಸಾವಿಗೂ ಮೊದಲು ವೈದ್ಯೆ ಹಾಕಿದ ಪೋಸ್ಟ್ ಇದೀಗ ಎಲ್ಲರ ಕಣ್ಣೀರಿಗೆ ಕಾರಣವಾಗುತ್ತಿದೆ.
ವೆಂಟಿಲೇಟರ್ ಕೊರತೆ, ಬೆಡ್ ಸಿಗ್ತಿಲ್ಲ, ಸ್ಮಶಾನದಲ್ಲಿ ಕ್ಯೂ; ಎಲ್ಲಿಗೆ ಬಂತು ಕೊರೊನಾ ಆರ್ಭಟ
ಕೊರೋನಾ ಅದೆಷ್ಟೆರ ಮಟ್ಟಿಗೆ ಭೀಕರವಾಗಿದೆ ಅನ್ನೋದಕ್ಕೆ ಈ ವೈದ್ಯೆ ಮನೀಶಾ ಜಾಧವ್ ಪ್ರಕರಣವೇ ಸಾಕ್ಷಿ..ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಮನೀಶಾ ಜಾಧವ್ ಆರೋಗ್ಯ ಕ್ಷೀಣಿಸಿದೆ. ಇತ್ತ ಬೆಳಗ್ಗೆ ಮನೀಶಾ ಜಾಧವ್ ಫೇಸ್ಬುಕ್ ಪೋಸ್ಟ್ ಒಂದನ್ನೂ ಹಾಕಿದ್ದರು. ಇದು ನನ್ನ ಕೊನೆಯ ಗುಡ್ ಮಾರ್ನಿಂಗ್ ಎಂದೆನಿಸುತ್ತಿದೆ. ನನಗೆ ಈ ತಾಣದ ಮೂಲಕ ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ ಅನ್ನೋ ಭರವಸೆ ಇಲ್ಲ. ಎಲ್ಲರು ಸುರಕ್ಷಿತವಾಗಿರಿ. ದೇಹ ಸಾಯುತ್ತೆ. ಆದರೆ ಆತ್ಮ ಸಾಯಲ್ಲ. ಆತ್ಮ ಅಮರ ಎಂದು ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಮಾಡಿದ 36 ಗಂಟೆಗಳ ಬಳಿಕ ವೈದ್ಯೆ ಮನೀಶಾ ಜಾಧವ್ ಕೊರೋನಾಗೆ ಬಲಿಯಾಗಿದ್ದಾರೆ. ಇದೀಗ ಮನೀಶಾ ಜಾಧವ್ ಸಾವು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕೊರೋನಾ ಇಲ್ಲ ಎಂದು ತಿರುಗಾಡುತ್ತಿರುವವರಿಗೆ ಇದು ಎಚ್ಚರಿಕೆ ಕರೆಗಂಟೆ ಎಂದು ಹಲವರು ಪೋಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದೆ. ಸುಮಾರು 18,000 ವೈದ್ಯರಲ್ಲಿ ಕೊರೋನಾ ಸೋಂಕು ಕಾಣಸಿಕೊಂಡಿದೆ. ಇನ್ನು 168 ವೈದ್ಯರು ಕೊರೋನಾಗೆ ಬಲಿಯಾಗಿದ್ದಾರೆ.
ಮುಂಬೈನಲ್ಲಿಂದು 7,214 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. 35 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ಒಂದೇ ದಿನ 67,468 ಕೊರೋನಾ ಕೇಸ್ ಪತ್ತೆಯಾಗಿದೆ. ಇನ್ನು 568 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ