ರಕ್ಷಣಾ ವ್ಯವಹಾರದಲ್ಲಿ ಲಂಚ: ಜಯಾ ಜೇಟ್ಲಿಗೆ 4 ವರ್ಷ ಜೈಲು!

Published : Jul 31, 2020, 07:48 AM ISTUpdated : Jul 31, 2020, 10:25 AM IST
ರಕ್ಷಣಾ ವ್ಯವಹಾರದಲ್ಲಿ ಲಂಚ: ಜಯಾ ಜೇಟ್ಲಿಗೆ 4 ವರ್ಷ ಜೈಲು!

ಸಾರಾಂಶ

ಜಯಾ ಜೇಟ್ಲಿಗೆ 4 ವರ್ಷ ಜೈಲು: ಕೆಲ ತಾಸಲ್ಲೇ ತಡೆ| ರಕ್ಷಣಾ ವ್ಯವಹಾರದಲ್ಲಿನ ಲಂಚ ಪ್ರಕರಣ

ನವದೆಹಲಿ(ಜು.31): ರಕ್ಷಣಾ ವ್ಯವಹಾರದಲ್ಲಿ 20 ವರ್ಷ ಹಿಂದೆ ನಡೆದಿದ್ದ ಲಂಚಾವತಾರಕ್ಕೆ ಸಂಬಂಧಿಸಿದಂತೆ ಸಮತಾ ಪಾರ್ಟಿ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಹಾಗೂ ಇತರ ಇಬ್ಬರಿಗೆ ದಿಲ್ಲಿ ಸಿಬಿಐ ನ್ಯಾಯಾಲಯ 4 ವರ್ಷಗಳ ಜೈಲು ಸಜೆ ವಿಧಿಸಿದೆ. ಈ ಹಗರಣದ ಮೂಲಕ ಇವರು ಇಡೀ ದೇಶದ ಭದ್ರತಾ ವ್ಯವಸ್ಥೆಯೊಂದಿಗೇ ರಾಜಿ ಮಾಡಿಕೊಂಡಿದ್ದಾರೆ ಎಂದು ಅದು ಕಿಡಿಕಾರಿದೆ.

ಜೇಟ್ಲಿ ಅವರ ಜತೆ, ಅವರ ಮಾಜಿ ಸಹೋದ್ಯೋಗಿ ಗೋಪಾಲ್‌ ಪಚೇರ್‌ವಾಲ್‌ ಹಾಗೂ ಮೇ| ಜ| (ನಿವೃತ್ತ) ಎಸ್‌.ಪಿ. ಮುರ್ಗಾಯಿ ಅವರಿಗೂ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಭ್ರಷ್ಟಾಚಾರ, ಕ್ರಿಮಿನಲ್‌ ಸಂಚು ಆರೋಪದ ಮೇರೆಗೆ ಇವರಿಗೆ ಕೋರ್ಟು ಜೈಲು ಸಜೆ ಹಾಗೂ ತಲಾ 1 ಲಕ್ಷ ರು. ದಂಡ ವಿಧಿಸಿದೆ. ತೆಹೆಲ್ಕಾ ನಿಯತಕಾಲಿಕೆ ನಡೆಸಿದ ರಹಸ್ಯ ಕಾರ್ಯಾಚರಣೆ ಆಧರಿಸಿ ಸಿಬಿಐ ಇದರ ವಿಚಾರಣೆ ನಡೆಸಿತ್ತು.

ಸಾಕಾಗಿ ಕೊನೆಗೂ ಸಿಡಿದೆದ್ದ ಕುಮಾರಸ್ವಾಮಿ, ಕಾಂಗ್ರೆಸ್‌–ಬಿಜೆಪಿಗೆ ತಲಾ 5 ಪ್ರಶ್ನೆಗಳು...!

ಈ ಕುರಿತ ತೀರ್ಪು ಪ್ರಕಟಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ವೀರೇಂದ್ರ ಭಟ್‌, ‘ರಕ್ಷಣಾ ವ್ಯವಹಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು. ಭ್ರಚ್ಟಾಚಾರದಿಂದ ದೇಶದ ಸಾರ್ವಭೌಮತೆ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ’ ಎಂದು ಹೇಳಿದರು. ಬಳಿಕ ಗುರುವಾರ ಸಂಜೆ 5 ಗಂಟೆಯೊಳಗೆ ಶರಣಾಗಲು ಸೂಚಿಸಿದರು.

ಆದರೆ, ದೋಷಿಗಳು ಕೂಡಲೇ ದಿಲ್ಲಿ ಹೈಕೋರ್ಟ್‌ ಮೊರೆ ಹೋದ ಪರಿಣಾಮ, ತೀರ್ಪಿಗೆ ಹೈಕೋರ್ಟ್‌ ತಡೆ ನೀಡಿದೆ. ಹೀಗಾಗಿ ಜೇಟ್ಲಿ ಸೇರಿದಂತೆ ಮೂವರಿಗೂ ತಾತ್ಕಾಲಿಕ ನಿರಾಳತೆ ಲಭಿಸಿದೆ.

ಪ್ರಕರಣ ಏನು?:

ರಕ್ಷಣಾ ಇಲಾಖೆಗೆ ಸಂಬಂಧಿಸಿದ ‘ಹ್ಯಾಂಡ್‌ ಹೆಲ್ಡ್‌ ಥರ್ಮಲ್‌ ಇಮೇಜರ್‌’ಗಳನ್ನು ಖರೀದಿಸುವ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜನವರಿ 2001ರಲ್ಲಿ ‘ತೆಹೆಲ್ಕಾ’ ನಿಯತಕಾಲಿಕೆ ಬಯಲು ಮಾಡಿತ್ತು. ಇದಕ್ಕಾಗಿ ‘ಆಪರೇಷನ್‌ ವೆಸ್ಟ್‌ಎಂಡ್‌’ ಎಂಬ ರಹಸ್ಯ ಕಾರ್ಯಾಚರಣೆ ನಡೆಸಿತ್ತು. 2000ನೇ ಡಿಸೆಂಬರ್‌ ಹಾಗೂ 2001ರ ಜನವರಿಯಲ್ಲಿ ಈ ಅಕ್ರಮ ನಡೆದಿದೆ ಎಂದು ಅದು ವರದಿ ಮಾಡಿತ್ತು.

'ಶ್ರೀರಾಮುಲು ಕೊಟ್ಟ ಲೆಕ್ಕವನ್ನು ಎಷ್ಟೇ ಕೂಡಿಸಿ ಕಳೆದ್ರೂ 100 ಕೋಟಿ ರೂ. ದಾಟುವುದಿಲ್ಲ'

ಈ ಕುರಿತ ವಿಚಾರಣೆ ನಡೆಸಿದ ಕೋರ್ಟ್‌, ‘ಥರ್ಮಲ್‌ ಇಮೇಜರ್‌ ಖರೀದಿ ವ್ಯವಹಾರದಲ್ಲಿ ಜೇಟ್ಲಿ ಅವರು ತಮ್ಮ ಸಹೋದ್ಯೋಗಿ ಪಚೇರ್‌ವಾಲ್‌ ಮುಖಾಂತರ ವೆಸ್ಟ್‌ಎಂಡ್‌ ಕಂಪನಿ ಪ್ರತಿನಿಧಿಯಿಂದ 2 ಲಕ್ಷ ರು. ಲಂಚ ಸ್ವೀಕರಿಸಿದ್ದಾರೆ. ಮುರ್ಗಾಯಿ ಅವರು 20 ಸಾವಿರ ರು. ಪಡೆದಿದ್ದಾರೆ. ಸೇನೆಗೆ ಥರ್ಮಲ್‌ ಇಮೇಜರ್‌ಗಳನ್ನು ಪೂರೈಸುವ ‘ಸಪ್ಲೈ ಆರ್ಡರ್‌’ ಪಡೆಯಲು ಇವರು ರುಷುವತ್ತು ಪಡೆದಿದ್ದಾರೆ’ ಎಂದು ಹೇಳಿದ್ದು, ಸಿಬಿಐ ದೋಷಾರೋಪ ದೃಢೀಕರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!