ಸಿಸೋಡಿಯಾ ನೆನೆದು ಕೇಜ್ರಿ​ವಾಲ್‌ ಕಣ್ಣೀರು: 103 ದಿನದ ನಂತರ ಪತ್ನಿ ಭೇಟಿ ಮಾಡಿದ ಸಿಸೋಡಿಯಾ

Published : Jun 08, 2023, 08:09 AM IST
ಸಿಸೋಡಿಯಾ ನೆನೆದು ಕೇಜ್ರಿ​ವಾಲ್‌ ಕಣ್ಣೀರು: 103 ದಿನದ ನಂತರ ಪತ್ನಿ ಭೇಟಿ ಮಾಡಿದ ಸಿಸೋಡಿಯಾ

ಸಾರಾಂಶ

ಅಬಕಾರಿ ಹಗರಣದ ಕಾರಣ ಬಂಧಿ​ತ​ರಾಗಿ ಜೈಲಿ​ನ​ಲ್ಲಿ​ರುವ ದೆಹಲಿ ಮಾಜಿ ಉಪ​ಮು​ಖ್ಯ​ಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ನೆನೆದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭಾವುಕರಾಗಿ ಕಣ್ಣೀ​ರು​ಗ​ರೆ​ದ​ರು.

ನವದೆಹಲಿ: ಅಬಕಾರಿ ಹಗರಣದ ಕಾರಣ ಬಂಧಿ​ತ​ರಾಗಿ ಜೈಲಿ​ನ​ಲ್ಲಿ​ರುವ ದೆಹಲಿ ಮಾಜಿ ಉಪ​ಮು​ಖ್ಯ​ಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ನೆನೆದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭಾವುಕರಾಗಿ ಕಣ್ಣೀ​ರು​ಗ​ರೆ​ದ​ರು. ಬುಧವಾರ ಬಿ.ಆರ್‌. ಅಂಬೇಡ್ಕರ್‌ ಸ್ಕೂಲ್‌ ಆಫ್‌ ಸ್ಪೆಷಲೈಸ್ಡ್‌ ಎಕ್ಸಲೆನ್ಸ್‌ ವಿದ್ಯಾಲಯದ ನೂತನ ಅಂಗ ಸಂಸ್ಥೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು,‘ನಾನು ಇಂದು ಸಿಸೋಡಿಯಾ ಅವರನ್ನು ತುಂಬ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅವರು ಎಲ್ಲರಿಗೂ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಿದ್ದರು. ಅಂಥವರ ಮೇಲೆ ಸರ್ಕಾರ ಸುಳ್ಳು ಪ್ರಕರಣದಡಿ ಜೈಲಿಗಟ್ಟಿದೆ. ಅವರಿಗೆ ಶೀಘ್ರ ಜಾಮೀನು ದೊರೆಯಲಿದೆ. ಸತ್ಯ ಎಂದಿಗೂ ಗೆಲ್ಲಲಿದೆ’ ಎಂದು ಭಾವು​ಕ​ರಾ​ದ​ರು. ಬಿಜೆಪಿ ಸರ್ಕಾರ ನಮ್ಮ ಸರ್ಕಾರದ ಶೈಕ್ಷಣಿಕ ಅಭಿವೃದ್ಧಿ ಸಹಿಸಲಾಗದೇ ಈ ರೀತಿ ಮಾಡುತ್ತಿದೆ ಎಂದು ಆಪಾದಿಸಿದರು.

ದಿಲ್ಲಿ ಅಬಕಾರಿ ಹಗರಣ: ವೈಎಸ್ಸಾರ್‌ ಸಂಸದನ ಪುತ್ರನ ಬಂಧನ

103 ದಿನದ ನಂತರ ಪತ್ನಿ ಭೇಟಿ​ಯಾದ ಸಿಸೋ​ಡಿ​ಯಾ

ನವ​ದೆ​ಹ​ಲಿ: ಅನಾ​ರೋ​ಗ್ಯ​ದಿಂದ ಬಳ​ಲು​ತ್ತಿ​ರುವ ಪತ್ನಿ​ಯನ್ನು ಕೋರ್ಟ್‌ ಅನು​ಮತಿ ಮೇರೆಗೆ ದಿಲ್ಲಿ ಮಾಜಿ ಉಪ​ಮು​ಖ್ಯ​ಮಂತ್ರಿ ಹಾಗೂ ಆಪ್‌ ನಾಯಕ ಮನೀಶ್‌ ಸಿಸೋ​ಡಿಯಾ ಬುಧ​ವಾರ ಭೇಟಿ ಮಾಡಿ​ದ್ದಾರೆ. ಇದು ಇಬ್ಬರ ನಡುವೆ 103 ದಿನ​ಗಳ ನಂತರದ ಮೊದಲ ಭೇಟಿ​ಯಾ​ಗಿದೆ. ಸಿಸೋ​ಡಿ​ಯಾ​ರನ್ನು ದಿಲ್ಲಿ ಅಬ​ಕಾರಿ ಹಗ​ರ​ಣಕ್ಕೆ ಸಂಬಂಧಿ​ಸಿ​ದಂತೆ 3.5 ತಿಂಗಳ ಹಿಂದೆ ಬಂಧಿ​ಸ​ಲಾ​ಗಿತ್ತು. ಈ ನಡುವೆ, ತಮ್ಮ ಭೇಟಿಯ ಬಗ್ಗೆ ಟಪ್ಪಣಿ ಬರೆ​ದಿ​ರುವ ಸೀಮಾ ಸಿಸೋ​ಡಿಯಾ, ನಾವು ಕೋಣೆ​ಯಲ್ಲಿ ಮಾತ​ನಾ​ಡು​ವಾಗ ನಾವೇನು ಮಾತ​ನಾ​ಡು​ತ್ತಿ​ದ್ದೇವೆ ಎಂದು ಸತತ 7 ತಾಸು ಕಾಲ ಕೋಣೆ ಹೊರಗೆ ನಿಂತು ಪೊಲೀ​ಸರು ಕೇಳಿ​ಸಿ​ಕೊಂಡ​ರು ಎಂದು ಬೇಸ​ರಿ​ಸಿ​ದ್ದಾ​ರೆ.

ಲಂಚ ಪ್ರಕರಣದಲ್ಲಿ ಅಪ್ 2ನೇ ಶಾಸಕನ ಬಂಧನ: ಅಬಕಾರಿ ಹಗರಣದಲ್ಲಿ ಕೇಜ್ರಿ ಆಪ್ತನ ವಿಚಾರಣೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು