ಚುನಾವಣಾ ಸಮಾವೇಶದಲ್ಲಿ ಚಿತ್ರ ಗಿಫ್ಟ್‌ ನೀಡಿದ್ದ ಬಾಲಕಿಗೆ ಪತ್ರ ಬರೆದು 'ಭಾರತದ ಮಗಳು' ಎಂದ ಪ್ರಧಾನಿ!

Published : Nov 04, 2023, 11:49 AM ISTUpdated : Nov 04, 2023, 11:51 AM IST
ಚುನಾವಣಾ ಸಮಾವೇಶದಲ್ಲಿ ಚಿತ್ರ ಗಿಫ್ಟ್‌ ನೀಡಿದ್ದ ಬಾಲಕಿಗೆ ಪತ್ರ ಬರೆದು 'ಭಾರತದ ಮಗಳು' ಎಂದ ಪ್ರಧಾನಿ!

ಸಾರಾಂಶ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಈ ಭಾವಚಿತ್ರವು ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿತ್ತು.

ನವದೆಹಲಿ (ನ.4):  ಛತ್ತೀಸ್‌ಗಢದ ಕಂಕೇರ್‌ನಲ್ಲಿ ಇತ್ತೀಚೆಗೆ ಚುನಾವಣಾ ಸಮಾವೇಶದಲ್ಲಿ ತಮ್ಮ ಭಾವಚಿತ್ರವನ್ನು ಚಿತ್ರಿಸಿ ಉಡುಗೊರೆಯಾಗಿ ನೀಡಿದ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪತ್ರ ಬರೆದಿದ್ದಾರೆ. ಶಾಲಾ ವಿದ್ಯಾರ್ಥಿನಿ ಆಕಾನ್ಶಾ ಠಾಕೂರ್‌ಗೆ ಮೋದಿ ಭಾವಚಿತ್ರವನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದ್ದಲ್ಲದೆ, ಅವರ ಭಾವಚಿತ್ರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. "ಭಾರತದ ಹೆಣ್ಣುಮಕ್ಕಳು ದೇಶದ ಉಜ್ವಲ ಭವಿಷ್ಯ. ನಿಮ್ಮೆಲ್ಲರನ್ನು ಭೇಟಿಯಾಗುವುದರಿಂದ ನಾನು ಪಡೆಯುವ ಪ್ರೀತಿ ಮತ್ತು ಆತ್ಮೀಯತೆಯು ರಾಷ್ಟ್ರದ ಸೇವೆಯಲ್ಲಿ ನನ್ನ ಶಕ್ತಿಯಾಗಿದೆ. ನಮ್ಮ ಗುರಿ ಯಾವಾಗಲೂ ನಮ್ಮ ಹೆಣ್ಣು ಮಕ್ಕಳಿಗೆ ಆರೋಗ್ಯಕರ, ಸುರಕ್ಷಿತ ಮತ್ತು ಸುಸಜ್ಜಿತವಾದ ರಾಷ್ಟ್ರವನ್ನು ನಿರ್ಮಿಸುವುದು" ಎಂದು ಪ್ರಧಾನಿ ಆಕಾಂಕ್ಷಾ ಠಾಕೂರ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಛತ್ತೀಸ್‌ಗಢದ ಜನರಿಂದ ನಾನು ಯಾವಾಗಲೂ ಪ್ರೀತಿಯನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ ಮೋದಿ ಅವರು ದೇಶದ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಮುಂಬರುವ 25 ವರ್ಷಗಳು ದೇಶದ ಯುವ ಪೀಳಿಗೆಗೆ ಪ್ರಾಮುಖ್ಯತೆಯನ್ನು ನೀಡುತ್ತವೆ ಮತ್ತು ಈ ವರ್ಷಗಳು ಅವರ ಕನಸುಗಳನ್ನು ಮತ್ತು ದೇಶದ ಭವಿಷ್ಯವನ್ನು ರೂಪಿಸುತ್ತವೆ ಎಂದು ಹೇಳಿದರು. ಕಂಕೇರ್‌ನಲ್ಲಿ ಚುನಾವಣಾ ಸಮಾವೇಶದಲ್ಲಿ ಠಾಕೂರ್ ಅವರ ಭಾವಚಿತ್ರವು ಪ್ರಧಾನಿಯವರ ಗಮನವನ್ನು ಸೆಳೆದಿತ್ತು.

ಸಂಕ್ಷಿಪ್ತವಾಗಿ ತನ್ನ ಭಾಷಣವನ್ನು ನಿಲ್ಲಿಸಿದ್ದ ಪ್ರಧಾನಿ ಮೋದಿ, ಸ್ಕೆಚ್‌ನ ಹಿಂಭಾಗದಲ್ಲಿ ಅವಳ ವಿಳಾಸವನ್ನು ನಮೂದಿಸಲು ಆಕಾಂಕ್ಷಾ ಠಾಕೂರ್‌ಗೆ ತಿಳಿಸಿದ್ದಲ್ಲದೆ, ಇದಕ್ಕೆ ಪತ್ರವನ್ನು ಬರೆಯುವುದಾಗಿ ಮಾತು ನೀಡಿದ್ದರು.

ಛತ್ತೀಸ್‌ಗಢಕ್ಕೆ ಕಾಂಗ್ರೆಸ್‌ ಬಳಿಕ ‘ಮೋದಿ ಗ್ಯಾರಂಟಿ’: 500 ರೂ.ಗೆ ಸಿಲಿಂಡರ್; ಅಯೋಧ್ಯೆಗೆ ತೆರಳಲು ಭಕ್ತರಿಗೆ ನೆರವು!

"ಎಲ್ಲರೂ ಪ್ರಧಾನಿ ಮೋದಿ ಇಲ್ಲಿಗೆ ಬರುತ್ತಾರೆ ಎಂದು ಹೇಳುತ್ತಿದ್ದರು," ನವೆಂಬರ್ 2 ರಂದು ಸಮಾವೇಶದ ನಂತರ ಠಾಕೂರ್ ತಿಳಿಸಿದ್ದಾರೆ. "ನಾನು ಅವರಿಗಾಗಿ ಒಂದು ಸ್ಕೆಚ್ ಮಾಡಿದ್ದೇನೆ ಮತ್ತು ಅವರು ನನಗೆ ಪತ್ರ ಬರೆಯುವುದಾಗಿ ಹೇಳಿದರು' ಎಂದು ಆಕಾಂಕ್ಷಾ ತಿಳಿಸಿದ್ದರು.

ನಾವು ಹೆಮ್ಮೆಯಿಂದ ಹೇಳಿಕೊಳ್ತಿವಿ ನಮ್ಮ ನಾಯಕ ಮೋದಿ ಅಂತಾ: ಕೆ.ಎಸ್.ಈಶ್ವರಪ್ಪ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್