
ಗಯಾ(ಡಿ.25): ಸತ್ಯದ ತಾಕತ್ತು ಬಂದೂಕಿನ ತಾಕತ್ತಿಗಿಂತ ಹೆಚ್ಚು ಪ್ರಬಲವಾಗಿದ್ದು, ಟಿಬೆಟಿಯನ್ನರು ಸತ್ಯದ ತಾಕತ್ತಿನ ಮೇಲೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಧರ್ಮಗುರು ದಲೈ ಲಾಮಾ ಹೇಳಿದ್ದಾರೆ.
ಚೀನಿ ಕಮ್ಯೂನಿಸ್ಟ್ ಸರ್ಕಾರ ಬಂದೂಕಿನ ತಾಕತ್ತಿನ ಮೇಲೆ ಟಿಬೆಟಿಯನ್ನರನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಆದರೆ ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂಬುದನ್ನು ಇತಿಹಾಸದಿಂದ ಗೊತ್ತಾಗುತ್ತದೆ ಎಂದು ದಲೈ ಲಾಮಾ ಹೇಳಿದರು.
ಚೀನಾ ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಬೌದ್ಧ ಧರ್ಮ ಅನುಯಾಯಿಗಳನ್ನು ಹೊಂದಿರುವ ದೇಶ. ಆದರೆ ಚೀನಿಯರು ತಮ್ಮ ಬೌದ್ಧ ಧರ್ಮ ಅತ್ಯಂತ ವೈಜ್ಞಾನಿಕ ಎಂದು ಭಾವಿಸುತ್ತಾರೆ. ಆದರೆ ಟೆಬೆಟಿಯನ್ನರ ಧರ್ಮ ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ನಿಂತಿದೆ ಎಂದು ಧಲೈ ಲಾಮಾ ಹೇಳಿದರು.
ಭಾರತೀಯ ಉತ್ತರಾಧಿಕಾರಿ ನೇಮಿಸುವೆ: ದಲೈಲಾಮಾ ಪ್ರಸ್ತಾವ ತಿರಸ್ಕರಿಸಿದ ಚೀನಾ
ಇಂದು ಧರ್ಮದ ಹೆಸರಲ್ಲಿ ವಿಶ್ವದಾದ್ಯಂತ ಹಿಂಸೆ ತಾಂಡವವಾಡುತ್ತಿದ್ದು, ಮನುಷ್ಯ ಮನುಷ್ಯನನ್ನು ಕೊಲ್ಲುತ್ತಿದ್ದಾನೆ. ಈ ವಾತಾವರಣ ಹೋಗಲಾಡಿಸಿ ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ಮಾನವ ಜನಾಂಗವನ್ನು ಮುನ್ನಡೆಸಬೇಕಿದೆ ಎಂದು ದಲೈ ಲಾಮಾ ಅಭಿಪ್ರಾಯಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ