
ಕೊಲ್ಕತಾ (ನ. 08): ಇತ್ತ ಅರಬೀಸಮುದ್ರದಲ್ಲಿ ಎದ್ದಿದ್ದ ಮಹಾ ಚಂಡಮಾರುತ ತಣ್ಣಗಾಯಿತು ಎನ್ನುವಾಗಲೇ ಅತ್ತ ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿದ್ದು, ಅದು ಮುಂದಿನ ಎರಡು ದಿನಗಳಲ್ಲಿ ಚಂಡಮಾರುತವಾಗಿ ಬದಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಚಂಡಮಾರುತ ಪ್ರಭಾವ: ಮತ್ತೆ ಮೂರು ದಿನ ರಾಜ್ಯದಲ್ಲಿ ಮಳೆ
ಬುಲ್ ಬುಲ್ ಎಂದು ಹೆಸರಿಡಲಾಗಿರುವ ಈ ಚಂಡಮಾರುತ ಈ ವರ್ಷ ಭಾರತದ ಕರಾವಳಿ ತೀರಗಳ ಮೇಲೆ ಅಪ್ಪಳಿಸುತ್ತಿರುವ 7 ನೇ ಚಂಡಮಾರುತವಾಗಲಿದೆ. ಗುರುವಾರ ಮಧ್ಯರಾತ್ರಿ ಆಗ್ನೇಯ ಕೋಲ್ಕತಾಗೆ ಚಂಡ ಮಾರುತ ಅಪ್ಪಳಿಸಿದ್ದು, ಶನಿವಾರ ಸಂಜೆ ವೇಳೆಗೆ ಇನ್ನಷ್ಟು ತೀವ್ರಗೊಳ್ಳಲಿದೆ.
2 ನೇ ಟಿ 20 ಪಂದ್ಯದ ಹವಾಮಾನ ವರದಿ; ರೋಹಿತ್ ಸೈನ್ಯಕ್ಕೆ ಸೈಕ್ಲೋನ್ ಭೀತಿ!
ಬಳಿಕ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಬಾಂಗ್ಲಾ ಕರಾವಳಿ ಕಡೆಗೆ ಚಲಿಸಲಿದೆ. ಗಂಟೆಗೆ 70-80 ಕಿ.ಮಿ ವೇಗದಲ್ಲಿ ಚಂಡ ಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಭೀಕರ ಎಂದು ಪರಿಗಣಿಸಿ ದ್ದರಿಂದ 140 ಕಿ.ಮಿ ವೇಗದಲ್ಲಿ ಬಂದರೂ ಅಚ್ಚರಿಯಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಈ ವರ್ಷದ ಇದುವರೆಗೆ ಪಬುಕ್, ಫನಿ, ವಾಯು, ಹಿಕ್ಕಾ, ಕ್ಯಾರ್ ಹಾಗೂ ಮಹಾ ಚಂಡಮಾರುತಗಳು ಭಾರತದ ಕರಾವಳಿಗೆ ಅಪ್ಪಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ