Cyclone Asna: ಅರಬ್ಬಿ ಸಮುದ್ರದಲ್ಲಿ ಚಂಡಮಾರುತ, ರಾಜ್ಯ ಕರಾವಳಿಯಲ್ಲಿ ಭಾರಿ ಮಳೆ ಎಚ್ಚರಿಕೆ!

By Santosh NaikFirst Published Aug 30, 2024, 8:02 PM IST
Highlights

ಕಚ್ ಕರಾವಳಿ ಮತ್ತು ಪಾಕಿಸ್ತಾನ ಮತ್ತು ಈಶಾನ್ಯ ಅರೇಬಿಯನ್ ಸಮುದ್ರದ ಪಕ್ಕದ ಪ್ರದೇಶಗಳಲ್ಲಿ ಆಳವಾದ ಖಿನ್ನತೆಯು ಚಂಡಮಾರುತ 'ಅಸ್ನಾ' ಆಗಿ ತೀವ್ರಗೊಂಡಿದೆ. ಈ ಚಂಡಮಾರುತವು ಗುಜರಾತ್‌ನತ್ತ ಚಲಿಸುತ್ತಿದ್ದು, ಭಾರತದ ಅರಬ್ಬಿ ಸಮುದ್ರ ಭಾಗದ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ, ಗೋವಾ ಹಾಗೂ ಕೇರಳ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಇರಲಿದೆ.

ನವದೆಹಲಿ (ಆ.30): ಕಚ್ ಕರಾವಳಿ ಮತ್ತು ಪಾಕಿಸ್ತಾನ ಮತ್ತು ಈಶಾನ್ಯ ಅರೇಬಿಯನ್ ಸಮುದ್ರದ ಪಕ್ಕದ ಪ್ರದೇಶಗಳಲ್ಲಿ ಆಳವಾದ ಖಿನ್ನತೆಯು ಪಶ್ಚಿಮಕ್ಕೆ ಚಲಿಸಿದೆ ಮತ್ತು ಚಂಡಮಾರುತ 'ಅಸ್ನಾ' ('ಅಸ್-ನಾ' ಎಂದು ಉಚ್ಚರಿಸಲಾಗುತ್ತದೆ) ಆಗಿ ತೀವ್ರಗೊಂಡಿದೆ ಮತ್ತು ಶುಕ್ರವಾರ ಬೆಳಿಗ್ಗೆ 11.30 ರ ಸುಮಾರಿಗೆ ಅದೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ಸೈಕ್ಲೋನಿಕ್ ಚಂಡಮಾರುತವು ಪ್ರಸ್ತುತ ಭುಜ್‌ನ ಪಶ್ಚಿಮ-ವಾಯುವ್ಯಕ್ಕೆ 190 ಕಿಮೀ ಮತ್ತು ಗುಜರಾತ್‌ನ ನಲಿಯಾದಿಂದ 100 ಕಿಮೀ ಪಶ್ಚಿಮ-ವಾಯುವ್ಯಕ್ಕೆ ಮತ್ತು ಪಾಕಿಸ್ತಾನದ ಕರಾಚಿಯಿಂದ 170 ಕಿಮೀ ಆಗ್ನೇಯದಲ್ಲಿದೆ. ಇದರಿಂದಾಗಿ ಭಾರತದ ಅರಬ್ಬಿ ಸಮುದ್ರ ಭಾಗದ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸೂಚನೆಯೂ ಇದೆ. ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ, ಗೋವಾ ಹಾಗೂ ಕೇರಳ ರಾಜ್ಯಗಳ ಕರಾವಳಿ ಜಿಲ್ಲೆಗಳಿಗೆ ಮಳೆಯ ಅಬ್ಬರ ಎಉರಾಗಲಿದೆ. ಕೇರಳ ಕರ್ನಾಟಕ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಮಳೆಯ ಅಬ್ಬರ ಹೆಚ್ಚಿರಬಹುದು ಎಂದು ತಿಳಿಸಲಾಗಿದೆ.

ಇಷ್ಟು ಮಾತ್ರವಲ್ಲದೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಇದರ ಪರಿಣಾಮ ಕೂಡ ರಾಜ್ಯದ ಹಲವು ಜಿಲ್ಲೆಗಳಿಗೆ ಆಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಆಗಸ್ಟ್ 30 ರಿಂದ 31ರವರೆಗೆ, ರಾಯಚೂರು, ಯಾದಗಿರಿಯಲ್ಲಿ ಸೆಪ್ಟೆಂಬರ್ 1 ರಂದು ಆರೆಂಜ್‌ ಅಲರ್ಟ್‌ ಇರಲಿದೆ. ಉಡುಪಿಯಲ್ಲಿ ಆಗಸ್ಟ್ 31 ರಂದು ಭಾರಿ ಪ್ರಮಾಣದಲ್ಲಿ ಮಳೆ ಬೀಳುವುದರಿಂದ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ರಾಜ್ಯದಲ್ಲಿ ಮುಂದಿನ ಮೂರೂ ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Latest Videos

ಹಮಾಮಾನ ಇಲಾಖೆ ಮಾಹಿತಿ ಪ್ರಕಾರ, ಬೆಳಗಾವಿ, ಕೊಡಗು, ಕಲಬುರಗಿಗೆ ಆಗಸ್ಟ್ 31ರಂದು ಯೆಲ್ಲೋ ಅಲರ್ಟ್‌ ಇರಲಿದ್ದು, ಬೀದರ್‌, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ವಿಜಯನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರಿನಲ್ಲಿ ಮುಂದಿನ 2 ದಿನ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. ಆಗುಂಬೆ, ದಕ್ಷಿಣ ಕನ್ನಡದ ಮಂಗಳೂರು, ಚಿಕ್ಕಮಗಳೂರಿನ ಮೂಡಿಗೆರೆ, ಕೊಡಗಿನ ಗೋಣಿಕೊಪ್ಪದಲ್ಲಿ ಗುರುವಾರ ಧಾರಾಕಾರವಾಗಿ ಮಳೆಯಾಗಿದೆ.

ಗುಜರಾಯ್‌ನಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು ಇಲ್ಲಿಯವರೆಗೂ 25 ಮಂದಿ ಬಲಿಯಾಗಿದ್ದಾರೆ. ಚಂಡಮಾರುತ, ನಿಧಾನವಾಗಿ ಸೌರಾಷ್ಟ್ರ, ಕಛ್‌ ಪ್ರಾಂತ್ಯದ ಕಡೆಗೆ ಧಾವಿಸುತ್ತಿದ್ದು ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ಬೀಳುವ ಎಚ್ಚರಿಕೆಯನ್ನು ಸ್ಥಳೀಯ ಹವಾಮಾನ ಇಲಾಖೆ ನೀಡಿದೆ. ಆಗಸ್ಟ್ 31ರವರೆಗೆ ಗುಜರಾತ್‌ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.

ಜಸ್ಟ್ 11 ಸೆಕೆಂಡ್‌ನಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಯ್ತು 3 ಕೋಟಿಯ ಮನೆ

ಕಚ್‌ ಮತ್ತು ಪಾಕಿಸ್ತಾನದ ಬಳಿ ಈಶಾನ್ಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪಶ್ಚಿಮ - ವಾಯವ್ಯ ದಿಕ್ಕಿನಲ್ಲಿ ಚಲಿಸುತ್ತಿರುವ ಸೈಕ್ಲೋನಿಕ್‌ ಚಂಡಮಾರುತ ಇನ್ನೆರಡು ದಿನಗಳಲ್ಲಿ ಭಾರತದ ಕರಾವಳಿಯಿಂದ ದೂರ ಸರಿಯುವ ಸಾಧ್ಯತೆ ಇದೆ.

ಆಂಧ್ರ ಪ್ರದೇಶಕ್ಕೆ ಮಾತ್ರ ಹೆಚ್ಚುವರಿ ತಂಬಾಕು ಮಾರಾಟಕ್ಕೆ ಕೇಂದ್ರ ಸರ್ಕಾರದಿಂದ ಓಕೆ: ಕರ್ನಾಟಕಕ್ಕೆ ಇಲ್ಲ

WARNING 🌀

It is extremely rare for a cyclone to occur in the Arabian Sea during August – the last one was in 1976.

Cyclone has just formed and will bring torrential rains to southern Pakistan 🇵🇰
This system has already caused severe flooding in the Indian state of… pic.twitter.com/iPih4ouFI8

— Weather monitor (@Weathermonitors)
click me!