‘ಮಹಾ’ ಮೈತ್ರಿಯಲ್ಲಿ ಬಿರುಕು?: ಶಿವ​ಸೇನೆ, ಎನ್‌​ಸಿ​ಪಿ​ ಪಕ್ಷ​ಗ​ಳಿಂದ ಕಾಂಗ್ರೆಸ್‌ ದೂರ-ದೂರ?

Published : Jun 15, 2021, 09:46 AM ISTUpdated : Jun 15, 2021, 10:05 AM IST
‘ಮಹಾ’ ಮೈತ್ರಿಯಲ್ಲಿ ಬಿರುಕು?: ಶಿವ​ಸೇನೆ, ಎನ್‌​ಸಿ​ಪಿ​ ಪಕ್ಷ​ಗ​ಳಿಂದ ಕಾಂಗ್ರೆಸ್‌ ದೂರ-ದೂರ?

ಸಾರಾಂಶ

* ಮಹಾರಾಷ್ಟ್ರ ಮೈತ್ರಿಯಲ್ಲಿ ಬಿರುಕು? * ಮುಂಬ​ರುವ ಎಲ್ಲಾ ಚುನಾ​ವ​ಣೆ​ಗ​ಳಲ್ಲಿ ಏಕಾಂಗಿ ಸ್ಪರ್ಧೆ: ಕಾಂಗ್ರೆ​ಸ್‌ * ಶಿವ​ಸೇನೆ, ಎನ್‌​ಸಿ​ಪಿ​ ಪಕ್ಷ​ಗ​ಳಿಂದ ಕಾಂಗ್ರೆಸ್‌ ದೂರ-ದೂರ ಸಾಧ್ಯ​ತೆ

ಮುಂಬೈ(ಜೂ.15): ಮಹಾ​ರಾಷ್ಟ್ರ ಮುಖ್ಯ​ಮಂತ್ರಿ ಉದ್ಧವ್‌ ಠಾಕ್ರೆ ನೇತೃ​ತ್ವದ ಮಹಾ ವಿಕಾಸ್‌ ಅಘಾಡಿ(ಎಂವಿ​ಎ) ಮೈತ್ರಿಯ ಸರ್ಕಾ​ರ​ದಲ್ಲಿ ಬಿಕ್ಕಟ್ಟು ಉದ್ಭ​ವಿ​ಸಿದೆ ಎಂಬ ಮುನ್ಸೂ​ಚ​ನೆ​ಯೊಂದು ಲಭ್ಯ​ವಾ​ಗಿದೆ. ಮುಂಬ​ರುವ 2024ರ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ತಮ್ಮ ಪಕ್ಷವು ಏಕಾಂಗಿ​ಯಾಗಿ ಸ್ಪರ್ಧೆ ಮಾಡ​ಲಿದ್ದು, ಹೈಕ​ಮಾಂಡ್‌ ನಿರ್ಧ​ರಿ​ಸಿ​ದಲ್ಲಿ ಪಕ್ಷದ ಮುಖ್ಯ​ಮಂತ್ರಿ ಅಭ್ಯ​ರ್ಥಿ​ಯಾ​ಗಲು ಸಿದ್ಧ ಎಂದು ಕಾಂಗ್ರೆಸ್‌ ರಾಜ್ಯಾ​ಧ್ಯಕ್ಷ ನಾನಾ ಪಟೋಲೆ ಹೇಳಿ​ದ್ದಾರೆ.

5 ಹಂತದಲ್ಲಿ ಮಹಾ ಅನ್‌ಲಾಕ್ : ಲಾಕ್‌ಡೌನ್ ತೆರವು ಹೇಗೆ..?

ಅಮರಾ​ವ​ತಿ​ಯಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಪಟೋಲೆ ಅವರು, ‘ಪ್ರಸ್ತುತ ಮಹಾ​ರಾಷ್ಟ್ರ ಕಾಂಗ್ರೆಸ್‌ ಘಟ​ಕದ ಅಧ್ಯ​ಕ್ಷ​ನಾ​ಗಿ​ದ್ದೇನೆ. ಹೀಗಾಗಿ ನಮ್ಮ ಪಕ್ಷವು ಮುಂಬ​ರುವ ಸ್ಥಳೀಯ ಸಂಸ್ಥೆ​ಗಳ ಮತ್ತು ವಿಧಾ​ನ​ಸಭೆ ಚುನಾ​ವ​ಣೆ​ಗ​ಳಲ್ಲಿ ಏಕಾಂಗಿ​ಯಾಗಿ ಸ್ಪರ್ಧಿ​ಸಲು ನಿರ್ಧ​ರಿ​ಸ​ಲಾ​ಗಿದೆ. ಆದರೆ ಎನ್‌​ಸಿಪಿ ನಿಲುವು ಏನು ಎಂಬುದು ಗೊತ್ತಿಲ್ಲ. ಕಾಂಗ್ರೆಸ್‌ ಅನ್ನು ಅಧಿ​ಕಾ​ರಕ್ಕೆ ತಂದು ನಾನು ಮುಖ್ಯ​ಮಂತ್ರಿ ಆಗು​ವುದು ಬೇಡ​ವೇ’ ಎಂದು ಪ್ರಶ್ನಿ​ಸಿ​ದರು.

ಓ... ಡಿಸಿಎಂ ಸೋಷಿಯಲ್ ಮೀಡಿಯಾ ಖಾತೆ ನಿರ್ವಹಣೆಗೆ 6 ಕೋಟಿ!

ಇತ್ತೀ​ಚೆ​ಗಷ್ಟೇ ಎನ್‌​ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಶಿವ​ಸೇ​ನೆ​ ಬಗ್ಗೆ ಪ್ರಶಂಸಿ​ಸಿ​ದ್ದರು. ಏತ​ನ್ಮಧ್ಯೆ, ಮುಖ್ಯ​ಮಂತ್ರಿ ಉದ್ಧವ್‌ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವ​ರನ್ನು ಭೇಟಿ ಮಾಡಿ​ದ್ದರು. ಜೊತೆಗೆ ಚುನಾ​ವಣಾ ರಣ​ತಂತ್ರ​ಗಾರ ಪ್ರಶಾಂತ್‌ ಕಿಶೋರ್‌ ಅವರು, ಪವಾರ್‌ ಅವ​ರನ್ನು ಭೇಟಿ ಮಾಡಿ​ದ್ದರು. ಈ ಎಲ್ಲಾ ಬೆಳ​ವ​ಣಿ​ಗೆ​ಗಳ ಮಧ್ಯೆ ಪಟೋಲೆ ಏಕಾಂಗಿಯಾಗಿ ಸ್ಪರ್ಧಿ​ಸು​ವು​ದಾಗಿ ಹೇಳಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!