
ಇಡುಕ್ಕಿ (ಮಾ.31): ‘ರಾಹುಲ್ ಗಾಂಧಿ ಮದುವೆ ಆಗಿಲ್ಲ. ಆತನೊಬ್ಬ ಪೀಡಕ. ಆತನ ಹತ್ತಿರ ಹೋಗಬೇಡಿ’ ಎಂದು ಹುಡುಗಿಯರಿಗೆ ಕರೆ ನೀಡಿ ಕೇರಳದ ಎಲ್ಡಿಎಫ್ ಮುಖಂಡ ಜಾಯ್್ಸ ಜಾಜ್ರ್ ವಿವಾದಕ್ಕೀಡಾಗಿದ್ದಾರೆ. ಅವರ ಕೀಳು ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಹೇಳಿಕೆ ಹಿಂಪಡೆದು ವಿಷಾದ ವ್ಯಕ್ತಪಡಿಸಿದ್ದಾರೆ.
ಚುನಾವಣಾ ರಾರಯಲಿಯಲ್ಲಿ ಮಾತನಾಡಿದ ಜಾಜ್ರ್, ‘ರಾಹುಲ್ ಗಾಂಧಿ ಅವರ ಸಭೆಗಳು ಕೇವಲ ಮಹಿಳಾ ಕಾಲೇಜುಗಳಲ್ಲಿ ನಡೆಯುತ್ತವೆ. ಅವರು ಹುಡುಗಿಯರಿಗೆ ಹೇಗೆ ನಿಲ್ಲಬೇಕು, ಹೇಗೆ ಬಗ್ಗಬೇಕು ಎಂದು ಪಾಠ ಮಾಡುತ್ತಾರೆ. ಹಾಗಾಗಿ ಆತನ ಹತ್ತಿರ ಹೋಗಬೇಡಿ ಹಾಗೂ ಆತ ಹೇಳಿದ ರೀತಿ ಮಾಡಬೇಡಿ. ಏಕೆಂದರೆ ಆತ ಮದುವೆ ಆಗಿಲ್ಲ. ಆತನೊಬ್ಬ ಪೀಡಕ’ ಎಂದು ಹೇಳಿದ್ದರು.
ಇದಕ್ಕೆ ಖುದ್ದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ