ಬಿಜೆಪಿ ನಾಯಕನ ಮನೆ ಮುಂದೆ ಸಗಣಿ ರಾಶಿ ರಾಶಿ!

By Suvarna NewsFirst Published Jan 1, 2021, 10:09 PM IST
Highlights

ಬಿಜೆಪಿ ನಾಯಕನ ಮನೆ ಮುಂದೆ ಸಗಣಿ ತಂದು ಸುರಿದರು/ ಕೇಂದ್ರದ ಕೃಷಿ ಕಾಯಿದೆ ವಿರೋಧಿಸಿ ರೈತರ ಪ್ರತಿಭಟನೆ/ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಿರಂತರ/ ಬಿಜೆಪಿ  ನಾಯಕನ ಮೇಲೆ ಆಕ್ರೋಶ

ಪಂಜಾಬ್(ಜ. 01) ಕೇಂದ್ರ ಸರ್ಕಾರದ ಕೃಷಿ ಕಾಯಿದೆ ತಿದ್ದುಡಿ ವಿರೋಧಿಸಿ ಪಂಜಾಬ್ ನಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ  ಪ್ರತಿಭಟನೆಗಳು ಈಗ ಒಂದು ಹಂತ ಮುಂದಕ್ಕೆ ಹೋಗಿವೆ. ಬಿಜೆಪಿ ನಾಯಕ ತಿಕ್ಷಾನ್ ಸೂದ್ ಅವರ ಮನೆಯ ಮುಂದೆ ಸಗಣಿ ತಂದು ಸುರಿಯಲಾಗಿದೆ. 

ಪಂಜಾಬ್ ನ ಹೋಸಿಯಾರ್ ಪುರ್ ನ ಮನೆ ಮುಂದೆ ಸಗಣಿ ತಂದು ಸುರಿದಿದ್ದಾರೆ.   ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಕ್ಯಾಂಡಲ್ ಹಚ್ಚಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.

ಐಐಟಿಯಿಂದ ಹೊಲದವರೆಗೆ ... ಕೃಷಿ ಕಾಯಿದೆ ಲಾಭಗಳನ್ನು ಬಿಚ್ಚಿಟ್ಟ ಸೂರ್ಯ

ಕೇರಳ ಸರ್ಕಾರ ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ನಿರ್ಣಯ ಪಾಸ್ ಮಾಡಿದ್ದು ಬಿಜೆಪಿ ಶಾಸಕರೂ ಸಹ ನಿರ್ಣಯದ ಪರವಾಗಿ ಮತ ಹಾಕಿದ್ದು ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೆ ಕಾರಣವಾಗಿತ್ತು. 

 

click me!