ಗಡಿ ಬಂದ್‌ ಮಾಡಿದ ಕರ್ನಾ​ಟ​ಕ ವಿರುದ್ಧ ಕೇಂದ್ರಕ್ಕೆ ದೂರು: ಕೇರಳ ಸಿಎಂ!

Published : Feb 23, 2021, 09:20 AM ISTUpdated : Feb 23, 2021, 02:58 PM IST
ಗಡಿ ಬಂದ್‌ ಮಾಡಿದ ಕರ್ನಾ​ಟ​ಕ ವಿರುದ್ಧ ಕೇಂದ್ರಕ್ಕೆ ದೂರು: ಕೇರಳ ಸಿಎಂ!

ಸಾರಾಂಶ

ಕೇರ​ಳ​ದಲ್ಲಿ ಕೊರೋನಾ ಸೋಂಕಿ​ತರ ಸಂಖ್ಯೆ ಭಾರೀ ಪ್ರಮಾ​ಣ​ದಲ್ಲಿ ಏರಿ​ಕೆ​| ಗಡಿ ಬಂದ್‌ ಮಾಡಿದ ಕರ್ನಾ​ಟ​ಕ ವಿರುದ್ಧ ಕೇಂದ್ರಕ್ಕೆ ದೂರು: ಕೇರಳ ಸಿಎಂ

ನವ​ದೆ​ಹ​ಲಿ(ಫೆ.23): ಕೇರ​ಳ​ದಲ್ಲಿ ಕೊರೋನಾ ಸೋಂಕಿ​ತರ ಸಂಖ್ಯೆ ಭಾರೀ ಪ್ರಮಾ​ಣ​ದಲ್ಲಿ ಏರಿ​ಕೆ​ಯಾ​ಗು​ತ್ತಿ​ರುವ ಬೆನ್ನಲ್ಲೇ, ಆ ರಾಜ್ಯ​ದಿಂದ ಕರ್ನಾ​ಟ​ಕಕ್ಕೆ ಬರು​ವ​ವರ ಮೇಲಿನ ನಿಯಂತ್ರ​ಣ​ಕ್ಕಾಗಿ ಕರ್ನಾ​ಟಕ ಸರ್ಕಾ​ರವು ಕೆಲವು ಗಡಿ​ ರಸ್ತೆಗ​ಳನ್ನು ಬಂದ್‌ ಮಾಡಿದೆ. ಇದಕ್ಕೆ ಕೇರಳ ಮುಖ್ಯಮಂತ್ರಿ ಪಿಣ​ರಾ​ಯಿ ವಿಜ​ಯನ್‌ ಅವರು ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾರೆ.

ಸೋಮವಾರ ಸಂಜೆ ಮಾತನಾಡಿದ ಪಿಣರಾಯಿ, ‘ಈ ಸಂಬಂಧ ಕರ್ನಾ​ಟಕ ಸರ್ಕಾ​ರದ ವಿರುದ್ಧ ಕೇಂದ್ರ ಸರ್ಕಾ​ರಕ್ಕೆ ದೂರು ನೀಡುತ್ತೇವೆ’ ಎಂದಿದ್ದಾರೆ.

‘ಕೇರ​ಳ​ದಿಂದ ಕರ್ನಾ​ಟ​ಕಕ್ಕೆ ಪ್ರವೇಶ ಬಯ​ಸುವ ವ್ಯಕ್ತಿ​ಗಳ ಪೈಕಿ ಆರ್‌​ಟಿ-ಪಿಸಿ​ಆರ್‌ ಪರೀ​ಕ್ಷೆ​ಯಲ್ಲಿ ನೆಗೆ​ಟಿವ್‌ ಬಂದ ವ್ಯಕ್ತಿ​ಗ​ಳನ್ನು ಮಾತ್ರವೇ ರಾಜ್ಯ ಪ್ರವೇ​ಶಕ್ಕೆ ಮುಖ್ಯ​ಮಂತ್ರಿ ಬಿ.ಎಸ್‌ ಯಡಿ​ಯೂ​ರಪ್ಪ ಸರ್ಕಾರ ಅವ​ಕಾಶ ಕಲ್ಪಿ​ಸಿದೆ. ಆದರೆ ಅಗತ್ಯ ವಸ್ತು​ಗಳ ಸಾಗ​ಣೆಯ ವಾಹ​ನ​ಗ​ಳಿಗೆ ಗಡಿ ಮಾರ್ಗ​ಗಳ ಬಂದ್‌​ನಿಂದ ವಿನಾಯ್ತಿ ನೀಡ​ಲಾ​ಗಿದೆ ಎಂದು ಕರ್ನಾ​ಟ​ಕದ ಡಿಜಿಪಿ ತಿಳಿ​ಸಿ​ದ್ದಾರೆ’ ಪಿಣರಾಯಿ ಹೇಳಿದ್ದಾರೆ.

ಕಳೆದ ವರ್ಷದ ಮಾಚ್‌ರ್‍ನಲ್ಲಿ ಕೊರೋನಾ ಸೋಂಕು ಉತ್ತುಂಗ ಸ್ಥಿತಿ​ಯ​ಲ್ಲಿ​ದ್ದಾ​ಗಲೂ ಕರ್ನಾ​ಟಕ ಸರ್ಕಾ​ರ​ವು ಕೇರ​ಳಕ್ಕೆ ಸಂಪರ್ಕ ಕಲ್ಪಿ​ಸುವ ಗಡಿಯನ್ನು ಬಂದ್‌ ಮಾಡಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ​ಸ್ಥಿಕೆ ವಹಿ​ಸ​ಬೇ​ಕೆಂದು ಪಿಣ​ರಾಯಿ ವಿಜ​ಯನ್‌ ಒತ್ತಾ​ಯಿ​ಸಿ​ದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pralhad Joshi: ಕೇಂದ್ರ ಸಚಿವಾಲಯಗಳ ಪೈಕಿ ಜೋಶಿ ಇಲಾಖೆ ನಂಬರ್ 1; ಮೋದಿ ಮೌಲ್ಯಮಾಪನ ಸಭೆಯಲ್ಲಿ ವರದಿ ಮಂಡನೆ
ಕರ್ನಾಟಕದಲ್ಲೂ ಸಾಮ್ರಾಜ್ಯ ವಿಸ್ತರಣೆಗೆ ದಳಪತಿ ಸ್ಕೆಚ್.. ಯಾರ ಸಪೋರ್ಟ್, ಏನಾಗ್ತಿದೆ ಇಲ್ಲಿ? ಸೀಕ್ರೆಟ್..