ಕೂಚ್‌ ಬೆಹಾರ್‌ನಲ್ಲಿ ನಾಲ್ಕಲ್ಲ 8 ಜನರ ಕೊಲ್ಲಬೇಕಿತ್ತು: ಬಿಜೆಪಿ ನಾಯಕ ವಿವಾದ!

Published : Apr 13, 2021, 02:14 PM ISTUpdated : Apr 13, 2021, 02:35 PM IST
ಕೂಚ್‌ ಬೆಹಾರ್‌ನಲ್ಲಿ ನಾಲ್ಕಲ್ಲ 8 ಜನರ ಕೊಲ್ಲಬೇಕಿತ್ತು: ಬಿಜೆಪಿ ನಾಯಕ ವಿವಾದ!

ಸಾರಾಂಶ

ತುಂಟ ಹುಡುಗರು ಮತ್ತೆ ಹಿಂಸಾಚಾರ ಮಾಡಿದರೆ ಮತ್ತಷ್ಟುಕೂಚ್‌ ಬೆಹಾರ್‌ನಂಥ ಹತ್ಯೆಗಳು ಪುನರಾವರ್ತನೆಯಾಗಲಿವೆ| ಕೂಚ್‌ ಬೆಹಾರ್‌ನಲ್ಲಿ ನಾಲ್ಕಲ್ಲ 8 ಜನರ ಕೊಲ್ಲಬೇಕಿತ್ತು| ಬಿಜೆಪಿ ನಾಯಕ ವಿವಾದ

ಕೋಲ್ಕತಾ(ಏ.13): ತುಂಟ ಹುಡುಗರು ಮತ್ತೆ ಹಿಂಸಾಚಾರ ಮಾಡಿದರೆ ಮತ್ತಷ್ಟುಕೂಚ್‌ ಬೆಹಾರ್‌ನಂಥ ಹತ್ಯೆಗಳು ಪುನರಾವರ್ತನೆಯಾಗಲಿವೆ ಎಂಬ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲಿಪ್‌ ಘೋಷ್‌ರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ, ಕೂಚ್‌ ಬೆಹಾರ್‌ನಲ್ಲಿ ನಾಲ್ವರಿಗೆ ಅಷ್ಟೇ ಅಲ್ಲದೆ 8 ಮಂದಿಗೆ ಗುಂಡು ಹೊಡೆದು ಉರುಳಿಸಬೇಕಿತ್ತು ಎಂದು ಬಿಜೆಪಿಯ ರಾಹುಲ್‌ ಸಿನ್ಹಾ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.

ರಾರ‍ಯಲಿಯೊಂದರಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ವಿಧಾನಸಭೆಯ ಬಿಜೆಪಿ ಅಭ್ಯರ್ಥಿ ರಾಹುಲ್‌ ಸಿನ್ಹಾ, ‘ಮಮತಾ ಬ್ಯಾನರ್ಜಿ ಅವರು ಜನರು ಮತದಾನ ಮಾಡದಂತೆ ಅಡ್ಡಿಪಡಿಸುತ್ತಿರುವ ಗೂಂಡಾಗಳ ನಾಯಕಿ. ಕೂಚ್‌ ಬೆಹಾರ್‌ನ ಶೀತಲ್‌ಕುಚಿಯಲ್ಲಿ ಹಿಂಸಾಚಾರ ನಡೆಸಿದವರಿಗೆ ಸಿಆರ್‌ಪಿಎಫ್‌ ಸರಿಯಾದ ಉತ್ತರವನ್ನೇ ನೀಡಿದೆ. ಮುಂದಿನ ದಿನಗಳಲ್ಲೂ ಸಿಆರ್‌ಪಿಎಫ್‌ ಇಂಥ ಕಠಿಣ ಉತ್ತರವನ್ನೇ ನೀಡಲಿದೆ’ ಎಂದಿದ್ದಾರೆ.

ಆದರೆ ಕೂಚ್‌ ಬೆಹಾರ್‌ನಲ್ಲಿ ನಾಲ್ವರ ಬದಲಿಗೆ 8 ಮಂದಿಗೆ ಗುಂಡು ಹೊಡೆಯಬೇಕಿತ್ತು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

90's ಕಿಡ್ಸ್ ಹೊಸ ವರ್ಷದ ರೆಸಲ್ಯೂಶನ್ ಏನಿತ್ತು? ಬಾಯ್‌ ಫ್ರೆಂಡ್ಸ್ ಬೇಕು, ಜೀನ್ಸ್ ಪ್ಯಾಂಟ್ ಹಾಕಬೇಕು...!
India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!