ಅಖಿಲೇಶ್‌ ಪತ್ನಿ ಡಿಂಪಲ್‌ ಬೆತ್ತಲೆಯಾಗಿ ಮಸೀದಿಗೆ : ಇಮಾಮ್‌ ರಶೀದಿ ವಿವಾದ

Kannadaprabha News   | Kannada Prabha
Published : Jul 29, 2025, 02:09 AM IST
dimple yadav

ಸಾರಾಂಶ

‘ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ರ ಪತ್ನಿಯೂ ಆಗಿರುವ ಸಂಸದೆ ಡಿಂಪಲ್‌ ಯಾದವ್‌ ಅವರು ಬೆತ್ತಲೆಯಾಗಿ ಮಸೀದಿಗೆ ಹೋಗಿ ಕುಳಿತಿದ್ದರು’ ಎಂದು ಅಖಿಲ ಭಾರತ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಲಖನೌ: ‘ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ರ ಪತ್ನಿಯೂ ಆಗಿರುವ ಸಂಸದೆ ಡಿಂಪಲ್‌ ಯಾದವ್‌ ಅವರು ಬೆತ್ತಲೆಯಾಗಿ ಮಸೀದಿಗೆ ಹೋಗಿ ಕುಳಿತಿದ್ದರು’ ಎಂದು ಅಖಿಲ ಭಾರತ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೀಗಾಗಿ ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಜು.26ರಂದು ಮಸೀದಿಗೆ ಹೋಗಿದ್ದ ಡಿಂಪಲ್‌ ಸೀರೆ ಮಾತ್ರ ಉಟ್ಟಿದ್ದರು. ಬುರ್ಖಾ ಧರಿಸಿರಲಿಲ್ಲ. ಇದರಿಂದಾಗಿ ಅವರ ಬೆನ್ನು ಕೊಂಚ ಕಾಣುತ್ತಿತ್ತು.

ಈ ಬಗ್ಗೆ ಟೀವಿ ಚಾನೆಲ್‌ನಲ್ಲಿ ಮಾತನಾಡಿದ ರಶೀದ್‌, ‘ಮಸೀದಿಯಲ್ಲಿದ್ದ ಇನ್ನೊಬ್ಬ ಸಂಸದೆ ಇಕ್ರಾ ಹಸನ್‌ ಅವರು ತಲೆ ಸೇರಿದಂತೆ ಇಡೀ ಮೈ ಮುಚ್ಚುವಂತೆ ಬಟ್ಟೆ ತೊಟ್ಟಿದ್ದರು. ಆದರೆ ಡಿಂಪಲ್‌ ಬೆತ್ತಲೆಯಾಗಿದ್ದರು’ ಎಂದು ಹೇಳಿದ್ದರು.

ಹೀಗಾಗಿ ರಶೀದ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 79(ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶದಿಂದ ಆಡಿದ ಮಾತು, ಸನ್ನೆ ಅಥವಾ ಕೃತ್ಯ), 196(ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 197(ರಾಷ್ಟ್ರೀಯ ಏಕೀಕರಣಕ್ಕೆ ಹಾನಿಕರವಾದ ಆರೋಪಗಳು, ಪ್ರತಿಪಾದನೆಗಳು), ಐಟಿ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ
ಶಶಿ ತರೂರ್ ಬರೆದ 'ನಳಂದ' ಕವಿತೆ ವೈರಲ್: ಇತಿಹಾಸ ಸುಡಲು ಸಾಧ್ಯವಿಲ್ಲ ಎಂದ ಕಾಂಗ್ರೆಸ್ ಸಂಸದ!