ಜನರನ್ನು ಮೂರ್ಖರನ್ನಾಗಿಸಬೇಡಿ, ನಾಟಕ ಬೇಡ: ರಾಹುಲ್ ಗಾಂಧಿ ವಿರುದ್ಧ ಸೋನಂ ವಾಂಗ್ಚುಕ್​ ಪತ್ನಿ ಕಿಡಿಕಿಡಿ

Published : Jul 23, 2026, 02:23 PM IST
Sonam Wangchuk

ಸಾರಾಂಶ

ಪ್ರಧಾನಿ ನಿವಾಸದ ಬಳಿ ಕಾಂಗ್ರೆಸ್ ನಡೆಸಿದ ನೀಟ್ ಹಗರಣ ಸಂಬಂಧಿತ ಪ್ರತಿಭಟನೆಯನ್ನು ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಟೀಕಿಸಿದ್ದಾರೆ. ಈ ಪ್ರತಿಭಟನೆಯು "ಪ್ರಾಮಾಣಿಕವಲ್ಲ" ಎಂದಿರುವ ಅವರು, ರಾಜಕಾರಣಿಗಳು ವಾಂಗ್ಚುಕ್ ಅವರ ಖ್ಯಾತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸೇರಬೇಕಿತ್ತು ಎಂದು ಹೇಳಿದ್ದಾರೆ.

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಕಾಂಗ್ರೆಸ್ ನಡೆಸಿದ ದಿಢೀರ್ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಮತ್ತು ಹಲವಾರು ಉನ್ನತ ನಾಯಕರನ್ನು ಬಂಧಿಸಲಾಗಿದ್ದು, ಈ ಬಗ್ಗೆ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ ಅವರ ಪತ್ನಿ ಟೀಕೆ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಉಪವಾಸ ಸತ್ಯಾಗ್ರಹದ ನಡುವೆಯೇ, ನೀಟ್​ ಹಗರಣದ ಸೋರಿಕೆ ವಿರುದ್ಧದ ಹೋರಾಟವನ್ನು ಮುನ್ನಡೆಸುತ್ತಿರುವ ವಾಂಗ್ಚುಕ್​ ಪತ್ನಿ ಗೀತಾಂಜಲಿ ಆಂಗ್ಮೊ, ಜುಲೈ 21 ರಂದು ಕಾಂಗ್ರೆಸ್ ನಡೆಸಿದ ಪ್ರತಿಭಟನೆ "ಪ್ರಾಮಾಣಿಕವಲ್ಲ" ಮತ್ತು ನಾಯಕರು ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಸೇರಬೇಕಿತ್ತು ಎಂದು ಹೇಳಿದ್ದಾರೆ.

ಖ್ಯಾತಿಯ ದುರುಪಯೋಗ

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ಅವರು, ರಾಜಕಾರಣಿಗಳು ಈಗ ವಾಂಗ್ಚುಕ್ ಮತ್ತು ಅವರ ಖ್ಯಾತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಸಾರ್ವಜನಿಕರನ್ನು ಇನ್ನು ಮುಂದೆ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಪ್ರಧಾನಿ ನಿವಾಸದ ಹೊರಗೆ ನಡೆದ ಪ್ರತಿಭಟನೆಯಲ್ಲಿ ಪ್ರಾಮಾಣಿಕತೆಯ ಕೊರತೆ ಇತ್ತು. ಸಾರ್ವಜನಿಕರನ್ನು ಇನ್ನು ಮುಂದೆ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಇದು ಜಾಗೃತ ಭಾರತ. ಪ್ರಾಮಾಣಿಕರಲ್ಲದವರನ್ನು ಯುವಕರು ಹೊರಹಾಕುತ್ತಾರೆ ಎಂದು ಸಾಮಾಜಿಕ ಉದ್ಯಮಿ ಮತ್ತು ಶಿಕ್ಷಣ ತಜ್ಞರೂ ಆಗಿರುವ ಗೀತಾ ಹೇಳಿದ್ದಾರೆ.

ಸಂಸತ್ ಮೆರವಣಿಗೆಯ ಸಮಯದಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ನಡೆದ ದಮನದ ಕ್ರಮವನ್ನು ಖಂಡಿಸಿ ರಾಹುಲ್ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯವರ ಲೋಕ ಕಲ್ಯಾಣ್ ಮಾರ್ಗ್ ನಿವಾಸದ ಬಳಿ ಧರಣಿ ನಡೆಸಿದ ಎರಡು ದಿನಗಳ ನಂತರ ಈ ಹೇಳಿಕೆಯನ್ನು ಗೀತಾ ಹೇಳಿದ್ದಾರೆ. ಮೊನ್ನೆ ಮಂಗಳವಾರ ರಾಹುಲ್ ಅವರನ್ನು ಪ್ರತಿಭಟನಾ ಸ್ಥಳದಿಂದ ಎಳೆದುಕೊಂಡು ಹೋಗಿ ಬಂಧಿಸಲಾಯಿತು. ಗದ್ದಲದಲ್ಲಿ ಅವರ ಮೂಗಿನ ರಕ್ತಸ್ರಾವ ಉಂಟಾಯಿತು. ಪ್ರತಿಭಟನೆಯನ್ನು ಪ್ರಧಾನಿಯವರ ಮನೆ ಬಾಗಿಲಿಗೆ ಕೊಂಡೊಯ್ಯುವ ಮೂಲಕ, ರಾಜಕೀಯ ವರ್ಗವನ್ನು ಹೊಣೆಗಾರರನ್ನಾಗಿ ಮಾಡುವಲ್ಲಿ ಆಡಳಿತಾತ್ಮಕ ವೈಫಲ್ಯದಿಂದ ನಿರೂಪಣೆಯನ್ನು ಬದಲಾಯಿಸಲು ಕಾಂಗ್ರೆಸ್ ಪ್ರಯತ್ನಿಸಿತು ಎಂಬ ಆರೋಪವಿದೆ. ಇದರ ನಡುವೆಯೇ, ಈ ಹೇಳಿಕೆಗಳು ಬಂದಿವೆ.

ತಮ್ಮದೇ ಅಜೆಂಡಾ ಬೇಡ

ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನಡೆಸುವ ವಿದ್ಯಾರ್ಥಿ ಪ್ರತಿಭಟನೆಗಳು ಸಾಂಕೇತಿಕ ಹೆಜ್ಜೆಗಳು ಅಥವಾ ಸನ್ನೆಗಳು ಇನ್ನು ಮುಂದೆ ಸಾಕಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಗೀತಾ ಅವರು ಒತ್ತಿ ಹೇಳಿದರು. "ಚಳವಳಿಯು ಪ್ರತಿಯೊಬ್ಬ ರಾಜಕೀಯ ನಾಯಕರಿಗೂ ಅವರು ಹೇಳಿದಂತೆ ನಡೆಯಬೇಕು ಎಂದು ತೋರಿಸಿದೆ. ರಾಜಕೀಯ ಉದ್ದೇಶಗಳಿಲ್ಲದೆ ಬರುವವರು ಪ್ರತಿಭಟನೆಯಲ್ಲಿ ಸೇರಲು ಸ್ವಾಗತಾರ್ಹ ಎಂದಿರುವ ಗೀತಾ ಅವರು, ಯಾರು ತಮ್ಮದೇ ಆದ ಕಾರ್ಯಸೂಚಿಗಳೊಂದಿಗೆ ಬರುತ್ತಾರೋ ಅವರು ಹಾದಿ ತಪ್ಪುತ್ತಾರೆ. ಏಕೆಂದರೆ ಈ ಚಳವಳಿ ಪ್ರಾಮಾಣಿಕತೆ ಮತ್ತು ಶುದ್ಧತೆಯಿಂದ ಹುಟ್ಟಿಕೊಂಡಿದೆ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಕಾಕ್ರೋಚ್' ಎನ್ನುವುದು ಉತ್ತರ ಭಾರತದ ಹಿಂದಿಯನ್ ಮನುವಾದಿಗಳ ಚಳವಳಿ -ಚೇತನ್ ಅಹಿಂಸಾ
ಮಧುಚಂದ್ರದ ರಕ್ತ ಕಥೆ: ಸೋನಂ ಜಾಮೀನು ರದ್ದು- 3 ವಾರಗಳ ಒಳಗೆ ಶರಣು; 'ಸುಪ್ರೀಂ'​ ಹೇಳಿದ್ದೇನು?