
ನವದೆಹಲಿ: ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟೀವಿಯಲ್ಲಿ ಪದೇ ಪದೇ ಕಾಣಿಸಿಕೊಂಡಿದ್ದಕ್ಕೆ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಚಂದ್ರಯಾನದ ಯಶಸ್ಸು ಅದರ ಹಿಂದೆ ಇದ್ದ ವಿಜ್ಞಾನಿಗಳ ಸಾಧನೆ. ಆದರೆ ಪ್ರಧಾನಿ ಮೋದಿ ಅವರು ಅದರ ಶ್ರೇಯವನ್ನು ಪಡೆಯಲು ಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಟೀಕಿಸಿದ್ದಾರೆ.
‘ಲ್ಯಾಂಡಿಂಗ್ ವೇಳೆ ಪದೇಪದೇ ಟೀವಿಯಲ್ಲಿ ಮೋದಿ ಬರುತ್ತಾರೆ. ಆದರೆ ಚಂದ್ರಯಾನ-3ಕ್ಕಾಗಿ ದುಡಿದ ಹೆವಿ ಎಂಜಿನಿಯರಿಂಗ್ ಕಾರ್ಪೋರೇಷನ್(Heavy Engineering Corporation (HEC)ಎಂಜಿನಿಯರ್ಗಳಿಗೆ ಕಳೆದ 17 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಮಹತ್ವದ ಬಾಹ್ಯಾಕಾಶ ಯೋಜನೆಗಳ (space projects) ಬಜೆಟ್ ಅನ್ನು ಮೋದಿ ಸರ್ಕಾರ ಶೇ.32ರಷ್ಟು ಕಡಿತಗೊಳಿಸಿದೆ. ಆದರೂ ಆ ಹೀರೋಗಳು ವಿಶ್ವದರ್ಜೆಯ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮ ನಡೆಸಿದ್ದಾರೆ. ಮೋದಿ ಅವರಿಗೆ ಆ ವಿಜ್ಞಾನಿಗಳ ಪ್ರತಿಭೆ ಹಾಗೂ ಪರಿಶ್ರಮದ ಬಗ್ಗೆ ಗೌರವವೇ ಇಲ್ಲ. ಇದೆಲ್ಲದರ ನಡುವೆ ವಿಜ್ಞಾನಿಗಳ ಸಾಧನೆ ವೇಳೆ ಪ್ರಚಾರ ಪಡೆದುಕೊಂಡಿದ್ದಾರೆ’ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ-3 ಆರಂಭ ಮಾತ್ರ, ಇಸ್ರೋದ ಮುಂದಿನ ಪ್ರಾಜೆಕ್ಟ್ಗಳನ್ನು ಕಂಡು ಅಚ್ಚರಿ ಪಟ್ಟ ವಿಶ್ವ!
ಚಂದ್ರಯಾನ-3 ಯಶಸ್ಸಿಗೆ ಗೂಗಲ್ ಡೂಡಲ್ ವಿಶಿಷ್ಟಗೌರವ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಯಶಸ್ವಿಯಾಗಿ ಚಂದ್ರಯಾನ-3 ನೌಕೆ ಸಾಫ್್ಟಲ್ಯಾಂಡಿಂಗ್ ಮಾಡಿದ್ದಕ್ಕೆ ಗೂಗಲ್ ಗುರುವಾರ ತನ್ನ ಡೂಡಲ್ನಲ್ಲಿ ವಿಶೇಷ ಗೌರವ ಸೂಚಿಸಿದೆ. ಡೂಡಲ್ನಲ್ಲಿ ‘ಗೂಗಲ್’ ಎಂಬ ಅಕ್ಷರಗಳು ಬಾಹ್ಯಾಕಾಶದಲ್ಲಿ ತೇಲುತ್ತಿರುವ ಹಾಗೆ ಮಾಡಲಾಗಿದೆ. ಇದರ ಮಧ್ಯದಲ್ಲಿ ಎರಡನೇ ‘ಒ’ ಅಕ್ಷರವನ್ನು ನಗುವ ಚಂದ್ರನಂತೆ ಆ್ಯನಿಮೇಟೆಡ್ನಲ್ಲಿ ಚಿತ್ರಿಸಲಾಗಿದೆ. ಈ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ ಸಾಫ್ಟ್ ಲ್ಯಾಂಡಿಂಗ್ ಮಾಡುತ್ತಿರುವುದನ್ನು ಚಿತ್ರಿಸಲಾಗಿದೆ. ಅದರಲ್ಲಿ ಮನೆಯೊಂದನ್ನು ಸಹ ಚಿತ್ರಿಸಲಾಗಿದೆ. ಇದರ ಸುತ್ತಲೂ ನಕ್ಷತ್ರಗಳು ಮಿನುಗುವಂತೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ