ಅತೃಪ್ತರೊಂದಿಗಿನ ಸಭೆ ಬೆನ್ನಲ್ಲೇ ಬದಲಾವಣೆ ಮೊರೆ ಹೋದ ಕಾಂಗ್ರೆಸ್, 2 PCCಅಧ್ಯಕ್ಷೆ ರಾಜೀನಾಮೆ!

By Suvarna NewsFirst Published Dec 20, 2020, 4:48 PM IST
Highlights

ಶನಿವಾರದಂದು ದೆಹಲಿಯಲ್ಲಿ ಕಾಂಗ್ರೆಸ್‌ನ ಹಲವಾರು ಅತೃಪ್ತ ನಾಯಕರೊಂದಿಗೆ ಹೈಕಮಾಂಡ್ ಮೀಟಿಂಗ್| ಅತೃಪ್ತರೊಂದಿಗಿನ ಸಭೆ ಬೆನ್ನಲ್ಲೇ ಬದಲಾವಣೆ ಮೊರೆ ಹೋದ ಕಾಂಗ್ರೆಸ್| 2 PCCಅಧ್ಯಕ್ಷೆ ರಾಜೀನಾಮೆ!

ನವದೆಹಲಿ(ಡಿ.20): ಶನಿವಾರದಂದು ದೆಹಲಿಯಲ್ಲಿ ಕಾಂಗ್ರೆಸ್‌ನ ಹಲವಾರು ಅತೃಪ್ತ ನಾಯಕರೊಂದಿಗೆ 10 ಜನಪಥ ರಸ್ತೆಯಲ್ಲಿರುವ ಕಚೇರಿಯಲ್ಲಿ ಹೈಕಮಾಂಡ್ ನಡೆಸಿದ ಸಭೆ ಬಳಿಕ ನಾಲ್ಕು ರಾಜ್ಯಗಳಲ್ಲಿ ಪಕ್ಷ ಬದಲಾವಣೆ ಆರಂಭಿಸಿದೆ. ಆರಂಭ ಹಂತದಲ್ಲಿ ತೆಲ್ಲಂಗಾಣ, ಗುಜರಾತ್, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಬದಲಾವಣೆ ತರಲು ಸಜ್ಜಾಗಿದೆ. ಹೀಗಿರುವಾಗ ತೆಲ್ಲಂಗಾಣ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಗ್ರೇಟರ್ ಹೈದರಾಬಾದ್ ನಗರ ನಿಗಮ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಸೋಲು ಹಾಗೂ ಕಳಪೆ ಪ್ರದರ್ಶನದ ಜವಾಬ್ದಾರಿ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.  

ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ  ಕೂಡಾ ಉಪ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನಕ್ಕೆ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಪ್ರಾದೇಶಿಕ ಅಧ್ಯಕ್ಷರೂ ಆಗಿರುವ ಕಮಲನಾಥ್ ಅವರಿಗೂ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿದೆ. 

ಅತ್ತ ಶನಿವಾರದಂದು ಕಾಂಗ್ರೆಸ್ ಮುಂಬೈ ಪ್ರಾದೇಶಿಕ ಪಕ್ಷದಲ್ಲೂ ಬದಲಾವಣೆ ತರಲಾಗಿದೆ. ಸುಮಾರು ಒಂದೂವರೆ ವರ್ಷದ ಬಳಿಕ ಅಶೋಕ್ ಅರ್ಜುನ್ ರಾವ್ ಜಗ್ತಾಪ್‌ರನ್ನು ಕಾಂಗ್ರೆಸ್ ಮುಂಬೈ ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. 

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಅಸ್ಸಾಂ ಹಾಗೂ ಕೇರಳ ಮೂರು ಮೂರು ಅಖಿಲ ಭಾರತೀಯ ಕಾಂಗ್ರೆಸ್ ಕಮಿಟಿಗೂ ಅದಾಧಿಕಾರಿಗಳನ್ನು ನೇಮಿಸಿದ್ದಾರೆ. ಇಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ ಎಂಬುವುದು ಉಲ್ಲೇಖನೀಯ,

click me!