Congress Anti-OBC: ಕಾಂಗ್ರೆಸ್ ಒಬಿಸಿ ವಿರೋಧಿಗಳು: ಹಿಂದುಳಿದವರ ಬಗ್ಗೆ ರಾಹುಲ್ ರಾಹುಲ್ ಗಾಂಧಿ ಕಳಕಳಿ ಕೇವಲ ನಾಟಕ: ಬಿಜೆಪಿ

Kannadaprabha News   | Kannada Prabha
Published : May 29, 2026, 05:16 AM IST
Congress Anti OBC Rahul Gandhi s Concern for Backward Classes Is Just Drama BJP

ಸಾರಾಂಶ

ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಒಬಿಸಿ ಹಕ್ಕುಗಳ ಬಗೆಗಿನ ನಿಲುವು ಕಪಟತನದಿಂದ ಕೂಡಿದೆ ಎಂದು ಟೀಕಿಸಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕುವ ಮೂಲಕ, ಕಾಂಗ್ರೆಸ್ ತನ್ನ ಒಬಿಸಿ ವಿರೋಧಿ ನೀತಿ ತೋರಿಸಿದೆ..

  • ಹಿಮಾಚಲ, ಕೇರಳದಂತೆ ಈಗ ಕರ್ನಾಟಕದಲ್ಲಿ
  • ಒಬಿಸಿ ನಾಯಕರ ವಿಭಜಿಸಲು ಯತ್ನ: ಶೆಹಜಾದ್‌

ನವದೆಹಲಿ (ಮೇ.29): ಒಬಿಸಿ (Other Backward Classes) ಸಮುದಾಯದ ಹಕ್ಕುಗಳ ಬಗ್ಗೆ ಸದಾ ಮಾತನಾಡುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಕಪಟತನ, ಕರ್ನಾಟಕ ಕಾಂಗ್ರೆಸ್‌(Karnataka Congress) ವಿಷಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ(BJP) ಕಿಡಿಕಾರಿದೆ.

ಕರ್ನಾಟಕ ಕಂಗ್ರೆಸ್‌ ಕ್ಷಿಪ್ರ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲ(BJP National Spokesperson Shehzad Poonawalla), ‘ರಾಹುಲ್‌ ಗಾಂಧಿಯವರು ಹಕ್ಕುಗಳು ಜನಸಂಖ್ಯೆಗೆ ಅನುಗುಣವಾಗಿ ಇರಬೇಕು ಎನ್ನುತ್ತಾರೆ. ಜಾತಿ ಸಮಸ್ಯೆಗಳ ಬಗ್ಗೆ ಪದೇ ಪದೇ ಮಾತನಾಡುತ್ತಾರೆ. ತತ್ವಕ್ಕೂ ನಡೆಗೂ ಸಂಬಂಧವಿಲ್ಲ. ಅವರು ಕಪಟಿ. ಹೇಳುವುದು ಒಂದು ಮಾಡುವುದು ಇನ್ನೊಂದು. ಈಗ ಸಿದ್ದರಾಮಯ್ಯರನ್ನು ಬದಲಿಸಿ ಡಿ.ಕೆ.ಶಿವಕುಮಾರ್‌ಗೆ ಅಧಿಕಾರ ಕೊಟ್ಟಿದ್ದಾರೆ’ ಎಂದರು.

ಜತೆಗೆ, ಕಾಂಗ್ರೆಸ್‌ ಒಬಿಸಿ ನಾಯಕರಿಗೆ ಪ್ರಾಶಸ್ತ್ಯ ನೀಡುತ್ತಿಲ್ಲ ಎಂದ ಅವರು, ‘ಒಬಿಸಿ ಸಮುದಾಯದವರಾಗಿದ್ದು ಅಹಿಂದ ನಾಯಕ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ತೆಗೆದು ಹಾಕಲಾಗಿದೆ. ಈ ಮೂಲಕ ಕಾಂಗ್ರೆಸ್ ಆಡಳಿತದ ಯಾವುದೇ ರಾಜ್ಯಗಳಲ್ಲಿ ಒಬಿಸಿ ಮುಖ್ಯಮಂತ್ರಿಗಳಿಲ್ಲ. ಕೇರಳದಲ್ಲಿ ಸತೀಶನ್‌, ಹಿಮಾಚಲ ಪ್ರದೇಶದಲ್ಲಿ ಸುಖು, ತೆಲಂಗಾಣದಲ್ಲಿ ರೇವಂತ್‌ ರೆಡ್ಡಿಗೆ ಮಾಡಿದಂತೆ ಈಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರಿಗೂ ಅದೇ ಕಥೆ . ಹಾಗಾದರೆ ಪಕ್ಷದಲ್ಲಿ ಹಿಂದುಳಿದ ಪ್ರಾತಿನಿಧ್ಯ ಎಲ್ಲಿದೆ? ಅವರು ಒಬಿಸಿ ನಾಯಕರನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ ಹೊರತೂ ಕೊಟ್ಟ ಮಾತಿನಂತೆ ಎಂದಿಗೂ ನಡೆದುಕೊಳ್ಳುವುದಿಲ್ಲ’ ಎಂದು ಟೀಕಿಸಿದರು.

ಕಾಂಗ್ರೆಸ್ ಒಬಿಸಿ ವಿರೋಧಿಗಳು: ಶೆಹಜಾದ್‌

‘ಕಾಂಗ್ರೆಸ್‌ ಅಂಬೇಡ್ಕರ್ ಅವರ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ. 370 ನೇ ವಿಧಿ, ಮುಸ್ಲಿಂ ಮೀಸಲಾತಿ ಪ್ರತಿಪಾದಿಸುತ್ತಿದ್ದಾರೆ. ಆದರೆ ಅವರು ವಾಸ್ತವವಾಗಿ ಒಬಿಸಿ ವಿರೋಧಿ ಮತ್ತು ಹಿಂದುಳಿದ ವರ್ಗಗಳ ವಿರೋಧಿಗಳು.

ಆರ್‌ಜಿಎಫ್ ಟ್ರಸ್ಟ್ ಅಥವಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯೊಳಗೆ ಒಬಿಸಿಗಳಿಗೆ ಸ್ಥಾನವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಮೂರನೇ ಅವಧಿಗೆ ಒಬಿಸಿ ನಾಯಕನನ್ನು ಪ್ರಧಾನಿಯನ್ನಾಗಿ ಮಾಡಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ’ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೂನ್‌ 21ರ ನೀಟ್ ಮರುಪರೀಕ್ಷೆ ಸೋರಿಕೆ ತಡೆಯಲು ಭಾರತೀಯ ಸೇನೆಯ ನೆರವು, ಕೇಂದ್ರದ ಮಾಸ್ಟರ್ ಪ್ಲಾನ್
ಪ್ರವಾಸೋದ್ಯಮದಲ್ಲಿ ಎಐ ತಂತ್ರಜ್ಞಾನ, ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ!