ಭಾರ​ತದ ಸೈನಿ​ಕರ ಗಮನ ಬೇರೆಡೆ ಸೆಳೆ​ಯಲು ಪಂಜಾಬಿ, ಹಿಂದಿ ಹಾಡು ಹಾಕಿ ಚೀನಾ ಟಾಂಗ್‌!

Kannadaprabha News   | Asianet News
Published : Sep 18, 2020, 08:24 AM IST
ಭಾರ​ತದ ಸೈನಿ​ಕರ ಗಮನ ಬೇರೆಡೆ ಸೆಳೆ​ಯಲು ಪಂಜಾಬಿ, ಹಿಂದಿ ಹಾಡು ಹಾಕಿ ಚೀನಾ ಟಾಂಗ್‌!

ಸಾರಾಂಶ

ಭಾರ​ತದ ಸೈನಿ​ಕರ ಗಮನ ಬೇರೆಡೆ ಸೆಳೆ​ಯುವ ‘ಮಾ​ನ​ಸಿಕ ಯುದ್ಧ​’​ವನ್ನು ಚೀನಾ ಆರಂಭಿಸಿದೆ. ಇದರ ಭಾಗವಾಗಿ ಗಡಿಯಲ್ಲಿ ಪಂಜಾಬಿ ಹಾಡುಗಳನ್ನು ಲೌಡ್‌ಸ್ಪೀಕರ್‌ನಲ್ಲಿ ಚೀನಾ ಸೇನೆ ಹಾಕಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಲೇಹ್‌(ಸೆ.18): ಲಡಾಖ್‌ ಗಡಿ​ಯಲ್ಲಿ ಭಾರ​ತದ ವಿರುದ್ಧ ಕಾಲು ಕೆದರಿ ಜಗಳ ತೆಗೆ​ಯು​ತ್ತಿ​ರುವ ಚೀನಾ, ಈಗ ಭಾರ​ತೀಯ ಸೈನಿ​ಕರ ಗಮ​ನ​ವನ್ನು ಬೇರೆಡೆ ಸೆಳೆ​ಯುವ ‘ವಿ​ಶಿಷ್ಟಕುತಂತ್ರ’ ಮಾಡಿದೆ. ಗಡಿ​ಯಲ್ಲಿ ಲೌಡ್‌​ಸ್ಪೀ​ಕರ್‌ ಅಳ​ವ​ಡಿ​ಸಿ​ರುವ ಚೀನಾ ಸೇನೆಯು, ಪಂಜಾಬಿ ಭಾಂಗ್ಡಾ ಗೀತೆ​ಗ​ಳನ್ನು ಹಾಕು​ತ್ತಿದೆ ಹಾಗೂ ಹಿಂದಿ​ಯಲ್ಲಿ ಎಚ್ಚ​ರಿ​ಕೆಯ ಸಂದೇಶ ನೀಡ​ತೊ​ಡ​ಗಿದೆ.

ಪೂರ್ವ ಲಡಾ​ಖ್‌ನ ಪಾಂಗಾಂಗ್‌ ಸರೋ​ವರ ಹಾಗೂ ಚುಶೂಲ್‌ ಪ್ರದೇ​ಶ​ದಲ್ಲಿ ಈ ತಂತ್ರ​ವನ್ನು ಚೀನಾ ಅನು​ಸ​ರಿ​ಸು​ತ್ತಿದೆ ಎಂದು ತಿಳಿ​ದು​ಬಂದಿದೆ. ಇದು ಭಾರ​ತದ ಸೈನಿ​ಕರ ಗಮನ ಬೇರೆಡೆ ಸೆಳೆ​ಯುವ ‘ಮಾ​ನ​ಸಿಕ ಯುದ್ಧ​’​ವಾ​ಗಿದೆ ಎಂದು ವಿಶ್ಲೇ​ಷಿ​ಸ​ಲಾ​ಗಿ​ದೆ.

ಈ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ಭಾರ​ತೀಯ ಸೇನಾ​ಧಿ​ಕಾ​ರಿ​ಯೊ​ಬ್ಬರು, ‘ಚೀನಾ ಹಾಕಿದ ಹಾಡು​ಗ​ಳನ್ನು ನಾವು ಆಸ್ವಾ​ದಿ​ಸು​ತ್ತೇ​ವೆ’ ಎಂದು ಚಟಾಕಿ ಹಾರಿ​ಸಿ​ದ್ದಾರೆ. ಅಲ್ಲದೆ, ‘ಈ ಮಾನ​ಸಿಕ ಯುದ್ಧದ ತಂತ್ರದಿಂದ ವಿಚ​ಲಿ​ತ​ರಾ​ಗು​ವ​ವರು ನಾವ​ಲ್ಲ’ ಎಂದು ಅವ​ರು ಗುಡು​ಗಿ​ದ್ದಾ​ರೆ.

ಇದೇ ಮೊದ​ಲ​ಲ್ಲ:

ಈ ಹಿಂದೆಯೂ ಚೀನಾ ಈ ಕುಟಿಲ ನೀತಿ​ಯನ್ನು ಅನು​ಸ​ರಿ​ಸಿದ ಉದಾ​ಹ​ರ​ಣೆ​ಗ​ಳಿವೆ. 1962ನೇ ಇಸ​ವಿ​ಯಲ್ಲಿ ನಡೆದ ಯುದ್ಧದ ವೇಳೆ ಬಾಲಿ​ವು​ಡ್‌ ಹಿಂದಿ ಗೀತೆ​ಗ​ಳನ್ನು ಅದು ಲೌಡ್‌​ಸ್ಪೀ​ಕ​ರ್‌​ನಲ್ಲಿ ಗಡಿ​ಯಲ್ಲಿ ಪ್ರಸಾರ ಮಾಡಿ​ತ್ತು. ತಮಗೆ ಹಿಂದಿ ಬರು​ತ್ತದೆ. ಭಾರ​ತದ ನಡೆ​ಗಳ ಬಗ್ಗೆ ತಮಗೆ ತಿಳಿ​ಯು​ತ್ತಿ​ದೆ ಎಂಬ ಸಂದೇ​ಶ​ವನ್ನು ಭಾರ​ತೀಯ ಸೈನಿ​ಕ​ರಿಗೆ ರವಾ​ನಿ​ಸಲು ಅದು ಈ ತಂತ್ರ​ವನ್ನು ಅನು​ಸ​ರಿ​ಸಿ​ತ್ತು.

ಯಾರಿಗೂ ನಾವು ತಲೆಬಾಗಲ್ಲ: ಚೀನಾಕ್ಕೆ ಭಾರತ ಖಡಕ್ ಎಚ್ಚರಿಕೆ

ಚೀನಾ ಗಡಿ​ಯಲ್ಲಿ ನಿಯೋ​ಜನೆ ಆಗಿ​ರುವ ಭಾರ​ತೀಯ ಬಹು​ತೇಕ ಸೈನಿ​ಕ​ರಿ​ಗೆ ಪಂಜಾಬಿ ಹಾಗೂ ಹಿಂದಿ ಗೊತ್ತು. ಆ ಭಾಷೆ​ಯಲ್ಲೇ ಅವರು ಮಾತ​ನಾ​ಡು​ತ್ತಿರುತ್ತಾರೆ. ಇದನ್ನು ಗಮ​ನಿ​ಸಿ​ರುವ ಚೀನಾ, ಈಗ ಪಂಜಾಬಿ ಗೀತೆ ಹಾಕಿ ಹಿಂದಿಯಲ್ಲಿ ಎಚ್ಚ​ರಿಕೆ ಸಂದೇಶ ನೀಡು​ತ್ತಿ​ರು​ವು​ದನ್ನು ಗಮ​ನಿ​ಸಿ​ದರೆ, ತಾನು ಭಾರ​ತದ ತಿರು​ಗೇ​ಟಿ​ನಿಂದ ಹೆದ​ರಿ​ಲ್ಲ ಎಂದು ತೋರ್ಪ​ಡಿ​ಸಿ​ಕೊ​ಳ್ಳು​ತ್ತಿದೆ ಎಂದೂ ವಿಶ್ಲೇ​ಷಿ​ಸ​ಲಾ​ಗು​ತ್ತಿ​ದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!