
ನವದೆಹಲಿ(ಮಾ.01): ಮುಂಬೈನಲ್ಲಿ ನಡೆದ ವಿದ್ಯತ್ ಕಡಿತದ ಹಿಂದೆ ಚೀನಾದ ಸೈಬರ್ ದಾಳಿ ಕೈವಾಡವಿದೆ ಅನ್ನೋದು ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಭಾರತದ ಲಸಿಕೆ ಘಟಕದ ಮೇಲೆ ಸೈಬರ್ ದಾಳಿ ಯತ್ನವನ್ನು ಚೀನಾ ನಡೆಸಿತ್ತು ಅನ್ನೋ ಮಾಹಿತಿಯೂ ಇದೀಗ ಬಹಿರಂಗಗೊಂಡಿದೆ.
ಭಾರತದ ಲಸಿಕೆಗೆ ಆದ್ಯತೆ, ಚೀನಾಗೆ ಶಾಕ್ ಕೊಟ್ಟ ಲಂಕಾ!
ಗಲ್ವಾನ್ ಘರ್ಷಣೆ ಬಳಿಕ ಚೀನಾ ಅಕ್ಷರಶಃ ನಲುಗಿದೆ. ನೇರಾ ನೇರಾ ನಿಂತು ಯುದ್ಧ ಮಾಡುವ ತಾಕತ್ತಿನ ಕುರಿತು ಚೀನಾಗೆ ಅನುಮಾನ ಕಾಡತೊಡಗಿದೆ. ಹೀಗಾಗಿ ಚೀನಾ ಸರ್ಕಾರದ ಅಧೀಕೃತ ಸೈಬರ್ ಹ್ಯಾಕರ್ಸ್, ಭಾರತದ ಮೇಲೆ ಸೈಬರ್ ದಾಳಿ ಯತ್ನ ನಡೆಸಿರುವುದು ಇದೀಗ ಅಮರಿಕದ ರೆಕಾರ್ಡೆಡ್ ಫ್ಯೂಚರ್ ಅಧ್ಯಯನ ವರದಿ ಹಾಗೂ ಸೈಬರ್ ಗುಪ್ತಚರ ಸಂಸ್ಥೆ ಮಾಹಿತಿ ಬಹಿರಂಗ ಪಡಿಸಿದೆ.
ಮತ್ತಷ್ಟು ಪ್ರದೇಶಗಳಿಂದ ಚೀನಾ ಸೇನೆ ಹಿಂತೆಗೆತ!...
ಭಾರತದ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಘಟದ ಐಟಿ ವಿಭಾಗದ ಮೇಲೆ ಚೀನಾ ಸೈಬರ್ ದಾಳಿ ಯತ್ನ ಮಾಡಿತ್ತು. ಭಾರತ್ ಬಯೋಟೆಕ್ ಹಾಗೂ ಸೆರಮ್ ಇನ್ಸಿಸ್ಟಿಟ್ಯೂಟ್ ಲಸಿಕೆ ತಯಾರಿಕಾ ಘಟಕದ ಐಟಿ ವಿಭಾಗವನ್ನು ಗುರಿಯಾಗಿಸಿ ಚೀನಾ ಸೈಬರ್ ದಾಳಿ ಯತ್ನ ನಡೆಸಿತ್ತು ಎಂದು ಸಿಫರ್ಮಾ ಸೈಬರ್ ಗುಪ್ತಚರ ಸಂಸ್ಥೆ ಹೇಳಿದೆ.
ಎರಡು ಲಸಿಕಾ ಘಟಕದಲ್ಲಿನ ಕೆಲ ಲೋಪದೋಷಗಳನ್ನು ಪತ್ತೆ ಹಚ್ಚಿ, ದಾಳಿಗೆ ಯತ್ನ ನಡೆಸಿದೆ. ಈ ಮೂಲಕ ಭಾರತದ ಲಸಿಕೆ ಉತ್ಪಾದನೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿತ್ತು. ಲಸಿಕೆ ತಯಾರಿಕೆಯಲ್ಲಿ ಭಾರತವನ್ನು ಮೀರಿಸುವ ಯತ್ನದಲ್ಲಿರುವ ಚೀನಾ, ಈ ರೀತಿಯ ಕುತಂತ್ರ ಮಾಡಿದೆ ಅನ್ನೋ ಮಾಹಿತಿ ಇದೀಗ ಭಾರತೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ