ಕೇವಲ 7 ತಾಸ​ಲ್ಲಿ 101 ಸಂತಾನಹರಣ ಶಸ್ತ್ರಚಿಕಿತ್ಸೆ: ತನಿಖೆಗೆ ಆದೇಶ!

Published : Sep 05, 2021, 12:30 PM IST
ಕೇವಲ 7 ತಾಸ​ಲ್ಲಿ 101 ಸಂತಾನಹರಣ ಶಸ್ತ್ರಚಿಕಿತ್ಸೆ: ತನಿಖೆಗೆ ಆದೇಶ!

ಸಾರಾಂಶ

* 101 ಮಹಿಳೆಯರಿಗೆ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ * ಕೇವಲ 7 ತಾಸ​ಲ್ಲಿ 101 ಸಂತಾನಹರಣ ಶಸ್ತ್ರಚಿಕಿತ್ಸೆ: ತನಿಖೆಗೆ ಆದೇಶ * ದಿನ​ಕ್ಕೆ ಗರಿಷ್ಠ 30 ಸರ್ಜರಿ ಮಾತ್ರ ನಡೆ​ಸ​ಬ​ಹು​ದು * 101 ಸರ್ಜರಿ ಹೇಗೆ ಮಾಡಿದ ಎಂಬುದೇ ಅಚ್ಚ​ರಿ

ರಾಯ್‌ಪುರ(ಸೆ.05): ಕೇವಲ 7 ಗಂಟೆಯಲ್ಲಿ 101 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದೇನೆ ಎಂದು ಹೇಳಿ​ಕೊ​ಳ್ಳು​ತ್ತಿ​ರು​ವ ವೈದ್ಯನ ವಿರುದ್ಧ ತನಿಖೆಗೆ ಛತ್ತೀಸ್‌ಗ​ಢ ಸರ್ಕಾರ ಆದೇಶಿಸಿದೆ.

ಸರ್ಕಾರದ ನಿಯಮದಂತೆ ಒಬ್ಬ ವೈದ್ಯ ದಿನವೊಂದಕ್ಕೆ ಗರಿ​ಷ್ಠ 30 ಸಂತಾ​ನ​ಹ​ರಣ ಸರ್ಜರಿ ಮಾಡಬಹುದು. ಆದರೆ, ಸುರ್ಜುಗಾ ಜಿಲ್ಲೆಯ ನರ್ಮ​ದಾ​ಪುರ ಎಂಬಲ್ಲಿ ಆ.27ರಂದು ಆಯೋಜಿಸಿದ್ದ ಸಂತಾನಹರಣ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಮಧ್ಯಾಹ್ನ 12ರಿಂದ ಸಂಜೆ 7ರವ​ರೆ​ಗೆ ವೈದ್ಯ ಡಾ

ಜಿಬ್ನಸ್‌ ಎಕ್ಕಾ ಎಂಬಾ​ತ 101 ಮಹಿಳೆಯರಿಗೆ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿ​ದ್ದಾ​ನೆ ಎಂದು ಹೇಳ​ಲಾ​ಗಿತ್ತು. ಈ ಬಗ್ಗೆ ಸಾರ್ವ​ಜ​ನಿ​ಕ​ರಿಂದ ದೂರು​ಗಳು ಕೂಡ ಬಂದಿ​ದ್ದ​ವು.

ಈಗ ಈ ಬಗ್ಗೆ ಸರ್ಕಾರ ವೈದ್ಯ ಮತ್ತು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಶೋಕಾಸ್‌ ನೋಟಿಸ್‌ ನೀಡಿದೆ.

ಆದರೆ ಇದಕ್ಕೆ ಸ್ಪಷ್ಟನೆ ನೀಡಿ​ರುವ ವೈದ್ಯ, ‘ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕಾಯುತ್ತಿದ್ದರು ಅವರೆಲ್ಲರೂ ಬಸ್‌ ಸಂಪರ್ಕಗಳಿಲ್ಲದ ದೂರದ ಊರುಗಳಿಂದ ಬಂದಿದ್ದರು. ಹಾಗಾಗಿ ಎಲ್ಲರಿಗೂ ಸರ್ಜರಿ ಮಾಡಲಾಯಿತು’ ಎಂದಿ​ದ್ದಾ​ನೆ.

2014ರಲ್ಲಿ ಬಿಲಾ​ಸ್‌​ಪು​ರ​ದಲ್ಲಿ ಟ್ಯುಬೆ​ಕ್ಟ​ಮಿಗೆ ಒಳ​ಗಾದ 83 ಮಹಿ​ಳೆ​ಯ​ರು ಅಸ್ವ​ಸ್ಥ​ಗೊಂಡು 13 ಮಂದಿ ಸಾವ​ನ್ನ​ಪ್ಪಿ​ದ್ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!