ತನ್ನ ಶ್ರದ್ಧಾಂಜಲಿ ಪತ್ರ ತಾನೇ ಬರೆದ ಮಹೇಶ್: ಕಣ್ಣೀರು ತರಿಸಿದ ಪತ್ರ!

Published : Oct 19, 2020, 04:42 PM ISTUpdated : Oct 19, 2020, 04:45 PM IST
ತನ್ನ ಶ್ರದ್ಧಾಂಜಲಿ ಪತ್ರ ತಾನೇ ಬರೆದ ಮಹೇಶ್: ಕಣ್ಣೀರು ತರಿಸಿದ ಪತ್ರ!

ಸಾರಾಂಶ

ಕಣ್ಣೀರು ತರಿಸಿದ ವ್ಯಕ್ತಿಯ ಸ್ವಯಂ ನಿಧನ ವಾರ್ತೆ ಪತ್ರ| ಎಜ್ಜಿ ಕೆ. ಉಮಾಮಹೇಶ್‌ ಬರೆದ ನಿಧನ ಪತ್ರ ಭಾರೀ ವೈರಲ್‌

ಚೆನ್ನೈ(ಅ.19): ಸಾಮಾನ್ಯವಾಗಿ ಅಗಲಿದ ವ್ಯಕ್ತಿಯ ಫೋಟೋವನ್ನು ಕುಟುಂಬಸ್ಥರು ಅಥವಾ ಸ್ನೇಹಿತರು ಪತ್ರಿಕೆ ಮತ್ತು ಇನ್ನಿತರ ಭಿತ್ತಿಪತ್ರಗಳಲ್ಲಿ ಹಾಕಿಸಿ ಶ್ರದ್ಧಾಂಜಲಿ ಅಥವಾ ಗೌರವ ಸಲ್ಲಿಸಲಾಗುತ್ತದೆ. ಆದರೆ, ಇತ್ತೀಚೆಗಷ್ಟೇ ನಿಧನ ಹೊಂದಿದ ವ್ಯಕ್ತಿಯೊಬ್ಬರು ಸಾವಿಗೂ ಮುನ್ನ ತಾವೇ ಬರೆದಿಟ್ಟಿದ್ದ ತಮ್ಮ ನಿಧನ ವಾರ್ತೆಯ ಪತ್ರ ನೆಟ್ಟಿಗರನ್ನು ಕಣ್ಣೀರು ಮತ್ತು ಭಾವನಾತ್ಮಕತೆಯಲ್ಲಿ ತೇಲಿಸಿರುವುದು ಮಾತ್ರ ಸುಳ್ಳಲ್ಲ.

ತಮಿಳುನಾಡು ಮೂಲದ ಎಜ್ಜಿ ಕೆ. ಉಮಾಮಹೇಶ್‌(72) ಎಂಬುವರು ಅ. 10ರಂದು ವಿಧಿವಶರಾಗಿದ್ದು, ತಮ್ಮ ಇಹಲೋಕದ ಪಯಣ ಮುಗಿಸುವ ಮುನ್ನವೇ ತಮ್ಮ ನಿಧನ ವಾರ್ತೆಯನ್ನು ಖುದ್ದು ತಾವೇ ಬರೆದು, ತಾವು ಸತ್ತ ಬಳಿಕ ಏನೆಲ್ಲಾ ಮಾಡಬೇಕು ಎಂಬುದರ ವಿವರಣೆ ನೀಡಿದ್ದಾರೆ.

I regret to inform you that my vintage vehicle that was being restored, in spite of the best mechanics in India with...

Posted by Ejji K. Umamahesh on Thursday, 15 October 2020

ಅದರಲ್ಲಿ ತಮ್ಮ ಜೀವನ ಅನುಭವವನ್ನು ಹಂಚಿಕೊಂಡಿರುವ ಅವರು, ನನ್ನ ಸಮಯ ಮುಗಿದಿದೆ. ನೀವೆಲ್ಲರೂ ನಿಮ್ಮ ಜೀವನವನ್ನು ಸರಿಯಾಗಿ ಮತ್ತು ಸಂತೋಷದಿಂದ ಕಳೆಯಿರಿ. ಅಲ್ಲದೆ, ತಮ್ಮ ದೇಹದಲ್ಲಿನ ಉಪಯುಕ್ತ ಭಾಗಗಳು ಮತ್ತು ಮೃತದೇಹ ದಾನ ಮಾಡುವಂತೆ ಕುಟುಂಬಸ್ಥರಿಗೆ ಕೋರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಮಾ ಮಹೇಶ್‌ ಅವರ ಶವವನ್ನು ಶರೀರ ರಚನಾಶಾಸ್ತ್ರ ಸಂಸ್ಥೆಗೆ ಸಂಶೋಧನೆಗಾಗಿ ದಾನ ಮಾಡಲಾಗಿದೆ ಎಂದಿದ್ದಾರೆ ಕುಟುಂಬಸ್ಥರು. ಈ ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ