ಕಾಡು ಬಿಟ್ಟು ನಾಡಿಗೆ ನುಗ್ಗಿದ ನಮೀಬಿಯಾ ಚೀತಾ: ಕುನೋ ಅಭಯಾರಣ್ಯಕ್ಕೆ ಕಳಿಸಲು ಕಾರ್ಯಾಚರಣೆ

Published : Apr 03, 2023, 10:08 AM IST
ಕಾಡು ಬಿಟ್ಟು ನಾಡಿಗೆ ನುಗ್ಗಿದ ನಮೀಬಿಯಾ ಚೀತಾ: ಕುನೋ ಅಭಯಾರಣ್ಯಕ್ಕೆ ಕಳಿಸಲು ಕಾರ್ಯಾಚರಣೆ

ಸಾರಾಂಶ

ಚೀತಾ ಹೊಲವೊಂದರಲ್ಲಿ ಸುತ್ತಾಡುತ್ತಿದ್ದು, ಅದರನ್ನು ಮರಳಿ ಅರಣ್ಯಕ್ಕೆ ಕಳುಹಿಸಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಜೊತೆಗೆ ಚೀತಾ ಇರುವ ಪ್ರದೇಶಕ್ಕೆ ಗ್ರಾಮಸ್ಥರು ತೆರಳದಂತೆ ಪೊಲೀಸರು ಕಾವಲು ಕುಳಿತಿದ್ದಾರೆ.

ಶೋಪುರ (ಏಪ್ರಿಲ್ 3, 2023): ಇತ್ತೀಚೆಗಷ್ಟೇ ಅಭಯಾರಣ್ಯಕ್ಕೆ ಬಿಡಲಾಗಿದ್ದ ನಮೀಬಿಯಾ ಚೀತಾಗಳ ಪೈಕಿ ಒಂದು ಚೀತಾ ಭಾನುವಾರ ಮುಂಜಾನೆ ದಾರಿ ತಪ್ಪಿ ಕಾಡಿನಿಂದ ನಾಡು ಪ್ರವೇಶಿಸಿದೆ. ಒಬಾನ್‌ ಎಂಬ ಚಿರತೆ ಶನಿವಾರ ರಾತ್ರಿ ಬಳಿಕ ಕುನೋ ರಾಷ್ಟ್ರೀಯ ಅಭಯಾರಣ್ಯದಿಂದ 20 ಕಿ.ಮೀ ದೂರದಲ್ಲಿರುವ ಬರೋಡಾ ಗ್ರಾಮದತ್ತ ಸಾಗಿರುವುದು ಅದಕ್ಕೆ ಅಳವಡಿಸಿರುವ ರೇಡಿಯೋ ಕಾಲರ್‌ನಿಂದ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀತಾ ಹೊಲವೊಂದರಲ್ಲಿ ಸುತ್ತಾಡುತ್ತಿದ್ದು, ಅದರನ್ನು ಮರಳಿ ಅರಣ್ಯಕ್ಕೆ ಕಳುಹಿಸಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಜೊತೆಗೆ ಚೀತಾ ಇರುವ ಪ್ರದೇಶಕ್ಕೆ ಗ್ರಾಮಸ್ಥರು ತೆರಳದಂತೆ ಪೊಲೀಸರು ಕಾವಲು ಕುಳಿತಿದ್ದಾರೆ.

ಇದನ್ನು ಓದಿ: ಮತ್ತೆ ಭಾರತಕ್ಕೆ ಬಂದ 12 ಚೀತಾಗಳು: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅತಿಥಿಗಳು..!

ಭಾರತಕ್ಕೆ ಚೀತಾ ಸಂತತಿಯನ್ನು ಮತ್ತೇ ಪರಿಚಯಿಸುವ ಉದ್ದೇಶದಿಂದ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ಕರೆತರಲಾಗಿತ್ತು. ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಕ್ವಾರೆಂಟೈನ್‌ನಲ್ಲಿದ್ದ 8 ಚೀತಾಗಳಲ್ಲಿ 4 ಬೇಟೆಯಾಡುವ ಚೀತಾಗಳನ್ನು ಕಳೆದ ತಿಂಗಳು ಉದ್ಯಾನವನದ ಕಾಡಿನೊಳಗೆ ಸ್ವತಂತ್ರವಾಗಿ ಬಿಡಲಾಗಿತ್ತು. ಜೊತೆಗೆ ಇತ್ತೀಚೆಗೆ ಇನ್ನೂ 12 ಚೀತಾಗಳು ನಮೀಬಿಯಾದಿಂದ ಭಾರತಕ್ಕೆ ಆಗಮಿಸಿವೆ.

ಇದನ್ನೂ ಓದಿ: ಭಾರತದಲ್ಲಿ ನಮೀಬಿಯಾ ಚೀತಾಗಳಿಂದ ಮೊದಲ ಬೇಟೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌