Chandrayaan - 3: ವಿಕ್ರಮ್ ಲ್ಯಾಂಡರ್‌ ಇಳಿಸಲು ಅಸ್ಸಾಂನ ಈ ಯುವ ವಿಜ್ಞಾನಿಗಳ ಪಾತ್ರವೇನು ನೋಡಿ..!

Published : Aug 28, 2023, 01:45 PM ISTUpdated : Aug 28, 2023, 02:13 PM IST
Chandrayaan - 3: ವಿಕ್ರಮ್ ಲ್ಯಾಂಡರ್‌ ಇಳಿಸಲು ಅಸ್ಸಾಂನ ಈ ಯುವ ವಿಜ್ಞಾನಿಗಳ ಪಾತ್ರವೇನು ನೋಡಿ..!

ಸಾರಾಂಶ

ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್‌ ಅನ್ನು ಇಳಿಸಲು ಅನೇಕರಂತೆ ಅಸ್ಸಾಂನ ಈ ವಿಜ್ಞಾನಿಗಳ ಪಾತ್ರವೂ ಇದೆ. 

ಗುವಾಹಟಿ (ಆಗಸ್ಟ್‌ 28, 2023): ಇಸ್ರೋದ ಚಂದ್ರಯಾನ-3 ಯಶಸ್ಸಿಗೆ ಭಾರತೀಯರು ಸಂಭ್ರಮಿಸುತ್ತಿದ್ದು, ಜಗತ್ತಿನ ಅಕೇಕ ರಾಷ್ಟ್ರಗಳು ಶುಭ ಕೋರಿವೆ. ಇನ್ನು, ವಿಕ್ರಮ್ ಲ್ಯಾಂಡರ್‌ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಕೊಡುಗೆ ನೀಡಿದ ವಿಜ್ಞಾನಿಗಳಲ್ಲಿ ಅಸ್ಸಾಂನ ನಜ್ನೀನ್ ಯಾಸ್ಮಿನ್ ಮತ್ತು ಡಾ. ಬಹರುಲ್ ಇಸ್ಲಾಂ ಬರ್ಭುಯಾನ್ ಸಹ ಸೇರಿದ್ದಾರೆ.

ಅಸ್ಸಾಂನ ನಾಗಾಂವ್ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ನಜ್ನೀನ್ ಯಾಸ್ಮಿನ್ 2 ವರ್ಷಗಳ ಹಿಂದೆ ಕಠಿಣ ಆಯ್ಕೆ ಪರೀಕ್ಷೆ ಪಾಸ್‌ ಮಾಡಿ ಇಸ್ರೋಗೆ ಸೇರಿದ್ದಾರೆ. ಈ ಯುವ ವಿಜ್ಞಾನಿ ಇಸ್ರೋದ ಉಡಾವಣಾ ವಿಭಾಗದಲ್ಲಿ 1 ವರ್ಷಕ್ಕೂ ಹೆಚ್ಚು ಕಾಲ ರಾಡಾರ್ ಟ್ರ್ಯಾಕಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 

ಇದನ್ನು ಓದಿ: ದ್ವೇಷ-ಭಾಷಣ, ಭಯೋತ್ಪಾದನೆಗೆ ಕಾರಣವಾಗುವ ಸಿದ್ಧಾಂತಗಳನ್ನು ಧಾರ್ಮಿಕ ಮುಖಂಡರು ಎದುರಿಸಬೇಕು: ಡಾ. ಅಲ್-ಇಸ್ಸಾ

ಯಾಸ್ಮಿನ್ ತನ್ನ ಚೊಚ್ಚಲ ಮಗುವಿಗೆ ಮಾತೃತ್ವ ರಜೆಯಲ್ಲಿದ್ದಾಗಲೂ ಕನಿಷ್ಠ 2 ಬಾರಿ ನಿರ್ಣಾಯಕ ಕಾರ್ಯಾಚರಣೆಗಳಿಗಾಗಿ ಆಕೆಯನ್ನು ಕರೆಸಲಾಗಿದ್ದು, ಆಕೆ ತನ್ನ ಮಗುವನ್ನು ಕರೆದುಕೊಂಡು ಹೋಗಿದ್ದರು ಎಂದು ತಿಳಿದುಬಂದಿದೆ. ವೈವಾಹಿಕ ಜೀವನ, ಗರ್ಭಾವಸ್ಥೆಯ ನಂತರದ ಹಂತದ ಸವಾಲುಗಳನ್ನು ಎದುರಿಸುತ್ತಿದ್ದರೂ ನಜೀನ್ ಚಂದ್ರಯಾನ್ - 3 ಬಗ್ಗೆ ತುಂಬಾ ಒಲವು ಹೊಂದಿದ್ದರು. ಅನೇಕ ಬಾರಿ, ನಜೀನ್ ತನ್ನ ಮಗುವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಮನೆಯಿಂದಲೇ ಕೆಲಸ ಮಾಡಿದ್ದಾಳೆ. 

ನಜ್ನಿನ್ ಯಾಸ್ಮಿನ್ ಎರಡು ವರ್ಷಗಳ ಹಿಂದೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋ ಕಚೇರಿಯಲ್ಲಿ ವಿಜ್ಞಾನಿಯಾಗಿ ನೇಮಕಾತಿ ಪತ್ರವನ್ನು ಪಡೆದ್ದಿದ್ದಾರೆ. ಬಾಲ್ಯದಿಂದಲೂ ವಿಜ್ಞಾನಿಯಾಗಬೇಕೆಂದು ಕನಸು ಕಂಡಿದ್ದ ನಜ್ನೀನ್ ಯಾಸ್ಮಿನ್, ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಯಶಸ್ಸಿನಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದರು. ಯುವ ಪೀಳಿಗೆ ತಮ್ಮನ್ನು ತಾವು ದುರ್ಬಲರು ಎಂದು ಭಾವಿಸಬೇಡಿ ಮತ್ತು ಕಠಿಣ ಪರಿಶ್ರಮದ ಮೂಲಕ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಸ್ಥಾನ ಪಡೆಯಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ. ಸಾಧಾರಣ ಕುಟುಂಬದಿಂದ ಬಂದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ಬುಲ್ ಕಲಾಂ ಅವರ ಜೀವನ ಮತ್ತು ಕೆಲಸದಿಂದ ನಜ್ನೀನ್ ಸ್ಫೂರ್ತಿ ಪಡೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಇಸ್ಲಾಮಿಕ್‌ ದೇಶಗಳಲ್ಲೂ ಸುಧಾರಣೆಯಾಗ್ತಿದೆ ವೈಯಕ್ತಿಕ ಕಾನೂನು: ಭಾರತದಲ್ಲಿ ಮಾತ್ರ Uniform Civil Codeಗೆ ತೀವ್ರ ವಿರೋಧ

ಮತ್ತೊಂದೆಡೆ, ಕನಸನ್ನು ಬೆನ್ನಟ್ಟಿ ಶ್ರಮಿಸಿದರೆ ಎಲ್ಲಾ ಕನಸುಗಳು ನನಸಾಗುತ್ತವೆ ಎಂದು ಅಸ್ಸಾಂನ ಹೈಲಕಂಡಿಯ ಡಾ. ಬಹರುಲ್ ಇಸ್ಲಾಂ ಬರ್ಭುಯಾನ್ ಸಾಬೀತುಪಡಿಸಿದ್ದಾರೆ. ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಬುಧವಾರ ಸಂಜೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದ ನಂತರ ಬಹರುಲ್ ಇಸ್ಲಾಂ ಅವರ ಹೆಸರು ಬೆಳಕಿಗೆ ಬಂದಿದೆ. ಅವರು ಇಸ್ರೋದ ಪ್ರಮುಖ ವಿಜ್ಞಾನಿಯಾಗಿದ್ದು, ಚಂದ್ರಯಾನ-3 ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಇವರೂ ಒಬ್ಬರು.

ಬಾಹ್ಯಾಕಾಶ ಜಗತ್ತಿನಲ್ಲಿ ದಾಖಲೆ ನಿರ್ಮಿಸಿದ ಐತಿಹಾಸಿಕ ಕಾರ್ಯದಲ್ಲಿ ಭಾಗಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳು ಯಾವಾಗಲೂ ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಯಶಸ್ವಿಯಾಗಿ ಇಳಿದ ನಂತರ ಚಂದ್ರಯಾನ್ - 3 ಯಶಸ್ಸು ಯುವ ಪೀಳಿಗೆಯಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಮತ್ತು ಕುತೂಹಲವನ್ನು ಹೆಚ್ಚಿಸುತ್ತದೆ" ಎಂದೂ ಅವರು ಹೇಳಿದರು.

ಇದನ್ನೂ ಓದಿ: ಕಾಶ್ಮೀರ ಯುವಕರಲ್ಲಿ ಹೆಚ್ಚಾಗ್ತಿದೆ ಚುಚ್ಚುಮದ್ದಿನ ಹೆರಾಯಿನ್ ಬಳಕೆ: ವೈದ್ಯರ ಎಚ್ಚರಿಕೆ; ಪೋಷಕರ ಕಳವಳ

ಬಹರುಲ್ ಅವರ ಪೋಷಕರು ಶಿಕ್ಷಕರಾಗಿದ್ದರು ಮತ್ತು ಅವರು ಆರಂಭಿಕ ಹಂತದಿಂದ್ಲೇ ತಮ್ಮ ಮನೆಯಲ್ಲಿ ವಿಜ್ಞಾನದ ವಾತಾವರಣವನ್ನು ಸೃಷ್ಟಿಸಿದರು ಎಂದು ತಿಳಿದುಬಂದಿದೆ. ಇನ್ನು, ಬಹರುಲ್ ಸಾಧನೆ ಬಗ್ಗೆ ಅವರ ಕುಟುಂಬ ಹರ್ಷ ವ್ಯಕ್ತಪಡಿಸಿದೆ. 

ಇದನ್ನೂ ಓದಿ: ಸಂಸ್ಕೃತ ಪಂಡಿತೆಯಾದ ಡಾ. ನೂರಿಮಾ ಯಾಸ್ಮಿನ್ ಶಾಸ್ತ್ರಿ: ಕುರಾನ್ ಜತೆ ವೇದ ಅಧ್ಯಯನ ಮಾಡಿರೋ ಮುಸ್ಲಿಂ ಮಹಿಳೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ
ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ