ಅಜ್ಮೀರ್‌ ದರ್ಗಾಗೆ ಚಾದರ್‌ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ!

Published : Jan 15, 2024, 03:19 PM IST
ಅಜ್ಮೀರ್‌ ದರ್ಗಾಗೆ ಚಾದರ್‌ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ!

ಸಾರಾಂಶ

ಖ್ವಾಜಾ ಮೊಯಿನುದ್ದೀನ್‌ ಚಿಸ್ತಿ ಅವರ 812ನೇ ವಾರ್ಷಿಕ ಉರುಸ್‌ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಜ್ಮೀರ್‌ ದರ್ಗಾಗೆ ಚಾದರ್‌ಅನ್ನು ಅರ್ಪಿಸಿದರು.  

ಅಜ್ಮೀರ್ (ಜ.15): ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ 812 ವಾರ್ಷಿಕ ಉರುಸ್‌ ಸಂದರ್ಭದಲ್ಲಿ, ಶನಿವಾರ ದರ್ಗಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಾದರ್‌ ಅನ್ನು ಅರ್ಪಿಸಲಾಯಿತು. ದರ್ಗಾದಲ್ಲಿದ್ದ ಜನರಿಗಾಗಿ ಬುಲಂದ್ ದರ್ವಾಜಾದಲ್ಲಿ ಪ್ರಧಾನಿಯವರ ಸಂದೇಶವನ್ನು ಗಟ್ಟಿಯಾಗಿ ಓದಲಾಯಿತು. "ಆಧ್ಯಾತ್ಮಿಕತೆ, ನಂಬಿಕೆ ಮತ್ತು ಜ್ಞಾನದ ಈ ಭೂಮಿಯಲ್ಲಿ, ಭಾರತದ ಪವಿತ್ರ ಭೂಮಿಯ ಸಂತ, ಫಕೀರ್ ಮತ್ತು ಪೀರ್ ಜನರು ತಮ್ಮ ಜೀವನ, ತತ್ವಗಳು ಮತ್ತು ಸಿದ್ಧಾಂತಗಳ ಮೂಲಕ ಸರಿಯಾದ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದ್ದಾರೆ" ಎಂದು ಸಂದೇಶವು ಹೇಳಿದೆ. "ಈ ಅಮೃತ ಕಾಲದಲ್ಲಿ, ನಮ್ಮ ಆಳವಾದ ಪರಂಪರೆಯೊಂದಿಗೆ ನಾವು ಸುಂದರವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಹಾದಿಯಲ್ಲಿದ್ದೇವೆ" ಎಂದು ಸಂದೇಶದಲ್ಲಿ ಬರೆಯಲಾಗಿದೆ "ಮಾನವೀಯತೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ಗರೀಬ್ ನವಾಜ್ ಅವರ ಸಂದೇಶವು ಪ್ರಪಂಚದ ಜನರ ಮೇಲೆ ಪ್ರಭಾವ ಬೀರಿದೆ ಎಂದು ತಿಳಿಸಲಾಗಿದೆ.

ವಾರ್ಷಿಕ ಉರುಸ್‌ ಆಚರಿಸಲು, ನಮ್ಮ ಸಂಸ್ಕೃತಿ ಮತ್ತು ವೈವಿಧ್ಯತೆಯ ಶಕ್ತಿ ಪರಸ್ಪರ ಸಂಪರ್ಕವಾಗಿದೆ. ದೆಹಲಿಯಿಂದ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕ್ ಅವರು ಪ್ರಧಾನಿಯವರ ಚಾದರ್‌ ಅನ್ನು ತಂದಿದ್ದರು. ಸ್ವತಃ ಪ್ರಧಾನಿ ಮೋದಿ ಅವರು ಈ ಚಾದರ್‌ಅನ್ನು ನೀಡಿದ್ದರು. ಶನಿವಾರ, ಪ್ರಧಾನ ಮಂತ್ರಿಗಳ ನಿಯೋಗವು ದರ್ಗಾದಲ್ಲಿ ಚದ್ದರ್ ಅನ್ನು ಅರ್ಪಿಸಿತು ಮತ್ತು ಅವರು ಕಳಿಸಿದ್ದ ಸಂದೇಶವನ್ನು ದರ್ಗಾದಲ್ಲಿಯೇ ಓದಲಾಯಿತು.

ಅಜ್ಮೇರ್ ದರ್ಗಾದ ಒಳಗೆ ಮಹಿಳೆಯ ನೃತ್ಯ ವೈರಲ್: ವ್ಯಾಪಕ ಆಕ್ರೋಶ

ಅಜ್ಮೀರ್‌ ದರ್ಗಾದಲ್ಲಿ ನಡೆಯುವ ವಾರ್ಷಿಕ ಉರುಸ್‌ನಲ್ಲಿ ಪಾಲ್ಗೊಳ್ಳಲು ನೂರಾರು ಭಕ್ತರು ಆಗಮಿಸುತ್ತಾರೆ. ಮುಂದಿನ ದಿನಗಳಲ್ಲಿ ದರ್ಗಾದಲ್ಲಿ ನಾಡಿನ ವಿವಿಧ ರಾಜಕೀಯ ನಾಯಕರ ಸರದಾರರ ದಂಡೇ ಇರಲಿದೆ.  ಜಿಲ್ಲಾಡಳಿತ ಶನಿವಾರವೂ ದರ್ಗಾದಲ್ಲಿ ಚಾದರ್‌ ಅರ್ಪಿಸಿದ್ದು, ಐಜಿ ಅಜ್ಮೀರ್ ಲತಾ ಮನೋಜ್, ಜಿಲ್ಲಾಧಿಕಾರಿ ಭಾರತಿ ದೀಕ್ಷಿತ್, ಎಸ್ಪಿ ಚುನಾ ರಾಮ್ ಜತ್, ಮೇಳ ಮ್ಯಾಜಿಸ್ಟ್ರೇಟ್ ಜಗದೀಶ್ ಪ್ರಸಾದ್ ಗೌರ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಗೆಲುವಿನ ಹರಕೆ ತೀರಿಸಿದ ಶಾಸಕ ನಾಗೇಂದ್ರ: ರಾಜಸ್ಥಾನದ ಅಜ್ಮೀರ ದರ್ಗಾಕ್ಕೆ ಭೇಟಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು