Central Nepal floods: ನೇಪಾಳ ಭೀಕರ ಪ್ರವಾಹಕ್ಕೆ ಭಾರತ ಸ್ಪಂದನೆ, ನಿರ್ಮಲಾ ಸೀತಾರಾಮನ್ ವಿಶೇಷ ಪ್ರಾರ್ಥನೆ

Published : Aug 28, 2026, 11:33 AM IST
Central Nepal floods Indian Leaders Rally Support for Flood Hit Nepal

ಸಾರಾಂಶ

ಕೆನಡಾದಲ್ಲಿ ನೇಪಾಳ ಪ್ರವಾಹ ಸಂತ್ರಸ್ತರಿಗಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಂಸದ ಮೊಹಿಬುಲ್ಲಾ ನದ್ವಿ ಅವರು ಭಾರತ ನೆರವು ನೀಡಬೇಕೆಂದು ಒತ್ತಾಯಿಸಿದರೆ, ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ ಕಾಣೆಯಾದವರ ಬಗ್ಗೆ ಕಳವಳ ವ್ಯಕ್ತಪಡಿಸಿ ಸಹಾಯವಾಣಿ ಆರಂಭಿಸಿದ್ದಾರೆ.

ಕೆನಡಾದಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಸೀತಾರಾಮನ್ ಪ್ರಾರ್ಥನೆ

ನೇಪಾಳ-ಟಿಬೆಟ್ ಭಾಗದಲ್ಲಿ ಸಂಭವಿಸಿದ ರಣ ಭೀಕರ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರಿಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರಷ್ಟೇ ಅಲ್ಲದೆ ಈ ದುರಂತಕ್ಕೆ ಭಾರತದ ರಾಜಕೀಯ ನಾಯಕರು ಕೂಡಾ ನೇಪಾಳದ ಜೊತೆ ನಾವಿದ್ದೇವೆ ಎಂದು ಹೇಳಿದ್ದಾರೆ. ಸಚಿವೆ ಸೀತಾರಾಮನ್ ಅವರು ಕೆನಡಾದಲ್ಲಿನ ಶ್ರೀ ಶಿವ ಸತ್ಯನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ನೇಪಾಳ ಪ್ರವಾಹದಲ್ಲಿ ಕಾಣೆಯಾದವರು ಸುರಕ್ಷಿತವಾಗಿರಲು ಪ್ರಾರ್ಥಿಸಿದರು. ಪ್ರವಾಹದಲ್ಲಿ ದುರ್ಮರಣಕ್ಕೀಡಾದವರ ಆತ್ಮಕ್ಕೆ ಶಾಂತಿ ಕೋರಿ 'ಮೋಕ್ಷ ದೀಪ'ವನ್ನು ಬೆಳಗಿದರು. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿ ಸಂತ್ರಸ್ತ ಕುಟುಂಬಗಳಿಗೆ ತಮ್ಮ ಸಂತಾಪ ಸೂಚಿಸಿದರು.

ಇತ್ತ, ಸಮಾಜವಾದಿ ಪಕ್ಷದ ಸಂಸದ ಮೊಹಿಬುಲ್ಲಾ ನದ್ವಿ ಅವರು ಭಾರತವು ನೇಪಾಳಕ್ಕೆ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಎರಡು ದೇಶಗಳ ನಡುವಿನ ಹಳೆಯ ಸಂಬಂಧವನ್ನು ಅವರು ನೆನಪಿಸಿಕೊಂಡರು. ನೇಪಾಳದ ಜೊತೆ ನಮಗೆ ಬಹಳ ಒಳ್ಳೆಯ ಸಂಬಂಧವಿದೆ. ನೇಪಾಳ ಯಾವಾಗಲೂ ಭಾರತದ ಜೊತೆ ನಿಂತಿದೆ. ಈ ವಿಪತ್ತಿನ ಸಮಯದಲ್ಲಿ ನಮ್ಮ ದೇಶ ನೇಪಾಳಕ್ಕೆ ಮುಕ್ತವಾಗಿ ಸಹಾಯ ಮಾಡಬೇಕು. ನೆರೆಹೊರೆಯವರಾಗಿ ದೇಶದ ಎಲ್ಲರೂ ಸಹಾಯ ಮಾಡಬೇಕು ಎಂದು ಅವರು ಹೇಳಿದರು. ನೈಸರ್ಗಿಕ ವಿಕೋಪಗಳು ಯಾವುದೇ ದೇಶ ಅಥವಾ ಸಮುದಾಯಕ್ಕೆ ಬರಬಹುದು, ಹಾಗಾಗಿ ಮಾನವೀಯ ದೃಷ್ಟಿಯಿಂದ ಸಹಾಯ ಮಾಡಬೇಕು ಎಂದು ರಾಂಪುರದ ಸಂಸದರಾದ ನದ್ವಿ ಒತ್ತಿ ಹೇಳಿದರು.

ಇತ್ತ ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಕೂಡಾ ಪ್ರವಾಹದಿಂದ ಉಂಟಾದ ಅನಾಹುತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಛತ್ತೀಸ್‌ಗಢದ ಕೆಲವರು ನಾಪತ್ತೆಯಾಗಿದ್ದಾರೆ ಎಂಬ ವರದಿಗಳಿವೆ ಎಂದು ಅವರು ತಿಳಿಸಿದರು. ಪ್ರವಾಹದಿಂದ ನೇಪಾಳ ತೀವ್ರ ಸಂಕಷ್ಟ ಎದುರಿಸುತ್ತಿರುವುದು ಬಹಳ ದುಃಖದ ಸಂಗತಿ. ನಮ್ಮ ದೇಶ ಮತ್ತು ರಾಜ್ಯದ ಕೆಲವರು ನಾಪತ್ತೆಯಾಗಿದ್ದಾರೆ ಎಂಬ ವರದಿಗಳಿವೆ. ನಾವು ಸಂತಾಪ ವ್ಯಕ್ತಪಡಿಸುತ್ತೇವೆ ಎಂದು ರಾಯ್‌ಪುರದಲ್ಲಿ ಸಾಯಿ ಹೇಳಿದರು.

ಛತ್ತೀಸ್‌ಗಢ ಸರ್ಕಾರವು ಕಂಟ್ರೋಲ್ ರೂಂ ಸ್ಥಾಪಿಸಿದ್ದು ಮಾಹಿತಿ ಅಥವಾ ಸಹಾಯ ಬೇಕಾದವರಿಗಾಗಿ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. "ನಾವು ಇಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿದ್ದೇವೆ ಮತ್ತು ಸಹಾಯವಾಣಿ ಸಂಖ್ಯೆ ನೀಡಿದ್ದೇವೆ. ಯಾರಿಗಾದರೂ ಸಹಾಯ ಬೇಕಿದ್ದರೆ ಆ ಸಂಖ್ಯೆಗೆ ಸಂಪರ್ಕಿಸಿದರೆ ಸರ್ಕಾರ ಅವರಿಗೆ ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರಕ್ಷಣೆ ಮತ್ತು ನಿಗಾಕ್ಕೆ ಅಧಿಕಾರಿಗಳ ಸಮನ್ವಯ

ನೇಪಾಳ ಮತ್ತು ಟಿಬೆಟ್ ಪ್ರದೇಶದಲ್ಲಿನ ಹಠಾತ್ ಪ್ರವಾಹದ ನಂತರ ಸಿಲುಕಿರುವ ಅಥವಾ ನಾಪತ್ತೆಯಾಗಿರುವ ಜನರ ಬಗ್ಗೆ ಮಾಹಿತಿ ಕಲೆಹಾಕುವ ಪ್ರಯತ್ನಗಳು ಮುಂದುವರಿದಿವೆ. ಭಾರತೀಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳು ರಾಯಭಾರ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಿ, ನಾಪತ್ತೆಯಾದವರನ್ನು ಪತ್ತೆಹಚ್ಚಲು ಮತ್ತು ಸಂತ್ರಸ್ತ ಭಾರತೀಯರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿವೆ.

ಈ ದುರಂತದಿಂದಾಗಿ ಗಡಿ ರಾಜ್ಯಗಳ ಅಧಿಕಾರಿಗಳು ಕೂಡಾ ಕಟ್ಟೆಚ್ಚರ ವಹಿಸಿದ್ದಾರೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಭಾರತದ ಕಡೆಗೆ ಬರುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ. (ANI)

(ಈ ಸುದ್ದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದ ವಿವರಗಳನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಾಟ್ ಜಿಪಿಟಿಯನ್ನ ಮನುಷ್ಯರೆಂದು ಭಾವಿಸಿ, ಮೊಮ್ಮಗನ ಮದುವೆ ಮಾತುಕತೆ ನಡೆಸಿದ ಅಜ್ಜಿ! ವಿಡಿಯೋ ವೈರಲ್
ರೆಬೀಸ್‌ನ ಲಾಸ್ಟ್ ಸ್ಟೇಜ್‌ ಗೆದ್ದು ಮನೆಗೆ ಬಂದ ಬಾಲಕ.. ಇದು ಹೇಗೆ ಸಾಧ್ಯ? ವೈದ್ಯರಿಂದ ಅಚ್ಚರಿ ಉತ್ತರ