ರೈತರಿಗೆ ಕೇಂದ್ರದ ಸಿಹಿ ಸುದ್ದಿ: ಕಬ್ಬು ಖರೀದಿ ದರ ಕ್ವಿಂಟಲ್‌ಗೆ 340ಕ್ಕೇರಿಕೆ

Published : Feb 22, 2024, 09:25 AM ISTUpdated : Feb 22, 2024, 09:27 AM IST
ರೈತರಿಗೆ ಕೇಂದ್ರದ ಸಿಹಿ ಸುದ್ದಿ: ಕಬ್ಬು ಖರೀದಿ ದರ ಕ್ವಿಂಟಲ್‌ಗೆ 340ಕ್ಕೇರಿಕೆ

ಸಾರಾಂಶ

ದೆಹಲಿ ಚಲೋ ಹೋರಾಟ ತೀವ್ರವಾಗುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಮುಂಬರುವ ಕಬ್ಬು ಖರೀದಿ ಹಂಗಾಮಿಗೆ ಸಂಬಂಧಿಸಿದಂತೆ ಖರೀದಿ ದರ ಹೆಚ್ಚಳ ಮಾಡಲು ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ನವದೆಹಲಿ: ದೆಹಲಿ ಚಲೋ ಹೋರಾಟ ತೀವ್ರವಾಗುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಮುಂಬರುವ ಕಬ್ಬು ಖರೀದಿ ಹಂಗಾಮಿಗೆ ಸಂಬಂಧಿಸಿದಂತೆ ಖರೀದಿ ದರ ಹೆಚ್ಚಳ ಮಾಡಲು ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಹೀಗಾಗಿ 2024ರ ಅ.1ರಿಂದ 2025ರ ಸೆ.30ರ ಅವಧಿಗೆ ಕಬ್ಬು ಖರೀದಿ ದರವನ್ನು ಕ್ವಿಂಟಲ್‌ಗೆ 315 ರು.ನಿಂದ 340 ರು.ಗೆ ಹೆಚ್ಚಿಸಲಾಗಿದೆ. ಅಂದರೆ ಪ್ರತಿ ಕ್ವಿಂಟಲ್‌ಗೆ 25 ರು. ಹೆಚ್ಚಳ ಮಾಡಲಾಗಿದೆ. ರೈತರಿಗೆ ನ್ಯಾಯಸಮ್ಮತ ಮತ್ತು ಸಮಂಜಸ ಬೆಲೆ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಕಾಂಗ್ರೆಸ್‌ಗೆ ಐಟಿ ಶಾಕ್‌

ನವದೆಹಲಿ: ಇತ್ತೀಚೆಗಷ್ಟೇ ತನ್ನ ಬ್ಯಾಂಕ್‌ ಖಾತೆಗಳನ್ನು ತಡೆಹಿಡಿದಿದ್ದ ಆದಾಯ ತೆರಿಗೆ ಇಲಾಖೆ ಇದೀಗ, ವಿವಿಧ ಬ್ಯಾಂಕುಗಳಲ್ಲಿನ ತನ್ನ ಖಾತೆಗಳಿಂದ 65 ಕೋಟಿ ರು.ಗಳನ್ನು ಹಿಂತೆಗೆದುಕೊಂಡಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಅಲ್ಲದೆ ತೆರಿಗೆ ಇಲಾಖೆ ಕ್ರಮ ಪ್ರಜಾಪ್ರಭುತ್ವ ವಿರೋಧಿ. ವಿಷಯ ಕೋರ್ಟ್‌ನಲ್ಲಿದ್ದರೂ ಐಟಿ ಇಲಾಖೆ ಈ ಕ್ರಮ ಜರುಗಿಸಿದ್ದು ನಿಯಮ ಬಾಹಿರ ಎಂದು ಪಕ್ಷ ಕಿಡಿಕಾರಿದೆ.

ಮದುವೆ ಕಾರಣಕ್ಕೆ ಮಹಿಳೆಯನ್ನು ಕೆಲಸದಿಂದ ತೆಗೆವಂತಿಲ್ಲ: ಸುಪ್ರೀಂಕೋರ್ಟ್

ಈ ಕುರಿತು ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ಖಜಾಂಚಿ ಅಜಯ್ ಮಾಕನ್, ‘ತೆರಿಗೆ ರಿಟರ್ನ್ಸ್‌ ಸಲ್ಲಿಕೆ ವಿಳಂಬದ ಕಾರಣ ನೀಡಿ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ 210 ಕೋಟಿ ರು. ತೆರಿಗೆ ಡಿಮಾಂಡ್‌ ನೋಟಿಸ್‌ ಜಾರಿ ಮಾಡಿತ್ತು. ಅಲ್ಲದೆ ಇದಕ್ಕೆ ಪೂರಕವಾಗಿ ಉಳಿತಾಯ ಖಾತೆ ಜಪ್ತಿ ಮಾಡಿತ್ತು. ಇದರ ವಿರುದ್ಧ ಐಟಿ ನ್ಯಾಯಾಧಿಕರಣಕ್ಕೆ ನಾವು ಮನವಿ ಸಲ್ಲಿಸಿದಾಗ ಐಟಿ ಇಲಾಖೆ ಕ್ರಮಕ್ಕೆ ನ್ಯಾಯಾಧಿಕರಣ ತಡೆ ನೀಡಿದೆ. ಅಲ್ಲದೆ, 135 ಕೋಟಿ ರು. ಕನಿಷ್ಠ ಬ್ಯಾಲೆನ್ಸ್‌ ಮೇಂಟೇನ್‌ ಮಾಡುವಂತೆ ಸೂಚಿಸಿದೆ. ಹೀಗಿದ್ದಾಗ್ಯೂ ಐಟಿ ಇಲಾಖೆ ನಮ್ಮ ಖಾತೆಗಳಿಂದ 65 ಕೋಟಿ ರು.ಗಳನ್ನು ವಿತ್‌ಡ್ರಾ ಮಾಡಿಕೊಂಡಿದೆ. ಇದು ಅಕ್ರಮ ಎಂದು ಆರೋಪಿಸಿದರು.

ಮುಸ್ಲಿಮರ ಸೆಳೆಯಲು ಬಿಜೆಪಿ ಹೊಸ ತಂತ್ರ: ಉರ್ದು, ಅರೇಬಿಕ್‌ ಭಾಷೆಗಳಲ್ಲಿ ಪ್ರಚಾರ

ತನಿಖಾ ಸಂಸ್ಥೆಗಳ ಕ್ರಮವನ್ನು ಮರುಪರಿಶೀಲನೆ ಮಾಡದೇ ಇದ್ದರೆ ಪ್ರಜಾಪ್ರಭುತ್ವವು ಕೊನೆಗೊಳ್ಳುತ್ತದೆ ಎಂದು ಕಿಡಿಕಾರಿದ ಅವರು ಕಾಂಗ್ರೆಸ್‌ಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Kali Dance Controversy: ಕಾಳಿ ವೇಷ ಧರಿಸಿ ಕೆಟ್ಟ ಡ್ಯಾನ್ಸ್ ಪ್ರದರ್ಶನ, ಆಕ್ರೋಶಕ್ಕೆ ಬೆದರಿ ಕ್ಷಮೆ ಕೇಳಿದ ಕೋಲ್ಕತ್ತಾ ಕಲಾತಂಡ
ಪಶ್ಚಿಮ ಬಂಗಾಳದ ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಟಿಎಂಸಿ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!