'BJP ಆಡಳಿತದಲ್ಲಿ ಪಾನ್ ಪಟ್ಟಿ ಅಂಗಡಿಯಾಗಿದೆ CBI'..!

Suvarna News   | Asianet News
Published : Nov 20, 2020, 03:39 PM ISTUpdated : Nov 20, 2020, 03:44 PM IST
'BJP ಆಡಳಿತದಲ್ಲಿ ಪಾನ್ ಪಟ್ಟಿ ಅಂಗಡಿಯಾಗಿದೆ CBI'..!

ಸಾರಾಂಶ

ಸಿಬಿಐ ಎಲ್ಲಾದ್ರೂ ಹೋಗುತ್ತೆ, ಯಾರ ಮೇಲಾದ್ರು ಕೇಸ್ ಹಾಕುತ್ತೆ, ವಿಶೇಷವಾಗಿ ಬಿಜೆಪಿ ಬಿಟ್ಟು ಉಳಿದ ಸರ್ಕಾರವಿರುವಲ್ಲಿ ಇದು ಹೆಚ್ಚಾಗಿದೆ. ಬಿಜೆಪಿ ಸರ್ಕಾರದಡಿಯಲ್ಲಿ ಸಿಬಿಐ ಪಾನ್ ಪಟ್ಟಿ ಅಂಗಡಿಯಾಗಿ ಬದಲಾಗಿದೆ ಎಂದು ಸಚಿವ ಅಸ್ಲಂ ಶೇಖ್ ಟೀಕಿಸಿದ್ದಾರೆ.

ಮುಂಬೈ(ನ.20): ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಿಬಿಐ ಪಾನ್ ಶಾಪ್ ಆಗಿ ಬದಲಾಗಿದೆ ಎಂದು ಮಹಾರಾಷ್ಟ್ರ ಸಚಿವ ಅಸ್ಲಂ ಶೇಖ್ ಟೀಕಿಸಿದ್ದಾರೆ. ಬಿಜೆಪಿ ಸರ್ಕಾರದಡಿಯಲ್ಲಿ ಸಿಬಿಐ ಪಾನ್ ಪಟ್ಟಿಯ ಅಂಗಡಿಯಾಗಿ ಬದಲಾಗಿದೆ ಎಂದಿದ್ದಾರೆ.

ಸಿಬಿಐ ಎಲ್ಲಾದ್ರೂ ಹೋಗುತ್ತೆ, ಯಾರ ಮೇಲಾದ್ರು ಕೇಸ್ ಹಾಕುತ್ತೆ, ವಿಶೇಷವಾಗಿ ಬಿಜೆಪಿ ಬಿಟ್ಟು ಉಳಿದ ಸರ್ಕಾರವಿರುವಲ್ಲಿ ಇದು ಹೆಚ್ಚಾಗಿದೆ, ಸಿಬಿಐ ಸಿಎಂ ಸಚಿವರ ಮೇಲೂ ಕ್ರಮ ಕೈಗೊಳ್ತಿದೆ. ಸರ್ಕಾರದ ಅನುಮತಿ ಪಡೆದು ಸಿಬಿಐ ತನಿಖೆ ನಡೆಸಬೇಕೆಂಬ ಸುಪ್ರಿಂ ಕೋರ್ಟ್‌ ತೀರ್ಪನ್ನು ಸಚಿವ ಸ್ವಾಗತಿಸಿದ್ದಾರೆ.

ತನ್ನ ಮೇಲೆಯೇ ಕೊರೋನಾ ಔಷಧ ಪ್ರಯೋಗ ಮಾಡಿಕೊಂಡ ಆರೋಗ್ಯ ಸಚಿವ..!

ರಾಜ್ಯ ಸರ್ಕಾರಗಳ ಒಪ್ಪಿಗೆಯಿಲ್ಲದೆ ಸಿಬಿಐ ತನಿಖೆ ನಡೆಸಬಾರದು. ಕೇಂದ್ರ ಅನುಮತಿಯಿಲ್ಲದೆ ಯಾವುದೇ ರಾಜ್ಯಕ್ಕೆ ಏಜೆನ್ಸಿಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿತ್ತು.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಬಿ.ಆರ್. ಗವಾಯಿ ಅವರು ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆಯನ್ನು ಉಲ್ಲೇಖಿಸಿ ಭಾರತದ ಪ್ರಧಾನ ತನಿಖಾ ಸಂಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ.

ಸರ್ಕಾರದ ಜೊತೆ ಇದ್ದು ಹೋರಾಟ ಮಾಡ್ತೀನಿ : ಪ್ರಜ್ವಲ್ ರೇವಣ್ಣ

ಕಾನೂನಿನ ಪ್ರಕಾರ, ರಾಜ್ಯದ ಒಪ್ಪಿಗೆ ಅತ್ಯಗತ್ಯ ಮತ್ತು ರಾಜ್ಯದ ಒಪ್ಪಿಗೆಯಿಲ್ಲದೆ ಕೇಂದ್ರವು ಸಿಬಿಐ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ. ಕಾನೂನು ಸಂವಿಧಾನದ ಫೆಡರಲ್ ರಚನೆಗೆ ಅನುಗುಣವಾಗಿದೆ "ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು