
ಬೆಂಗಳೂರು (ಡಿ.5): ಇಂದ್ರಪ್ರಸ್ಥ ಮೆಡಿಕಲ್ ಕಾರ್ಪೊರೇಷನ್ ಲಿಮಿಟೆಡ್ (IMCL) ಸರ್ಕಾರದ ಮಾರ್ಗಸೂಚಿಗಳನ್ನು ಒಳಗೊಂಡಂತೆ ಕಿಡ್ನಿ ಕಸಿಗಾಗಿ ಪ್ರತಿಯೊಂದು ಕಾನೂನು ಮತ್ತು ನೈತಿಕ ನಿಯಮಗಳನ್ನು ಅನುಸರಿಸುತ್ತದೆ ಎಂದು ಹೇಳಿದೆ. ಅದರೊಂದಿಗೆ ಕ್ಯಾಶ್ ಫಾರ್ ಕಿಡ್ನಿ ಸ್ಕ್ಯಾಮ್ನಲ್ಲಿ ತಮ್ಮ ಸಂಸ್ಥೆ ಭಾಗಿಯಾಗಿದೆ ಎನ್ನುವ ವರದಿಯನ್ನು ನಿರಾಕರಿಸಿದೆ. ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ನ ಭಾಗವಾಗಿರುವ ಈ ಆಸ್ಪತ್ರೆ, ಪ್ರತಿ ವಿದೇಶಿ ದಾನಿಯು ಕಸಿ ಮಾಡುವ ಮೊದಲು ದಾನಿ ಮತ್ತು ಸ್ವೀಕರಿಸುವವರಿಗೆ ನಿಜವಾಗಿಯೂ ಸಂಬಂಧವಿದೆ ಎಂದು ತಮ್ಮ ವಿದೇಶಿ ಸರ್ಕಾರಗಳಿಂದ ಪ್ರಮಾಣೀಕರಣವನ್ನು ಒದಗಿಸುವ ಅಗತ್ಯವಿದೆ ಎಂದು ಹೇಳಿದರು. "ಸ್ಪಷ್ಟವಾಗಿ ಹೇಳಬೇಕೆಂದರೆ, ಐಎಂಸಿಎಲ್ ಸರ್ಕಾರವು ನಿಗದಿಪಡಿಸಿದ ಎಲ್ಲಾ ಮಾರ್ಗಸೂಚಿಗಳು ಮತ್ತು ಅನುಸರಣೆ ನಿಯಮಗಳನ್ನು ಮಾತ್ರವಲ್ಲದೆ, ನಮ್ಮದೇ ಆದ ವ್ಯಾಪಕವಾದ ಆಂತರಿಕ ಪ್ರಕ್ರಿಯೆಗಳನ್ನು ಒಳಗೊಂಡಂತೆ ಕಸಿ ಕಾರ್ಯವಿಧಾನಗಳಿಗೆ ಪ್ರತಿ ಕಾನೂನು ಮತ್ತು ನೈತಿಕ ನಿಮಯಗಳನ್ನು ಅನುಸರಿಸುತ್ತದೆ" ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಆಸ್ಪತ್ರೆಯು 'ಕ್ಯಾಶ್ ಫಾರ್ ಕಿಡ್ನಿ' ದಂಧೆಯಲ್ಲಿ ತೊಡಗಿದ್ದು, ಮ್ಯಾನ್ಮಾರ್ನ ಬಡ ಜನರು ತಮ್ಮ ಅಂಗಾಂಗಗಳನ್ನು ಲಾಭಕ್ಕಾಗಿ ಮಾರಾಟ ಮಾಡಲು ಇದರಿಂದ ಪ್ರಲೋಭನೆಗೆ ಒಳಗಾಗುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿತ್ತು. ಈ ಕುರಿತಾದ ಪ್ರಶ್ನೆಗೆ ವಕ್ತಾರರು ಉತ್ತರ ನೀಡಿದ್ದಾರೆ.
ಇದಲ್ಲದೆ, ವಕ್ತಾರರು, "ಐಎಂಸಿಎಲ್ ವಿರುದ್ಧ ಇತ್ತೀಚಿನ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಮಾಡಿದ ಆರೋಪಗಳು ಸಂಪೂರ್ಣವಾಗಿ ಸುಳ್ಳು, ಮಾಹಿತಿಯಿಲ್ಲದ ಮತ್ತು ತಪ್ಪುದಾರಿಗೆಳೆಯುವಂತಿವೆ. ಎಲ್ಲಾ ಸಂಗತಿಗಳನ್ನು ಸಂಬಂಧಪಟ್ಟ ಪತ್ರಕರ್ತರೊಂದಿಗೆ ವಿವರವಾಗಿ ಹಂಚಿಕೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ. ಮೂತ್ರಪಿಂಡ ಕಸಿ ಕುರಿತು ಆಸ್ಪತ್ರೆಯ ಪ್ರಕ್ರಿಯೆಯನ್ನು ವಿವರಿಸಿದ ವಕ್ತಾರರು, ಐಎಂಸಿಎಲ್ ಪ್ರತಿ ದಾನಿಯು ತಮ್ಮ ದೇಶದಲ್ಲಿ ಸೂಕ್ತ ಸಚಿವಾಲಯದಿಂದ ನೋಟರೈಸ್ ಮಾಡಿದ ಫಾರ್ಮ್ 21 ಅನ್ನು ಒದಗಿಸುವ ಅಗತ್ಯವಿದೆ ಎಂದು ಹೇಳಿದರು.
ಶ್ವಾಸಕೋಶ ಸಾಗಿಸುತ್ತಿದ್ದ ಆಂಬುಲೆನ್ಸ್ ಅಪಘಾತ: ಗಾಯಗೊಂಡರೂ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾದ ವೈದ್ಯ
"ಈ ನಮೂನೆಯು ದಾನಿ ಮತ್ತು ಸ್ವೀಕರಿಸುವವರಿಗೆ ನಿಜವಾಗಿಯೂ ಸಂಬಂಧವಿದೆ ಎಂದು ವಿದೇಶಿ ಸರ್ಕಾರದಿಂದ ಪ್ರಮಾಣೀಕರಣವಾಗಿದೆ" ಎಂದು ವಕ್ತಾರರು ತಿಳಿಸಿದ್ದಾರೆ. ಅದಲ್ಲದೆ, ಐಎಂಸಿಎಲ್ನಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಕಸಿ ಅಧಿಕಾರ ಸಮಿತಿಯು ಪ್ರತಿ ಪ್ರಕರಣಕ್ಕೆ ದಾಖಲೆಗಳನ್ನು ಪರಿಶೀಲಿಸುತ್ತದೆ ಮತ್ತು ದಾನಿ ಮತ್ತು ಸ್ವೀಕರಿಸುವವರನ್ನು ಸಂದರ್ಶಿಸುತ್ತದೆ. ವಕ್ತಾರರ ಪ್ರಕಾರ, ಐಎಂಸಿಎಲ್ ದೇಶದ ಸಂಬಂಧಪಟ್ಟ ರಾಯಭಾರ ಕಚೇರಿಯೊಂದಿಗೆ ದಾಖಲೆಗಳನ್ನು ಮರು-ಮೌಲ್ಯೀಕರಿಸುತ್ತದೆ. ರೋಗಿಗಳು ಮತ್ತು ದಾನಿಗಳು ಜೆನೆಟಿಕ್ ಪರೀಕ್ಷೆ ಸೇರಿದಂತೆ ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುತ್ತಾರೆ. ದೆಹಲಿ ಮೂಲದ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಗಳು 710 ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ.
ಸಿನಿಮಾದಲ್ಲಿ ಸಂಪೂರ್ಣ ಬೆತ್ತಲಾದ್ರೆ ಹೀಗೂ ಆಗತ್ತಾ? 'ಅನಿಮಲ್' ನಟಿ ತೃಪ್ತಿ ದಿಮ್ರಿಗೆ ಡಬಲ್ ಧಮಾಕಾ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ