ಭಾರತದ ಫ್ಲೈಟ್‌ಗೆ ನೋ ಎಂಟ್ರಿ: ನಿಷೇಧ ಕಾಲಾವಧಿ ವಿಸ್ತರಿಸಿದ ಕೆನಡಾ

Suvarna News   | Asianet News
Published : Aug 10, 2021, 05:57 PM ISTUpdated : Aug 10, 2021, 07:09 PM IST
ಭಾರತದ ಫ್ಲೈಟ್‌ಗೆ ನೋ ಎಂಟ್ರಿ: ನಿಷೇಧ ಕಾಲಾವಧಿ ವಿಸ್ತರಿಸಿದ ಕೆನಡಾ

ಸಾರಾಂಶ

ಭಾರತದಿಂದ ಬರುವ ಫ್ಲೈಟ್‌ಗೆ ನೋ ಎಂಟ್ರಿ ಆಗಸ್ಟ್ 21ಕ್ಕೆ ಕೊನೆಗೊಳ್ಳಬೇಕಾಗಿದ್ದ ಬ್ಯಾನ್ ಮತ್ತೆ ವಿಸ್ತರಣೆ  

ದೆಹಲಿ(ಆ.10): ಕೊರೋನಾ ಎರಡನೇ ಅಲೆಯ ಸಂದರ್ಭ ಭಾರತದಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿದ್ದ ಭಾರತ ಈ ಬ್ಯಾನ್ ಮತ್ತೆ ವಿಸ್ತರಿಸಿದೆ. ಆಗಸ್ಟ್ 21ರಂದು ಈ ಬ್ಯಾನ್ ಕೊನೆಗೊಳ್ಳಬೇಕಿತ್ತು. ಆದರೆ ಸತತ 5ನೇ ಸಲಕ್ಕೆ ಭಾರತದಿಂದ ಕೆನಡಾಗೆ ಹೋಗುವ ವಾಣಿಜ್ಯ ಹಾಗೂ ಖಾಸಗಿ ವಿಮಾನಗಳ ಮೇಲಿನ ನಿಷೇಧವನ್ನು ಸೆ.21ರ ತನಕ ಮತ್ತೆ ವಿಸ್ತರಿಸಲಾಗಿದೆ. ಕೊರೋನಾ ವೈರಸ್‌ನ ಡೆಲ್ಟಾ+ ಪ್ರಕರಣಗಳ ಆತಂಕದಿಂದ ಈ ನಿಷೇಧ ವಿಸ್ತರಿಸಲಾಗಿದೆ.

ನಿಷೇಧವು ಆಗಸ್ಟ್ 21 ರಂದು ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು. ಏಪ್ರಿಲ್ 22 ರಂದು ಮೊದಲ ಬಾರಿಗೆ ನಿಷೇಧ ಹೇರಿದ ನಂತರ ಇತ್ತೀಚಿನ ಸೂಚನೆಯಲ್ಲಿ ಐದನೇ ಬಾರಿ ವಿಸ್ತರಣೆ ಮಾಡಲಾಗಿದೆ. ಏಪ್ರಿಲ್‌ನಲ್ಲಿ ಭಾರತದಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಭೀತಿಯಿಂದಾಗಿ ಕೆನಡಾದಲ್ಲಿ ಭಯ ಉಂಟಾಗಿತ್ತು. ಸಂಪೂರ್ಣ ಲಸಿಕೆ ಹಾಕಿದ ಯುಎಸ್ ನಾಗರಿಕರು ಮತ್ತು ಖಾಯಂ ನಿವಾಸಿಗಳ ಪ್ರವೇಶವನ್ನು ಸೋಮವಾರ ಸಡಿಲಗೊಳಿಸಿದಂತೆಯೇ, ನಿಷೇಧದ ಇತ್ತೀಚಿನ ವಿಸ್ತರಣೆಯನ್ನು ಕೆನಡಾ ಘೋಷಿಸಿದೆ. ಅಮೆರಿಕದಲ್ಲಿ ಪ್ರಸ್ತುತ 100,000 ಹೊಸ ಕರೋನವೈರಸ್ ಪ್ರಕರಣಗಳು ದಾಖಲಾಗಿದೆ.

ನರಕಕ್ಕಿಂತ ಕಡಿಮೆ ಇಲ್ಲ ಅಫ್ಘಾನಿಸ್ತಾನ, ದೇಶ ಬಿಡಲು ಬಯಸುವ ಭಾರತೀಯರು ಕೂಡಲೇ ಸಂಪರ್ಕಿಸಿ!

ಭಾರತದಿಂದ ಪ್ರಯಾಣದ ನಿರ್ಧಾರವು ಕೆನಡಾದ ಸಾರ್ವಜನಿಕ ಆರೋಗ್ಯ ಏಜೆನ್ಸಿಯ ಇತ್ತೀಚಿನ ಸಾರ್ವಜನಿಕ ಆರೋಗ್ಯ ಸಲಹೆಯನ್ನು ಆಧರಿಸಿದೆ ಎಂದು ಸಾರಿಗೆ ಕೆನಡಾ ಹೇಳಿದೆ. ಕೆನಡಾದ ಸರ್ಕಾರವು ಕೊರೋನಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದೆ. ಭಾರತ ಸರ್ಕಾರ ಮತ್ತು ವಾಯುಯಾನ ಆಪರೇಟರ್‌ಗಳೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದು, ಪರಿಸ್ಥಿತಿಗಳು ಅನುಮತಿಸಿದ ತಕ್ಷಣ ನೇರ ವಿಮಾನಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.

ದೇಶದಲ್ಲಿ ಕೊರೋನಾ ಪ್ರಕರಣಗಳು ಕಳೆದ 147 ದಿನಗಳಲ್ಲಿ ಮೊದಲ ಬಾರಿ ಇಳಿಮುಖವಾಗಿದೆ. ಆ.10ರಂದು  28,204 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 373 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 3,19,98,158ಕ್ಕೇರಿದ್ದು, ಒಟ್ಟು  428,682 ಕೊರೋನಾ ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್