
ನವದೆಹಲಿ (ಆ.28): ಉತ್ತರ ಪ್ರದೇಶದ ಬುಲಂದ್ಶೇಹರ್ನಲ್ಲಿ ಯುವಕನೊಬ್ಬ ಇನ್ಸ್ಟಾಗ್ರಾಮ್ನ ರೀಲ್ಸ್ ಸಲುವಾಗಿ ಬೆಕ್ಕು, ಇಲಿ ಸೇರಿದಂತೆ ಇತರ ಪ್ರಾಣಿಗಳನ್ನು ಗೋಣಿಚೀಲದಲ್ಲಿ ಹಾಕಿ ಅದನ್ನು ಗಾಳಿಯಲ್ಲಿ ಕೆಲಹೊತ್ತು ತಿರುಗಿಸಿ ನೆಲಕ್ಕೆ ಬಿಡುತ್ತಿದ್ದ. ಆ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಗಳಿಸಿದ್ದ ಈ ಯುವಕನ ಬಗ್ಗೆ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಸುರಭಿ ರಾವತ್ ಆಕ್ರೋಶ ವ್ಯಕ್ತಪಡಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಗಾಜಿಯಾಬಾದ್ನಲ್ಲಿ 'ಪೀಪಲ್ ಫಾರ್ ಅನಿಮಲ್ಸ್' ಎಂಬ ಸಂಘಟನೆಯ ಮುಖ್ಯಸ್ಥರಾಗಿರುವ ರಾವತ್, ವೀಡಿಯೊದಲ್ಲಿ ಕಂಡುಬರುವ ಯುವಕ ಉತ್ತರ ಪ್ರದೇಶದ ಬುಲಂದ್ಶಹರ್ನವರು ಎಂದು ಹೇಳಿದ್ದಾರೆ. ತನ್ನ ಪೋಸ್ಟ್ನಲ್ಲಿ, ವ್ಯಕ್ತಿಯು "ರೀಲ್ಗಳನ್ನು ತಯಾರಿಸುವ ಹೆಸರಿನಲ್ಲಿ" ಡಜನ್ಗಟ್ಟಲೆ ಪ್ರಾಣಿಗಳನ್ನು ಕೊಂದಿದ್ದಾನೆ ಎಂದೂ ಅವರು ಹೇಳಿದ್ದಾರೆ. ಉತ್ತರ ಪ್ರದೇಶ ಪೊಲೀಸರು ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ವ್ಯಕ್ತಿಯನ್ನು ಬಂಧಿಸಬೇಕು ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತ ಆಗ್ರಹಿಸಿದ್ದಾರೆ.
"ಬುಲಂದ್ಶಹರ್ನ ಈ ಹುಡುಗ ರೀಲ್ಗಳ ಹೆಸರಿನಲ್ಲಿ ಡಜನ್ಗಟ್ಟಲೆ ಪ್ರಾಣಿಗಳನ್ನು ಕೊಂದಿದ್ದಾನೆ. ಈ ವಿಷಯವನ್ನು ಅರಿತುಕೊಂಡು ಅವನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ವಿನಂತಿಸಲಾಗಿದೆ. ಹೀಗೆ ಮಾಡುವ ಈ ವ್ಯಕ್ತಿ ಮುಂದೊಂದು ದಿನ ರೀಲ್ಸ್ ಗೀಳಿಗಾಗಿ ಮನುಷ್ಯರನ್ನು ಸಾಯಿಸಿದರೂ ಅಚ್ಚರಿಯಿಲ್ಲ ಎಂದು ರಾವತ್ ಬರೆದಿದ್ದಾರೆ.
ಅದೇ ವೀಡಿಯೊವನ್ನು ಮತ್ತೊಬ್ಬ ಎಕ್ಸ್ ಯೂಸರ್ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಲೈಕ್, ಶೇರ್ಗಾಗಿ ಹಲವು ಪ್ರಾಣಿಗಳನ್ನು ಕೊಂದಿದ್ದಾನೆ ಎಂದೂ ಹೇಳಿದ್ದಾರೆ. ಶ್ವಾನ ಪ್ರೇಮಿ ವಿದಿತ್ ಶರ್ಮಾ ಕೂಡ ವ್ಯಕ್ತಿಯನ್ನು ಬಂಧಿಸಿ ಅಮಾನವೀಯ ಕೃತ್ಯಕ್ಕೆ ಶಿಕ್ಷೆ ವಿಧಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. "ಬುಲಂದ್ಶಹರ್ನ ಈ ಹುಡುಗ ಇನ್ಸ್ಟಾಗ್ರಾಮ್ನಲ್ಲಿ ಲೈಕ್ ಹಾಗೂ ವೀವ್ಸ್ ಪಡೆಯಲು ಹಲವಾರು ಪ್ರಾಣಿಗಳನ್ನು ಕೊಂದಿದ್ದಾನೆ. ಈ ಅಮಾನವೀಯ ಕೃತ್ಯಕ್ಕಾಗಿ ಅವನನ್ನು ಬಂಧಿಸಿ ಶಿಕ್ಷಿಸಬೇಕು. ಯಾರಾದರೂ ಇಷ್ಟು ಕ್ರೂರವಾಗಿರಲು ಹೇಗೆ ಸಾಧ್ಯ? ತಮಾಷೆ ಮತ್ತು ಸೋಶಿಯಲ್ ಮೀಡಿಯಾ ಖ್ಯಾತಿಗಾಗಿ ಪ್ರಾಣಿಗಳನ್ನು ಕೊಲ್ಲುವುದು ಸ್ವೀಕಾರಾರ್ಹವಲ್ಲ. ಇವುಗಳನ್ನು ನಾವು ನಿಲ್ಲಿಸಬೇಕಿದೆ. ಅಂತಹ ಕೃತ್ಯಗಳ ವಿರುದ್ಧ ಮತ್ತು ನ್ಯಾಯ ಪಡೆಯಬೇಕಿದೆ ”ಎಂದು ಶರ್ಮಾ ಪೋಸ್ಟ್ನಲ್ಲಿ ಬರೆದಿದ್ದಾರೆ.
ಪಕ್ಷ ಮೀರಿದ ಪ್ರೀತಿ: ಬಿಜೆಪಿ-ಕಾಂಗ್ರೆಸ್ ನಾಯಕರ ಮಕ್ಕಳ ನಿಶ್ಚಿತಾರ್ಥ
ಮತ್ತೊಬ್ಬ ಎಕ್ಸ್ ಯೂಸರ್ ಶಿವಾಂಶು ಪ್ರತಾಪ್ಗರ್ಹಿ, ವ್ಯಕ್ತಿಯ ಇನ್ಸ್ಟಾಗ್ರಾಮ್ ಪ್ರೊಫೈಲ್ ಅನ್ನು ತನ್ನ ವೀಡಿಯೊಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರು ಯುಪಿ ಪೊಲೀಸರನ್ನು ಟ್ಯಾಗ್ ಮಾಡಿದ್ದಲ್ಲದೆ, ಈ ವಿಡಿಯೋಗಳ ಮೂಲದ ಬಗ್ಗೆ ತಿಳಿದುಕೊಳ್ಳುವಂತೆ ತಿಳಿಸಿದ್ದಾರೆ. ಕೆಲವು ವೀಡಿಯೊಗಳಲ್ಲಿ ಪುನೀತ್ ರಜಪೂತ್ ಹೆಸರಿನ ವ್ಯಕ್ತಿ ತನ್ನ ಹಿಡಿತದಿಂದ ಪಕ್ಷಿಗಳನ್ನು ಬಿಡುಗಡೆ ಮಾಡುವುದನ್ನು ತೋರಿಸಿದರೆ, ಇನ್ನೂ ಕೆಲವು ವಿಡಿಯೋಗಳಲ್ಲಿ ಪ್ರಾಣಿಗಳನ್ನು ಗೋಣಿಚೀಲದಲ್ಲಿ ಹಾಕಿ ತಿರುಗಿಸುವುದನ್ನು ತೋರಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಅವರ ವೀಡಿಯೊಗಳಿಗೆ ಪ್ರತಿಕ್ರಿಯಿಸಿದ ಬುಲಂದ್ಶಹರ್ ಪೊಲೀಸರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ, "ಸೈಬರ್ ಅಪರಾಧದ ಪೊಲೀಸ್ ಠಾಣೆಯ ಉಸ್ತುವಾರಿಗೆ ತನಿಖೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ" ಎಂದು ಹೇಳಿದರು.
ಭೂಮಿಯ ಮೇಲಿಂದ ಪುರುಷ ಸಂತತಿಯೇ ನಾಶ! ಆತಂಕಕಾರಿ ಅಧ್ಯಯನ ವರದಿಯಲ್ಲಿ ಏನಿದೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ